22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಹೆದ್ದಾರಿಯಲ್ಲಿ ತೆರೆದ ಚರಂಡಿಗಳು: ಸುದ್ದಿ ಉದಯ ಜನಧ್ವನಿ

ಉಜಿರೆ: ಉಜಿರೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಬದಿ ಸಾರ್ವಜನಿಕರು ಓಡಾಟ ನಡೆಸುವಲ್ಲಿ ಬಹಳಷ್ಟು ತೆರೆದ ಚರಂಡಿಗಳಿದ್ದು ಅಪಾಯದ ವಾತಾವರಣವನ್ನು ತಂದೊಡ್ಡಿದೆ.

ಚರಂಡಿ ನಿರ್ಮಾಣ ಕಾಮಗಾರಿ ಅಲ್ಲಲ್ಲಿ ನಡೆದಿದ್ದು ಹೆಚ್ಚಿನ ಕಡೆಗಳಲ್ಲಿ ಚರಂಡಿಗಳನ್ನು ಮುಚ್ಚಿಲ್ಲ, ಚರಂಡಿ ಪ್ರದೇಶಗಳಲ್ಲಿ ಸುಮಾರು 4 ಅಡಿ ಅಂತರದ ತೆರೆದ ಚರಂಡಿಗಳಿದ್ದು, ಪಾದಚಾರಿಗಳು ಬಿದ್ದು ಗಾಯಗೊಂಡ ಘಟನೆ ಇತ್ತೀಚಿಗೆ ಸೋಮಂತಡ್ಕದ ಪ್ರದೇಶದಲ್ಲಿ ನಡೆದಿದೆ.

ಉಜಿರೆ-ಚಾರ್ಮಾಡಿ ರಸ್ತೆಯ ಎಸ್.ಆರ್ ಬಾರ್ ಬಳಿಯ ಟೆಕ್ನೋ ಇಂಡಸ್ಟ್ರೀಸ್, ಗ್ಯಾರೇಜ್ ಮುಂಭಾಗದ 3,4 ಕಡೆಗಳಲ್ಲಿ ತೆರೆದ ಚರಂಡಿಗಳು ಇದ್ದು, ಸಮರ್ಪಕವಾದ ಬೀದಿ ದೀಪಗಳು ಇಲ್ಲದಿರುವ ಕಾರಣ ರಾತ್ರಿ ಹೊತ್ತು ಈ ಚರಂಡಿ ಮೇಲೆ ನಡೆದುಕೊಂಡು ಹೋಗುವುದು ಅಪಾಯವಾಗಿದೆ. ಈ ಚರಂಡಿಯ ನೀರು ನಿಡಿಗಲ್(ನೇತ್ರಾವತಿ) ನದಿಯನ್ನು ಸಂಪರ್ಕಿಸಿದ್ದು, ಬಾರ್ ಮುಂಭಾಗದಲ್ಲೇ ತೆರೆದ ಚರಂಡಿಗಳು ಇರುವ ಕಾರಣ ಕುಡುಕರು ಕುಡಿದ ಅಮಲಿನಲ್ಲಿ ತೇಲಾಡಿ ತೆರೆದ ಚರಂಡಿಯೊಳಗೆ ಬಿದ್ದರೆ ನಿಡಿಗಲ್(ನೇತ್ರಾವತಿ) ನದಿಯಲ್ಲಿ ಹುಡುಕುವ ಪ್ರಸಂಗ ನಡೆದೀತು.

ಈಗಾಗಲೇ ತಾಲೂಕಿನಲ್ಲಿ ಭಾರಿ ಪ್ರಮಾಣದಲ್ಲಿ ಶಂಕಿತ ಡೆಂಗೆ ಪ್ರಕರಣಗಳು ಕಂಡುಬಂದಿದ್ದು ತೆರೆದ ಚರಂಡಿ ಇರುವ ಪ್ರದೇಶಗಳ ಜನರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ತೆರೆದ ಚರಂಡಿ ಕುರಿತು ಆರೋಗ್ಯ ಇಲಾಖೆ, ಪಂಚಾಯಿತಿಗಳು ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸ.

Related posts

ಉದ್ಯೋಗ ಕೊಡಿಸುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿ: ಕೊಯ್ಯೂರು ಮಲೆಬೆಟ್ಟು ನಿವಾಸಿ ಅಮೃತೇಶ್‌ ರಿಗೆ ರೂ.19.90 ಲಕ್ಷ ವಂಚನೆ

Suddi Udaya

ಕುತ್ಲೂರು: ಸೇತುವೆಗೆ ಅಡ್ದಲಾಗಿ ಬಿದ್ದಿದ್ದ ಮರದ ದಿಮ್ಮಿಯನ್ನು ತೆರವುಗೊಳಿಸಿದ ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ನ ಯುವಕರು

Suddi Udaya

ಬೆಳ್ತಂಗಡಿ ಬ್ಲಾಕ್ ಸಮಿತಿಗಳಿಗೆ ಲೋಕಸಭಾ ಚುನಾವಣಾ ಪ್ರಚಾರ ಸಮಿತಿ ಉಸ್ತುವಾರಿಯಾಗಿ ಶಾಹುಲ್ ಹಮೀದ್ ಕೆ.ಕೆ. ಹಾಗೂ ಲೋಕೇಶ್ವರಿ ವಿನಯಚಂದ್ರ ನೇಮಕ

Suddi Udaya

ಎಸ್.ಡಿ.ಎಂ ಅ. ಸೆಕೆಂಡರಿ ಶಾಲಾ ನೂತನ ಮುಖ್ಯೋಪಾಧ್ಯಾಯರಾಗಿ ವಿದ್ಯಾ ಟಿ. ಭಡ್ತಿ

Suddi Udaya

ಬಟ್ಲಡ್ಕ ಜಮಾಅತ್ ನ ಉರೂಸ್ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

Suddi Udaya

ಲಕ್ಷ್ಮೀ ಇಂಡಸ್ಟ್ರೀಸ್ “ಕನಸಿನ ಮನೆ” ವಾಮದಪದವು ಶಾಖೆ ಶುಭಾರಂಭ

Suddi Udaya
error: Content is protected !!