22.6 C
ಪುತ್ತೂರು, ಬೆಳ್ತಂಗಡಿ
July 23, 2026
Uncategorized

ಮಂಜ್ಜೊಟ್ಟಿ ಹೋಲಿ ಕ್ರಾಸ್ ಚರ್ಚ್ ನಲ್ಲಿ “ಲಾವ್ದಾತೊ ಸಿ ಭಾನುವಾರ -2025”- ಪರಿಸರ ದಿನಾಚರಣೆ

ಮಂಜ್ಜೊಟ್ಟಿ: ಹೋಲಿ ಕ್ರಾಸ್ ಚರ್ಚ್, ಮಂಜ್ಜೊಟ್ಟಿಯಲ್ಲಿ ಇಂದು ( ಜುಲೈ 7) ಬೆಳಿಗ್ಗೆ 10 ಗಂಟೆಗೆ ಸರಿಯಾಗಿ “ಲಾವ್ದಾತೊ ಸಿ ಭಾನುವಾರ -2025”– ಪರಿಸರ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರ್ಚಿನ ಧರ್ಮಗುರುಗಳು ವಂದನೀಯ ಫಾ| ಪಾವ್ಲ್ ಸೆಬಾಸ್ಟಿಯನ್ ಡಿಸೋಜರವರು ವಹಿಸಿ, ಸಾಂಕೇತಿಕ ರೀತಿಯಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, “ಪ್ರತಿಯೊಬ್ಬರು ಪ್ರಕೃತಿ- ಸಂಮೃದ್ದಿಯ ಕಡೆಗೆ ತಮ್ಮ ಕೊಡುಗೆಯನ್ನು ನೀಡಬೆಕೇಂದು ಕರೆ ನೀಡಿದರು.”

ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಮಾರ್ಕ್ ಡಿಸೋಜ, ಹಾಗೂ ಕಾರ್ಯದರ್ಶಿಯಾದ ಶ್ರೀಮತಿ ಐರಿನ್ ಸಿಕ್ವೇರಾ, 21 ಆಯೋಗದ ಸಂಯೋಜಕರಾದ ವಿನೋದ್ ಪಿಂಟೊ, ಪರಿಸರ ಆಯೋಗದ ಸಂಚಲಕರಾದ ಲ್ಯಾನ್ಸಿ ಲೋಬೊ, ಕಥೊಲಿಕ್ ಸಭಾ ಅಧ್ಯಕ್ಷರಾದ ಕ್ಲೇವಿನ್ ಮಿರಾಂದಾ ಮತ್ತು ಐಸಿವೈಮ್ ಸಂಘಟನೆಯ ಸದಸ್ಯರು ಹಾಜರಿದ್ದು ಎಲ್ಲರ ಸಹಯೋಗದೊಂದಿಗೆ ಕಾರ್ಯಕ್ರಮವು ಅಚ್ಚುಕಟ್ಟಾಗಿ ನೆರವೇರಿತು.

ಈ ದಿನದ ಪ್ರಮುಖ ಭಾಗವಾಗಿ “ಮನೆಗೊಂದು ಗಿಡ, ಕುಟುಂಬಕೊಂದು ಮರ” ಎಂಬ ಧ್ಯೇಯವಾಕ್ಯದೊಂದಿಗೆ ಪ್ರತೀ ಕುಟುಂಬಕೊಂದು ಹಲಸು, ಹೆಬ್ಬಲಸು, ನೇರಳೆ, ಪುನರ್ಪಳಿ ಮತ್ತು ರಂಬುಟನ್ ಹೀಗೆ ವಿವಿಧ ಜಾತಿಯ ಗಿಡಗಳನ್ನು ವಿತರಿಸಲಾಯಿತು. .

Related posts

ಬೆಳ್ತಂಗಡಿ ತಾಲೂಕಿನ ಅಲ್ಲಲ್ಲಿ ಮಳೆ

Suddi Udaya

ಅರಸಿನಮಕ್ಕಿ: ಪುರೋಹಿತ ಅನಂತ ವೀರೇಶ್ವರ ತಾಮ್ಹನ್ಕಾರ್ ನಿಧನ

Suddi Udaya

ರಕ್ತೇಶ್ವರಿಪದವು ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಬೆಳ್ಳಿ ಹಬ್ಬ

Suddi Udaya

ಅಳದಂಗಡಿ ಅಜಿಲ ಸೀಮೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರನ್ನು ಭೇಟಿಯಾದಸೆ.12ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿರುವ ಕನ್ನಡ ಚಲನ ಚಿತ್ರ ರಾನಿ – RONNY‌ದ ನಿರ್ಮಾಪಕರಾದ ಉಮೇಶ್ ಹೆಗ್ಡೆ

Suddi Udaya

ಗುರುವಾಯನಕೆರೆಯಲ್ಲಿಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನ ಸಮಾವೇಶಕ್ಕೆ ಹಾಕಲಾಗಿದ್ದ ಬ್ಯಾನರ್ ಹರಿದು ಹಾಕಿದ ಕಿಡಿಗೇಡಿಗಳು

Suddi Udaya

ಎರ್ಡೂರು ನಿರಂಜನ್ ರಾವ್ ನಿಧನ

Suddi Udaya
error: Content is protected !!