July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಹೆದ್ದಾರಿಯಲ್ಲಿ ತೆರೆದ ಚರಂಡಿಗಳು: ಸುದ್ದಿ ಉದಯ ಜನಧ್ವನಿ

ಉಜಿರೆ: ಉಜಿರೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಬದಿ ಸಾರ್ವಜನಿಕರು ಓಡಾಟ ನಡೆಸುವಲ್ಲಿ ಬಹಳಷ್ಟು ತೆರೆದ ಚರಂಡಿಗಳಿದ್ದು ಅಪಾಯದ ವಾತಾವರಣವನ್ನು ತಂದೊಡ್ಡಿದೆ.

ಚರಂಡಿ ನಿರ್ಮಾಣ ಕಾಮಗಾರಿ ಅಲ್ಲಲ್ಲಿ ನಡೆದಿದ್ದು ಹೆಚ್ಚಿನ ಕಡೆಗಳಲ್ಲಿ ಚರಂಡಿಗಳನ್ನು ಮುಚ್ಚಿಲ್ಲ, ಚರಂಡಿ ಪ್ರದೇಶಗಳಲ್ಲಿ ಸುಮಾರು 4 ಅಡಿ ಅಂತರದ ತೆರೆದ ಚರಂಡಿಗಳಿದ್ದು, ಪಾದಚಾರಿಗಳು ಬಿದ್ದು ಗಾಯಗೊಂಡ ಘಟನೆ ಇತ್ತೀಚಿಗೆ ಸೋಮಂತಡ್ಕದ ಪ್ರದೇಶದಲ್ಲಿ ನಡೆದಿದೆ.

ಉಜಿರೆ-ಚಾರ್ಮಾಡಿ ರಸ್ತೆಯ ಎಸ್.ಆರ್ ಬಾರ್ ಬಳಿಯ ಟೆಕ್ನೋ ಇಂಡಸ್ಟ್ರೀಸ್, ಗ್ಯಾರೇಜ್ ಮುಂಭಾಗದ 3,4 ಕಡೆಗಳಲ್ಲಿ ತೆರೆದ ಚರಂಡಿಗಳು ಇದ್ದು, ಸಮರ್ಪಕವಾದ ಬೀದಿ ದೀಪಗಳು ಇಲ್ಲದಿರುವ ಕಾರಣ ರಾತ್ರಿ ಹೊತ್ತು ಈ ಚರಂಡಿ ಮೇಲೆ ನಡೆದುಕೊಂಡು ಹೋಗುವುದು ಅಪಾಯವಾಗಿದೆ. ಈ ಚರಂಡಿಯ ನೀರು ನಿಡಿಗಲ್(ನೇತ್ರಾವತಿ) ನದಿಯನ್ನು ಸಂಪರ್ಕಿಸಿದ್ದು, ಬಾರ್ ಮುಂಭಾಗದಲ್ಲೇ ತೆರೆದ ಚರಂಡಿಗಳು ಇರುವ ಕಾರಣ ಕುಡುಕರು ಕುಡಿದ ಅಮಲಿನಲ್ಲಿ ತೇಲಾಡಿ ತೆರೆದ ಚರಂಡಿಯೊಳಗೆ ಬಿದ್ದರೆ ನಿಡಿಗಲ್(ನೇತ್ರಾವತಿ) ನದಿಯಲ್ಲಿ ಹುಡುಕುವ ಪ್ರಸಂಗ ನಡೆದೀತು.

ಈಗಾಗಲೇ ತಾಲೂಕಿನಲ್ಲಿ ಭಾರಿ ಪ್ರಮಾಣದಲ್ಲಿ ಶಂಕಿತ ಡೆಂಗೆ ಪ್ರಕರಣಗಳು ಕಂಡುಬಂದಿದ್ದು ತೆರೆದ ಚರಂಡಿ ಇರುವ ಪ್ರದೇಶಗಳ ಜನರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ತೆರೆದ ಚರಂಡಿ ಕುರಿತು ಆರೋಗ್ಯ ಇಲಾಖೆ, ಪಂಚಾಯಿತಿಗಳು ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸ.

Related posts

ಜೆಸಿಐ ಉಜಿರೆ ಸಿಟಿ ಘಟಕದ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್- ಕಾರ್ಯಕ್ರಮ

Suddi Udaya

ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ಬೆನಕ ಆಸ್ಪತ್ರೆಯ ವಿಸ್ತೃತ ಕಟ್ಟಡದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ

Suddi Udaya

ನಕ್ಸಲ್ ನಾಯಕ ರೂಪೇಶ್ 3 ದಿನ ಬೆಳ್ತಂಗಡಿ ಪೊಲೀಸ್ ಕಸ್ಟಡಿಗೆ

Suddi Udaya

ಮುಂಡಾಜೆ ಪ್ರೌಢಶಾಲೆಯಲ್ಲಿ ಹುತಾತ್ಮ ಮೋಹನ್ ದಾಸನ್ ರವರ ಭಾವಚಿತ್ರ ಅನಾವರಣ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ವಿದ್ಯಾರ್ಥಿಗಳ ಖೋ ಖೋ ಪಂದ್ಯಾಟ ಉದ್ಘಾಟನೆ

Suddi Udaya

ಜುಲೈ 12: ಬೆಳ್ತಂಗಡಿಯಲ್ಲಿ ರಾಷ್ಟ್ರೀಯ ಲೋಕ್ ಅದಾಲತ್‌,: ರಾಜಿ ಸಂದಾನದ ಮೂಲಕ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ಅವಕಾಶ

Suddi Udaya
error: Content is protected !!