July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವೇಣೂರು: ಧೀಮಹಿ ಸನಾತನ ಪ್ರತಿಷ್ಠಾನದಿಂದ ಯಕ್ಷಗಾನ ಹಿಮ್ಮೇಳ  ತರಗತಿ ಆರಂಭ

ವೇಣೂರು: ವೇಣೂರಿನ ಮಹಾವೀರ ನಗರದಲ್ಲಿ ಇರುವ ಧೀಮಹಿ ಸನಾತನ ಪ್ರತಿಷ್ಠಾನದಿಂದ ನಡೆಸಲ್ಪಡುವ ಯಕ್ಷಗಾನ ಹಿಮ್ಮೇಳ  ತರಗತಿಯ ಉದ್ಘಾಟನೆಯನ್ನು ಮಾತೃಶ್ರೀ ಗೌರಮ್ಮನವರು ದೀಪ ಪ್ರಜ್ವಲಿಸುವ ಮೂಲಕ ಜೂ.22 ರಂದು ನೆರವೇರಿಸಿದರು.

ಧೀಮಹಿ ಸನಾತನ ಪ್ರತಿಷ್ಠಾನದ ಧ್ಯೇಯೋದ್ದೇಶಗಳನ್ನು ಪ್ರಸ್ತಾವಿಕ ನುಡಿಯಲ್ಲಿ ಸಂಚಾಲಕರಾದ ಯಜ್ಞನಾರಾಯಣ ಭಟ್ ವಿವರಿಸಿದರು. ಮುಖ್ಯ ಅತಿಥಿಗಳಾಗಿ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪಂಜಾಲಬೈಲು ಎನ್. ಪುರುಷೋತ್ತಮ ರಾವ್, ಭಾಸ್ಕರ ಪೈ ಹಾಗೂ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಪಾಣೂರು ಅಶೋಕ ಅವರು ಶುಭ ಹಾರೈಸಿದರು.


ಯಕ್ಷಗಾನ ತರಗತಿಯ ಗುರುಗಳಾಗಿ ಖ್ಯಾತ ಹಿಮ್ಮೇಳವಾದಕ ಕೊಂಕಣಾಜೆ ಚಂದ್ರಶೇಖರ ಭಟ್ ಅವರು ಬೋಧನಾ ಕ್ರಮದ ಬಗ್ಗೆ ಪರಿಚಯಿಸಿದರು. ರವಿಶಂಕರ ಭಟ್ ಬೆದ್ರಡ್ಕ ವಂದಿಸಿದರು. ಜಗನ್ನಾಥ ದೇವಾಡಿಗ ಹಂದೇವು ಕಾರ್ಯಕ್ರಮ ನಿರೂಪಿಸಿದರು.

ವೇಣೂರು ಸುತ್ತಮುತ್ತಲಿನ ನೂರಕ್ಕೂ ಅಧಿಕ ಯಕ್ಷಭಿಮಾನಿಗಳು ನೆರೆದಿದ್ದರು. ಹಿಮ್ಮೇಳ ಕಲಿಯಲು ಆಸಕ್ತರು ಕೊಂಕಣಾಜೆ ಚಂದ್ರಶೇಖರ ಭಟ್ಟರನ್ನು 91 90081 36127 ಸಂಪರ್ಕಿಸಬಹುದು.

Related posts

ಕುಂಟಿನಿ ಅಲ್-ಬುಖಾರಿ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

Suddi Udaya

ಕೆರೆಯಲ್ಲಿ ಸ್ನಾನಕ್ಕಿಳಿದ ಯುವಕ ಸಾವು

Suddi Udaya

ಸಿಯೋನ್ ಆಶ್ರಮದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಆರೋಗ್ಯ ಸೇವೆಯ ಬೆನ್ನೆಲುಬಾದ ಆಶಾ ಕಾರ್ಯಕರ್ತೆಯರಿಗೆ ನ್ಯಾಯ ನೀಡಿ: ಭಾರತೀಯ ಮಜ್ದೂರು ಸಂಘ ಆಗ್ರಹ

Suddi Udaya

ಇಂದು (ಫೆ.20) : ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ‘ಜೋಡು ಜೀಟಿಗೆ ನಾಟಕ

Suddi Udaya
error: Content is protected !!