28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಧರ್ಮಸ್ಥಳ: 22ನೇ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಯ ಫಲಿತಾಂಶ

ಧರ್ಮಸ್ಥಳ : 2024-25ನೆಯ ವರ್ಷದಲ್ಲಿ ಶ್ರೀ ಧ. ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್(ರಿ.) (ಗಿನ್ನೆಸ್ ಪ್ರಶಸ್ತಿ ಪುರಸ್ಕೃತ ಸಂಸ್ಥೆ) ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ “ನಮ್ಮೂರ ಜಾತ್ರೆಗಳು” ಎಂಬ ವಿಷಯದ ಕುರಿತು 22ನೆಯ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆ ನಡೆಸಿದ್ದು, ಈ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿಯನ್ನು ನೀಡಿದೆ.

ಅಂಚೆ-ಕುಂಚ ಸ್ಪರ್ಧೆಯಲ್ಲಿ 4 ವಿಭಾಗಗಳಿಂದ ಒಟ್ಟು 2380 ಸ್ಪರ್ಧಾಳುಗಳು ಭಾಗವಹಿಸಿರುತ್ತಾರೆ. ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳಲ್ಲದೆ ಪ್ರತಿ ವಿಭಾಗಗಳಿಂದ 10 ಪ್ರೋತ್ಸಾಹಕರ ಕುಂಚ ಕಲಾವಿಧರನ್ನು ಆಯ್ಕೆ ಮಾಡಲಾಗಿದೆ. ಡಾ. ಡಿ. ವಿರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆ ಹಾಗೂ ಅತಿಥಿಗಳ ಸಮ್ಮುಖದಲ್ಲಿ ಕುಂಚ ಕಲಾವಿದರನ್ನು ಗೌರವ ಧನ, ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದ ದಿನಾಂಕ ಹಾಗೂ ಸ್ಥಳವನ್ನು ವಿಜೇತರಿಗೆ ದೂರವಾಣಿ ಮೂಲಕ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್ ತಿಳಿಸಿರುತ್ತಾರೆ.

22ನೆಯ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಯ ಫಲಿತಾಂಶ : “ನಮ್ಮೂರ ಜಾತ್ರೆಗಳು”

ಪ್ರಾಥಮಿಕ ಶಾಲಾ ವಿಭಾಗ: ಪ್ರಥಮ : ಕು. ಸಾನ್ವಿ ಎನ್. ಎಸ್, ಸ.ಮಾ.ಹಿ.ಪ್ರಾ. ಶಾಲೆ, ಪಂಜ, ಸುಳ್ಯ ತಾಲೂಕು ದ್ವಿತೀಯ : ಕು. ನಿಹಾರ್ ಜೆ.ಎಸ್, ಜಿ. ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ, ತೃತೀಯ : ಕು. ನಿಧಿಶ್ ಜೆ. ನ್ಯಾಕ್, ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ,

ಪ್ರೌಢಶಾಲಾ ವಿಭಾಗ:– ಪ್ರಥಮ : ಕು. ಅದಿತ್, ಕೆನರಾ ಹಿ.ಪ್ರಾ. ಶಾಲೆ, ಉರ್ವ, ಮಂಗಳೂರು, ದ್ವಿತೀಯ : ಕು. ದ್ರಿತಿ ಸಂತೋಷ್ ಪೂಜಾರಿ, ಲಿಟ್ಸ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ, ತೃತೀಯ : ಕು. ಅವನಿ ಎ. ಅರಿಗ: ಶ್ರೀ ಲಕ್ಷ್ಮೀ ಜನಾರ್ಧನ ಇಂಟರನ್ಯಾಷನಲ್ ಸ್ಕೂಲ್, ಬೆಳ್ಳಣ್ಣು, ಕಾರ್ಕಳ ತಾಲೂಕು

ಕಾಲೇಜು ವಿಭಾಗ:- ಪ್ರಥಮ : ಕು. ಅನುಪ ಶ್ರೀನಿವಾಸ ವಂದಿಗೆ, ಟಾಗೋರಾ ಚಿತ್ರಕಲಾ ಮಹಾ ವಿದ್ಯಾಲಯ, ಅಂಕೋಲಾ ದ್ವಿತೀಯ : ಕು. ಶರಣ್ಯ ತಂತ್ರಿ, ಮಾಧವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್, ಟೆಕ್ನಲಜಿ & ಮ್ಯಾನೇಜ್‌ಮೆಂಟ್, ಉಡುಪಿ ತೃತೀಯ : ಕು. ಚಂದನಾ ಪಾಂಡುರಂಗ ನಾಯ್ಕ, ದಿ. ನ್ಯೂ ಇಂಗ್ಲೀಷ್ ಪ.ಪೂ. ಕಾಲೇಜ್ ಅಯೋಧ್ಯಾನಗರ, ಭಟ್ಕಳ.

ಸಾರ್ವಜನಿಕ ವಿಭಾಗ: ಪ್ರಥಮ : ಬಿ.ಕೆ. ಮಾಧವ ರಾವ್, ಮಂಗಳೂರು. ದ್ವಿತೀಯ : ಶ್ರೀ ಈರಣ್ಣ ಕನಿಕಟ್ಟಾ ಪದವು, ತೆಂಕ್ಯಾಕಾರ್, ಪೆರ್ಮುಡೆ ಅಂಚೆ, ಮಂಗಳೂರು ತೃತೀಯ : ನಾಗರಾಜ ಆರ್. ಭಟ್, ದೀಪಾಂಜಲಿನಗರ, ಬೆಂಗಳೂರು

Related posts

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರವರಿಗೆ ನಿಡ್ಲೆ ಅಗ್ರಿಲೀಫ್ ಸಂಸ್ಥೆಯ ಉತ್ಪನ್ನವನ್ನು ನೀಡಿದ ಅವಿನಾಶ್ ರಾವ್

Suddi Udaya

ಅಯೋಧ್ಯೆ ಸಂಭ್ರಮಾಚರಣೆ ಸಂದರ್ಭ ಬಡಗಕಾರಂದೂರು ಗ್ರಾಮದ ಬಿಕ್ಕಿರ ನಿವಾಸಿಗಳಿಂದ ತಮ್ಮ ವಾಸಸ್ಥಳದ ಪರಿಸರವನ್ನು ರಾಮನಗರ ಎಂಬ ನಾಮಕರಣ

Suddi Udaya

ರಹ್ಮಾನಿಯಾ ಜುಮ್ಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್ ಕಾಜೂರು ಇದರ ಮಹಾಸಭೆ: ಆಡಳಿತ ಮಂಡಳಿಗೆ ಮತದಾನ; 11 ಮಂದಿ ನಿರ್ದೇಶಕರ ಆಯ್ಕೆ

Suddi Udaya

ಕನ್ಯಾಡಿ ಸೇವಾಭಾರತಿಯಿಂದ ದ.ಕ. ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಭೇಟಿ

Suddi Udaya

ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ ಸಂತೋಷ್ ಕಡಬ ಬೆಂಗಳೂರು ಪೊಲೀಸ್ ವಶಕ್ಕೆ

Suddi Udaya

ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ವಾರ್ಷಿಕೋತ್ಸವ ಎಕ್ಸೆಲಿಯಾ-2025 ಕಾರ್ಯಕ್ರಮದ ಉದ್ಘಾಟನೆ:ಶಿಕ್ಷಣದ ಜೊತೆ ಸಮಾಜಕ್ಕೆ ಪ್ರೇರಣದಾಯಕ ಕೆಲಸ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಿ: ಡಾ. ಎಚ್. ಮಾಧವ ಭಟ್:ಪ್ರಾಮಾಣಿಕ ಉದ್ದೇಶದಿಂದ ಎಕ್ಸೆಲ್ ಟೆಕ್ನೊ ಸ್ಕೂಲ್ ಆರಂಭ ಮಾಡಿದ್ದೇವೆ: ಸುಮಂತ್ ಕುಮಾರ್ ಜೈನ್

Suddi Udaya
error: Content is protected !!