September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಟಿಪ್ಪರ್ ಬಾಡಿಗೆ ವಿಚಾರದಲ್ಲಿ ಕೊಲೆ ಯತ್ನ ಆರೋಪ : ಇಬ್ಬರ ವಿರುದ್ಧ ಪ್ರತಿದೂರು ದಾಖಲು

ಬೆಳ್ತಂಗಡಿ : ಟಿಪ್ಪರ್ ವಾಹನದ ಬಾಡಿಗೆ ಹಣ ಕೇಳಲು ಹೋದವನ ಮೇಲೆ ಸೋಡಾ ಬಾಟಲ್ ಎಸೆದು ಕೊಲೆಗೆ ಯತ್ನಸಿದ ಪ್ರಕರಣದ ಆರೋಪದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜೂ.27 ರಂದು ಹಲ್ಲೆಗೊಳಗಾದ ಮಹಮ್ಮದ್ ತೌಸಿಫ್ ಸ್ನೇಹಿತ ನೀಡಿದ ದೂರಿನ ಮೇರೆಗೆ ರಹೀಂ ಮತ್ತು ಮಹಮ್ಮದ್ ಫೈಯಾಜ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣ ಸಂಬಂಧ ಮುನೀರ್ ಮತ್ತು ತೌಸಿಫ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜೂ.28 ರಂದು ರಹೀಂ ನೀಡಿದ ದೂರಿನ ಮೇರೆಗೆ BNS 2023 (U/s-115(2),118(1),351(2), r/w 3(5)) ಅಡಿಯಲ್ಲಿ ಪ್ರಕರಣ ದಾಖಲಾಗಿದೆ‌.

Oplus_131072

*ಪ್ರಕರಣ: ರಹೀಂ ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ಜೂ. 27 ರಂದು ರಹೀಂ ಮತ್ತು ಮಹಮ್ಮದ್ ಫಯಾಜ್ ರವರು ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಬೀಟಿಗೆ ಎಂಬಲ್ಲಿ ಮನ್ಸೂರ್ ಎಂಬವರ ಅಂಗಡಿ ಬಳಿ ನಿಂತುಕೊಂಡಿದ್ದಾಗ ಸಮಯ ಮಧ್ಯಾಹ್ನ 3 ಗಂಟೆಗೆ ರಿಡ್ಜ್ ಕಾರಿನಲ್ಲಿ ಮುನೀರ್ ಮತ್ತು ತೌಸಿಫ್ ರವರು ಬಂದು ಕಾರಿನಿಂದ ಇಳಿದು ಹಣದ ವ್ಯವಹಾರ ವಿಚಾರವಾಗಿ ಹಣವನ್ನು ಯಾವಾಗ ಕೊಡುತ್ತಿಯ ಎಂದು ಹೇಳಿ ತೌಸಿಫ್ ಎಂಬಾತನು ರಹೀಂಗೆ ಕೈಯಿಂದ ಬೆನ್ನಿಗೆ, ಮುಖಕ್ಕೆ ಹೊಡೆದಿರುತ್ತಾನೆ, ಆ ಸಮಯ ಮಹಮ್ಮದ್ ಫಯಾಜ್ ನು ತೌಸಿಫ್ ನನ್ನು ಹಿಡಿದುಕೊಂಡು ಹೊಡೆಯಬೇಡ ಎಂದು ಹೇಳುತ್ತಿರುವ ಸಮಯ ಮುನೀರ್ ಎಂಬಾತನು ರಾಡ್ ನಿಂದ ರಹೀಂ ತಲೆಯ ಹಣೆಗೆ ಹೊಡೆದು ರಕ್ತ ಗಾಯವಾಗಿರುತ್ತದೆ. ನಂತರ ಮುನೀರ್ ನು ಕೈಯಿಂದ ರಹೀಂ ಬೆನ್ನಿಗೆ ಗುದ್ದಿ ನೋವಾಗಿದ್ದು, ನಂತರ ಮಹಮ್ಮದ್ ಫಯಾಜ್ ನಿಗೆ ಮುನೀರ್ ಮತ್ತು ತೌಸಿಫ್ ಕೈಯಿಂದ ಬೆನ್ನಿಗೆ ಹೊಡೆದು ನೋವುಂಟು ಮಾಡಿರುತ್ತಾರೆ. ನಂತರ ಅಲ್ಲಿ ಜನರು ಸೇರಿದ್ದು ಅಲ್ಲಿಂದ ರಹೀಂ ಮತ್ತು ಫಯಾಜ್ ರವರು ಹೋಗುವಾಗ ಮುನೀರ್ ಮತ್ತು ತೌಸಿಫ್ ನು ರಹೀಂ ಉದ್ದೇಶಿಸಿ “ನಿನಗೆ ಒಂದು ಗತಿ ಕಾಣಿಸುತ್ತೇನೆ” ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Related posts

ಎ.14: ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಆದಿತ್ಯ ನಾರಾಯಣ ಕೊಲ್ಲಾಜೆ ನಾಮಪತ್ರ ಸಲ್ಲಿಕೆ

Suddi Udaya

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ವಿಜೃಂಭಣೆಯ ಗಣೇಶೋತ್ಸವ

Suddi Udaya

ಐಸ್ ಹಾಕಿ ರಾಷ್ಟ್ರೀಯ ಚಾಂಪಿಯನ್‌ಶಿಪ್: ಕುತ್ಲೂರಿನ ನಿಷ್ಕ್ ಹರೀಶ್ ಸಾಲಿಯಾನ್‌ಗೆ ರಾಷ್ಟ್ರೀಯ ಬೆಳ್ಳಿ ಪದಕ

Suddi Udaya

ಗ್ರಾಮಕರಣಿಕ ಮಹೇಶ್ ಗೆ ಜೈಲು ಶಿಕ್ಷೆ

Suddi Udaya

ಬಳ್ಳಮಂಜ 26ನೇ ವರ್ಷದ “ಶೇಷ – ನಾಗ” ಜೋಡುಕರೆ ಕಂಬಳ ಕೂಟದ ಫಲಿತಾoಶ

Suddi Udaya

ಐಸಮ್ಮರವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಉಚಿತ ವೀಲ್ ಚೇರ್ ವಿತರಣೆ

Suddi Udaya
error: Content is protected !!