July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗುಂಡೂರಿ: ಅವಾಚ್ಯ ಶಬ್ದಗಳಿಂದ ನಿಂದನೆ, ಹಲ್ಲೆ ಆರೋಪ: ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು

ಗುಂಡೂರಿ : ಇಲ್ಲಿಯ ಶಾಂತಿಗುಡ್ಡೆ ಎಂಬಲ್ಲಿ ಸುಭಾಷ್ ಪೂಜಾರಿ ಮನೆ ಬಳಿಯ ಗುಡ್ಡೆಯಲ್ಲಿ ಸೊಪ್ಪು ಕಡಿದು ತೆಂಗಿನ ಮರದ ಬುಡಕ್ಕೆ ತಂದು ಹಾಕುತ್ತಿದ್ದುದನ್ನು ಆಕ್ಷೇಪಿಸಿ ರಾಜು, ವಿನೋದ, ದೀಪಕ್ ರವರು ಸುಭಾಷ್ ಪೂಜಾರಿ ರವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ.ಎಂದು ಆರೋಪಿಸಿ ನೀಡಿದ ದೂರಿನಂತೆ ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿಜೂ.27ರಂದು ಪ್ರಕರಣ ದಾಖಲಾಗಿದೆ.


ಘಟನೆ ವಿವರ: ಜೂ.27 ರಂದು ಗುಂಡೂರಿ ಗ್ರಾಮದ ಶಾಂತಿಗುಡ್ಡೆ ಎಂಬಲ್ಲಿ ಸುಭಾಷ್ ಪೂಜಾರಿ ಎಂಬುವವರು ತನ್ನ ವಾಸದ ಮನೆಯಲ್ಲಿರುವ ಸಮಯ ರಾಜು ಮತ್ತು ಆತನ ಹೆಂಡತಿ ಶ್ರೀಮತಿ ವಿನೋದ ರವರು ಸುಭಾಷ್ ಪೂಜಾರಿ ಮನೆ ಬಳಿಯ ಗುಡ್ಡೆಯಲ್ಲಿ ಸೊಪ್ಪು ಕಡಿದು ಸುಭಾಷ್ ಪೂಜಾರಿ ಸ್ವಾಧೀನವಿರುವ ತೆಂಗಿನ ಮರದ ಬುಡಕ್ಕೆ ತಂದು ಹಾಕುತ್ತಿದ್ದುದನ್ನು ಕಂಡು ಸುಭಾಷ್ ಪೂಜಾರಿ ಆಕ್ಷೇಪಿಸಿದ್ದಕ್ಕೆ ರಾಜು ಎಂಬಾತನು ಸುಭಾಷ್ ಪೂಜಾರಿ ರವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ನಡೆಸಿ ಏಕಾಏಕಿಯಾಗಿ ರಾಜು, ವಿನೋದ ಮತ್ತು ಅವರ ಮಗನಾದ ದೀಪಕ್ ರವರುಗಳು ಸೇರಿ ದೊಣ್ಣೆಗಳಿಂದ ಸುಭಾಷ್ ಪೂಜಾರಿರವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿಸಲಾಗಿದೆ.ಹಲ್ಲೆಯಿಂದ ಸುಭಾಷ್ ಪೂಜಾರಿ ರವರಿಗೆ ಗಾಯಗಳಾಗಿದ್ದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಉಜಿರೆ ಬಾರ್ ಮುಂದೆ ನಿಲ್ಲಿಸಿದ ಬೈಕ್ ಕಳ್ಳತನ

Suddi Udaya

ಆ.8: ಅಡಿಕೆ ಕೃಷಿ ಕುರಿತು ಸಾಂಸ್ಥಿಕ ತರಬೇತಿ

Suddi Udaya

ಜೂ. 6: ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿ ಮತ್ತು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಆಶ್ರಯದಲ್ಲಿ ಕ್ರಾಂತಿವೀರ ಉಬಾರ್ ಮಂಜ ಬೈದ್ಯ ಪುಸ್ತಕ ಬಿಡುಗಡೆ

Suddi Udaya

ಭರತನಾಟ್ಯ ಶಾಸ್ತ್ರೀಯ ನೃತ್ಯದ ಜೂನಿಯ‌ರ್ ಗ್ರೇಡ್ ಪರೀಕ್ಷೆ: ಪ್ರಣೀತಾ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

Suddi Udaya

ತೆಂಕಕಾರಂದೂರು: ನಾಗರಪಂಚಮಿಯ ಪ್ರಯುಕ್ತ ನಾಗದೇವರಿಗೆ ಪಂಚಾಮೃತ ಅಭಿಷೇಕ

Suddi Udaya

ಬೆಳ್ತಂಗಡಿ ಧರ್ಮ ಪ್ರಾಂತ್ಯ ರಜತ ಸಂಭ್ರಮ: ವಿಧಾನ ಸಭಾ ಅಧ್ಯಕ್ಷ ಯು ಟಿ ಖಾದರ್ ಗೆ ಆಮಂತ್ರಣ

Suddi Udaya
error: Content is protected !!