September 6, 2026
ಗ್ರಾಮಾಂತರ ಸುದ್ದಿ

ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಕ್ಷಗಾನ ಸೆಮಿ ಕ್ಲಾಸಿಕಲ್ ನಾಟಕ ಪಾಶ್ಚಾತ್ಯ ನೃತ್ಯ ತರಬೇತಿಗಳ ಉದ್ಘಾಟನೆ

ಧರ್ಮಸ್ಥಳ : ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕಲಾ ಕೇಂದ್ರದ ಸಹಯೋಗದಲ್ಲಿ ನಾಟಕ ಯಕ್ಷಗಾನ ಸೆಮಿ ಕ್ಲಾಸಿಕಲ್ ಹಾಗೂ ಪಶ್ಚಿಮಾತ್ಯ ಶೈಲಿಯ ನೃತ್ಯ ತರಬೇತಿಯ ಉದ್ಘಾಟನಾ ಸಮಾರಂಭ ನೆರವೇರಿತು.

ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕಲಾ ಕೇಂದ್ರದ ಸಂಚಾಲಕಿ ತೃಪ್ತ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕಲಾಕೇಂದ್ರದ ವತಿಯಿಂದ ನಿರ್ವಹಿಸುವ ಈ ತರಭೇತಿಯ ಸದುಪಯೋಗಪಡಿಸಿಕೊಳ್ಳಿ, ಹಾಗೂ ಈ ಎಲ್ಲಾ ತರಬೇತಿಗಳ ಪ್ರಯೋಜನ ಏನು ಇತ್ಯಾದಿ ವಿಚಾರಗಳನ್ನು ತಿಳಿಯಪಡಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಅವಕಾಶವನ್ನು ಬಳಸುವ ಬಗ್ಗೆ,ಪ್ರತಿಭೆಗೆ ನೀರೆರೆದು ಪೋಷಿಸುವ ಬಗ್ಗೆ, ಪಠ್ಯೇತರ ಚಟುವಟಿಕೆಗಳ ಅಗತ್ಯ ಹಾಗೂ ಅವುಗಳ ಪ್ರಯೋಜನ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಗತ್ಯಗಳನ್ನು ವಿವರಿಸಿದರು. ತೇಜಸ್ ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ ಕುಮಾರಿ ಅನುಜ್ಞಾ ಸ್ವಾಗತಿಸಿ, ಕುಮಾರಿ ಕಲ್ಪಿತ ಧನ್ಯವಾದವಿತ್ತರು.

ಕಾರ್ಯಕ್ರಮದಲ್ಲಿ ಯಕ್ಷಗಾನ ತರಬೇತಿದಾರರಾಗಿ ಅರುಣ್ ಕುಮಾರ್, ನಾಟಕ ತರಬೇತಿದಾರರಾಗಿ ಯಶವಂತ್ ಬೆಳ್ತಂಗಡಿ, ಪಾಶ್ಚಿಮಾತ್ಯ ನೃತ್ಯ ತರಬೇತಿದಾರರಾಗಿ ವಿನ್ಯಾಸ್, ಸೆಮಿ ಕ್ಲಾಸಿಕಲ್ ನೃತ್ಯ ತರಬೇತುದಾರರಾಗಿ ಶ್ರೀಮತಿ ಚೈತ್ರ,ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Related posts

ವೇಣೂರು : ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ ಹೆಲಿಕಾಪ್ಟರ್ ಮೂಲಕ ಪುಪ್ಷವ್ರಷ್ಟಿ

Suddi Udaya

ವಾಣಿ ಪ.ಪೂ. ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

Suddi Udaya

ಶಿರ್ಲಾಲು: ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಅಶೋಧರ ಸಾಲಿಯಾನ್ ನಿಧನ

Suddi Udaya

ಬಳಂಜದಲ್ಲಿ ಟಿಪ್ಪರ್ ಪತ್ತೆ: ವೇಣೂರು ಪೊಲೀಸ್ ಠಾಣೆಗೆ ದೂರು

Suddi Udaya

ಅಳದಂಗಡಿ ವಿಠಲದಾಸ್ ನಿಧನ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಹೇಂದ್ರ ಕಂಪನಿಯ ಹೊಸ ಮಾದರಿಯ ಕಾರು ಕೊಡುಗೆ

Suddi Udaya
error: Content is protected !!