ಬೆಳ್ತಂಗಡಿ : ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಕ್ಕಿಲ ಇಲ್ಲಿ ಲಯನ್ಸ್ ಅಮೃತ ಬಿಂದು ಸೇವಾ ಯೋಜನೆ ಯಡಿಯಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಉಪಾಧ್ಯಕ್ಷ ಲಯನ್ ಸುರೇಶ್ ಶೆಟ್ಟಿ ಲಾಯಿಲ ಹಾಗೂ ಸೇವಾ ವಿಭಾಗದ ಸಂಯೋಜಕರಾದ ಲಯನ್ ರವೀಂದ್ರ ಶೆಟ್ಟಿ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ನಿಶಾ ಕುಮಾರಿ ಲಯನ್ಸ್ ಕ್ಲಬ್ಬಿನ ಪ್ರಥಮ ಮಹಿಳೆ ಲಯನ್ ಮನೋರಮ ಎಂ ಬಲಿಪ ಉಪಸ್ಥಿತರಿದ್ದರು. ಮಂದಾರ ಬಲಿಪ ಸಹಕರಿಸಿದರು.











