ಬೆಳ್ತಂಗಡಿ : ಭಾರತೀಯ ಮಜ್ದೂರ್ ಸಂಘದೊಂದಿಗೆ ಸಂಯೋಜಿಸಲ್ಪಟ್ಟ ರಿಕ್ಷಾ ಚಾಲಕ ಮಾಲಕರ ಸಂಘ ಬೆಳ್ತಂಗಡಿ ಇದರ ಚಾಲಕರ ಆಪತ್ಕಾಲದ ಸಹಾಯಧನ ನೀಡಲು ಅಂಗೀಕರಿಸಿದ ಕ್ಷೇಮನಿಧಿ ಯೋಜನೆಯ ವತಿಯಿಂದ ವೇಣೂರು ರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯೆಯಾದ ಶ್ರೀಮತಿ ಗೀತಾ ಇವರು ರಿಕ್ಷಾ ಅಪಘಾತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪ್ರಸ್ತುತ ಮನೆಯಲ್ಲೇ ವಿಶ್ರಾಂತಿಯಲ್ಲಿರುವ ಕಾರಣ ಇವರಿಗೆ ಕ್ಷೇಮನಿಧಿಯ ಆಪತ್ಕಾಲದ 26ನೇ ಸಹಾಯಧನವಾಗಿ ರೂ. 3000 ಮೊತ್ತವನ್ನು ನೀಡಿ ಚಿಕಿತ್ಸೆಗೆ ಸಹಕರಿಸಲಾಯಿತು.
ಈ ಸಂದರ್ಭದಲ್ಲಿ ವೇಣೂರು ವಲಯದ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ವಸಂತ ಮಡಿವಾಳ, ಕಾರ್ಯದರ್ಶಿಗಳಾದ ರಾಜೇಂದ್ರ ಜೈನ್ , ಉಪಾಧ್ಯಕ್ಷ ದೇವದಾಸ್ ಮೂಡುಕೋಡಿ, ಸಂಘದ ಹಿರಿಯ ಸದಸ್ಯ ಯೋಗೀಶ್ ಪೂಜಾರಿ ನಾರ್ಲ ಮೂಡುಕೋಡಿ ಉಪಸ್ಥಿತರಿದ್ದರು.











