
ಮುಂಡಾಜೆ: ಯುವ ವಾಹಿನಿ ಸಂಚಲನಾ ಮುಂಡಾಜೆ ಸಮಿತಿ ವತಿಯಿಂದ ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ ಯಲ್ಲಿ 500ಕ್ಕಿಂತ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆಯ ಕಾರ್ಯಕ್ರಮವು ಜು.6 ರಂದು ಮುಂಡಾಜೆ ಗ್ರಾ.ಪಂ. ಸಭಾ ಭವನದಲ್ಲಿ ಕೇಶವ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಯುವವಾಹಿನಿ ಬೆಳ್ತಂಗಡಿ ಘಕಟದ ಅಧ್ಯಕ್ಷ ಗುರುರಾಜ್ ಗುರಿಪಳ್ಳ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಮಿತಿಯ ಗೌರವಾಧ್ಯಕ್ಷ ಬಾಬು ಪೂಜಾರಿ, ಸಂಚಾಲಕ ಗಣೇಶ್ ಬಂಗೇರ ಕೂಳೂರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಜಿತಿಕ್ಷಾ ಸ್ವಾಗತಿಸಿದರು. ನಿಶ್ಮಿತಾ ನಿರೂಪಿಸಿ, ಯಶೋಧರ ಪೂಜಾರಿ ವಂದಿಸಿದರು.













