
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನದ್ಯಾಂತ ಆರಿದ್ರಾ(ಆದ್ರೆ) ಮಳೆಯ ಆರ್ಭಟ ಮುಂದುವರಿದೆ. ನದಿ, ಹಳ್ಳಗಳು ತುಂಬಿ ಹರಿಯುತ್ತಿದ್ದು, ತಾಲೂಕಿನ ಶಿಶಿಲ ಗ್ರಾಮದ ಮತ್ಸ್ಯ ತೀರ್ಥ ಶ್ರೀ ಶಿಶಿಲೇಶ್ವರ ದೇವಸ್ಥಾನಕ್ಕೆ ಕಪಿಲ ನದಿ ದಿಗ್ಬಂದನ ಹಾಕಿದೆ.


ದೇವಾಲಯದ ಒಳಗೆ ನೀರು ನುಗ್ಗಿದೆ. ಜೂ.22 ರಿಂದ ಆರಿದ್ರಾ ಮಳೆಯ ಎಡೆಬಿಡದೆ ಸುರಿಯುತ್ತಿದೆ. ಕಳೆದ ಮೂರು ದಿನಗಳಿಂದ ವಿಪರೀತ ಮಳೆಯಾಗುತ್ತಿದೆ. ಕನ್ಯಾಡಿ ಗ್ರಾಮದ ಗುರುವಪ್ಪ ಪೂಜಾರಿಯವರು ಕೊಟ್ಟಿಗೆ ಹಾನಿಯಾಗಿದ್ದು ಮಳೆಯ ಆರ್ಭಟ ಮುಂದುವರೆದಿದೆ. ರಸ್ತೆಗಳು ಸರೋವರದ್ದಂತೆ ಆಗಿರುವ ದೃಶ್ಯಗಳು ಕಂಡು ಬಂದಿದ್ದು ಎಲ್ಲೆಂದರಲ್ಲಿ ನೀರೆ ಕಾಣುತ್ತಿದೆ.

ಈ ನಡುವೆ ವಿಪರೀತ ಮಳೆಯಾದರೂ ಶಾಲೆಗೆ ರಜೆ ನೀಡಬೇಕಿತ್ತು ಎಂಬ ಕೂಗು ಪೋಷಕರು ಕೇಳಿಬರುತ್ತಿದೆ.











