July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಹೆದ್ದಾರಿಯಲ್ಲಿ ತೆರೆದ ಚರಂಡಿಗಳು: ಸುದ್ದಿ ಉದಯ ಜನಧ್ವನಿ

ಉಜಿರೆ: ಉಜಿರೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಬದಿ ಸಾರ್ವಜನಿಕರು ಓಡಾಟ ನಡೆಸುವಲ್ಲಿ ಬಹಳಷ್ಟು ತೆರೆದ ಚರಂಡಿಗಳಿದ್ದು ಅಪಾಯದ ವಾತಾವರಣವನ್ನು ತಂದೊಡ್ಡಿದೆ.

ಚರಂಡಿ ನಿರ್ಮಾಣ ಕಾಮಗಾರಿ ಅಲ್ಲಲ್ಲಿ ನಡೆದಿದ್ದು ಹೆಚ್ಚಿನ ಕಡೆಗಳಲ್ಲಿ ಚರಂಡಿಗಳನ್ನು ಮುಚ್ಚಿಲ್ಲ, ಚರಂಡಿ ಪ್ರದೇಶಗಳಲ್ಲಿ ಸುಮಾರು 4 ಅಡಿ ಅಂತರದ ತೆರೆದ ಚರಂಡಿಗಳಿದ್ದು, ಪಾದಚಾರಿಗಳು ಬಿದ್ದು ಗಾಯಗೊಂಡ ಘಟನೆ ಇತ್ತೀಚಿಗೆ ಸೋಮಂತಡ್ಕದ ಪ್ರದೇಶದಲ್ಲಿ ನಡೆದಿದೆ.

ಉಜಿರೆ-ಚಾರ್ಮಾಡಿ ರಸ್ತೆಯ ಎಸ್.ಆರ್ ಬಾರ್ ಬಳಿಯ ಟೆಕ್ನೋ ಇಂಡಸ್ಟ್ರೀಸ್, ಗ್ಯಾರೇಜ್ ಮುಂಭಾಗದ 3,4 ಕಡೆಗಳಲ್ಲಿ ತೆರೆದ ಚರಂಡಿಗಳು ಇದ್ದು, ಸಮರ್ಪಕವಾದ ಬೀದಿ ದೀಪಗಳು ಇಲ್ಲದಿರುವ ಕಾರಣ ರಾತ್ರಿ ಹೊತ್ತು ಈ ಚರಂಡಿ ಮೇಲೆ ನಡೆದುಕೊಂಡು ಹೋಗುವುದು ಅಪಾಯವಾಗಿದೆ. ಈ ಚರಂಡಿಯ ನೀರು ನಿಡಿಗಲ್(ನೇತ್ರಾವತಿ) ನದಿಯನ್ನು ಸಂಪರ್ಕಿಸಿದ್ದು, ಬಾರ್ ಮುಂಭಾಗದಲ್ಲೇ ತೆರೆದ ಚರಂಡಿಗಳು ಇರುವ ಕಾರಣ ಕುಡುಕರು ಕುಡಿದ ಅಮಲಿನಲ್ಲಿ ತೇಲಾಡಿ ತೆರೆದ ಚರಂಡಿಯೊಳಗೆ ಬಿದ್ದರೆ ನಿಡಿಗಲ್(ನೇತ್ರಾವತಿ) ನದಿಯಲ್ಲಿ ಹುಡುಕುವ ಪ್ರಸಂಗ ನಡೆದೀತು.

ಈಗಾಗಲೇ ತಾಲೂಕಿನಲ್ಲಿ ಭಾರಿ ಪ್ರಮಾಣದಲ್ಲಿ ಶಂಕಿತ ಡೆಂಗೆ ಪ್ರಕರಣಗಳು ಕಂಡುಬಂದಿದ್ದು ತೆರೆದ ಚರಂಡಿ ಇರುವ ಪ್ರದೇಶಗಳ ಜನರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ತೆರೆದ ಚರಂಡಿ ಕುರಿತು ಆರೋಗ್ಯ ಇಲಾಖೆ, ಪಂಚಾಯಿತಿಗಳು ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸ.

Related posts

ಅಳದಂಗಡಿ: ಜನಮಂಗಳ ಕಾರ್ಯಕ್ರಮದಡಿ ವಿಲ್ ಚೇರ್ ವಿತರಣೆ

Suddi Udaya

ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಅಭಿನಂದನಾ ಸಭೆ

Suddi Udaya

ಪಡಂಗಡಿ ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ಉಳ್ತೂರು: ದರ್ಸ್ ವಾರ್ಷಿಕ ಮತ್ತು ಬೀಳ್ಕೊಡುಗೆ ಕಾರ್ಯಕ್ರಮ

Suddi Udaya

ರಕ್ತೇಶ್ವರಿ ಪದವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಅಶ್ವತ್ಥೋಪನಯನ ಹಾಗೂ ವಿವಾಹ ಕಾರ್ಯಕ್ರಮ

Suddi Udaya
error: Content is protected !!