25.5 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗದ್ದೆಯಿಂದ ನೇಜಿ ತೆಗೆದು ತಾವೇ ನಾಟಿ ಮಾಡಿದ ಮಕ್ಕಳು: ಕೊಯ್ಯೂರು ಸರಕಾರಿ ಶಾಲೆಯ 70 ಮಕ್ಕಳಿಗೆ ಕೃಷಿ ಪಾಠದ ಸಂಭ್ರಮ ; ಶಿಕ್ಷಕರ, ಪೋಷಕರ ಸಾಥ್

ಕೊಯ್ಯೂರು: ಕೊಯ್ಯರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ತಾವೇ ನೇಜಿ ತೆಗೆದು ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ನಿಜವಾದ ಕೃಷಿಯ ಸಂಭ್ರಮವನ್ನು ಅನುಭವಿಸಿದರು.

ಶಾಲೆಯಿಂದ ಅರ್ಧ ಕಿ.ಮೀ. ದೂರದಲ್ಲಿರುವ ಶಾಂತಿಮಾರುವಿನ ನೀಲಮ್ಮ ಅವರ ಗದ್ದೆಯಲ್ಲಿ jಜು. 10 ರಂದು ನಡೆದ ಪ್ರಾತ್ಯಕ್ಷಿಕೆಯಲ್ಲಿ ಆರು ಮತ್ತು ಏಳನೇ ತರಗತಿಯ 70 ಮಕ್ಕಳು ಭಾಗವಹಿಸಿ, ಕೃಷಿ ಜ್ಞಾನ, ವ್ಯವಹಾರ ಜ್ಞಾನ ಮತ್ತು ವಿಜ್ಞಾನವನ್ನು ಏಕಕಾಲದಲ್ಲಿ ಕಲಿತರು. ಶಾಲಾ ಮುಖ್ಯ ಶಿಕ್ಷಕ ಬಳಿರಾಮ ಲಮಾಣಿ ಮಕ್ಕಳಿಗೆ ಬದುಕಿನ ಪಾಠ ಕಲಿಸುವಲ್ಲಿ ಮುಂಚೂಣಿಯಲ್ಲಿದ್ದರು. ಶಿಕ್ಷಕರು. ಮಕ್ಕಳ ಪೋಷಕರು ಇವರೊಂದಿಗೆ ಸಾಥ್ ನೀಡಿದರು.

ಈ ವೇಳೆ ಗದ್ದೆಯ ಮಾಲಕಿ ನೀಲಮ್ಮ ಅವರನ್ನು ಸಮ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕೃತರಾದ ಕುಶಾಲಪ್ಪ ಗೌಡ ಕಾಂತಿಮಾರು, ಜಯಾನಂದ ಗೌಡ ಶಾಂತಿಮಾರು, ಶಿವಪ್ಪ ಗೌಡ ಸಾದೂರು, ಸ್ಥಳೀಯರಾದ ವೆಂಕಣ್ಣ ಕೊಯ್ಯರು, ಉಮೇಶ್ ನೇಕಾರ, ವಸಂತ ನೇಕಾರ, ಕುಶಾಲಪ್ಪ ಗೌಡ ಬೊಟ್ಟು ತಿಮ್ಮ ಪಾಡನ ಕಲಾವಿದೆ ಗುಲಾಬಿ ಬಜಿಲ, ಭರತ್, ಭವಿತ್, ಶಾಲೆಯ ಸಹ ಶಿಕ್ಷಕರಾದ ರಮೇಶ್ ವಿ.ಎಸ್., ವಾಣಿ ಶ್ರೀ ವಿ, ಅರುಣ್ ನಾಯ್ಕ, ದೇವಪ್ಪ, ಅನುಷ, ವೀಣಾ, ಇತರರು ಉಪಸ್ಥಿತರಿದ್ದರು.

ಅನ್ನದ ಮೂಲ ಅರಿವಾಗಲಿ:
ಭತ್ತದ ಬೇಸಾಯವನ್ನು ಕೃಷಿಕರು ಬಹಳ ಶ್ರದ್ಧೆಯಿಂದ ಮಾಡುತ್ತಾರೆ. ಮಳೆಗೆ ಅನುಗುಣವಾಗಿ ಭತ್ತದ ಬಿತ್ತನೆ ಮಾಡಿ ನೇಜಿಯನ್ನು ತೆಗೆದು ನಾಟಿ ಮಾಡುತ್ತಾರೆ. ನಂತರ ಮೂರು ತಿಂಗಳಲ್ಲಿ ಬೆಳೆದು ನಿಲ್ಲುವ ಪೈರನ್ನು ಕಟಾವು ಮಾಡಿ ಭತ್ತವನ್ನು ಬೇರ್ಪಡಿಸಿ ಅಕ್ಕಿಯಾಗಿಸುವ ಪ್ರಕ್ರಿಯೆ ಮಕ್ಕಳಿಗೆ ಅರ್ಥವಾಗಬೇಕು. ನಮ್ಮ ಅನ್ನದ ಮೂಲದ ಅರಿವಿರಬೇಕು ಎಂಬ ಕಾರಣಕ್ಕಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಶಾಲೆ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ವಿನಯ್ ಕೆ. ತಿಳಿಸಿದರು.

ಕುಣಿದು ಕುಪ್ಪಳಿಸಿದರು
ನಾಲ್ಕು ಗೋಡೆಗಳ ನಡುವಿನ ಪಾಠ, ಪ್ರವಚನಗಳಿಂದ ಪರಿಸರದ ನೈಜ ಪಾಠವನ್ನು ಅರಿಯುವ ಪ್ರಕ್ರಿಯೆಯನ್ನು ಮಕ್ಕಳು ಅನುಭವಿಸಿದರು.
ಗದ್ದೆ ಉಳುಮೆ, ಸೇಜಿ, ಸಾಟಿಯನ್ನು ಅರ್ಥ ಮಾಡಿಕೊಂಡು ಕೆಸರಿನ ಗದ್ದೆಯಲ್ಲಿ ಲವಲವಿಕೆಯಿಂದ ಕುಣಿದಾಡಿದರು.
ಕೆಸರು ಎರಟಾಡಿಕೊಂಡು, ಕೋಣಗಳಂತೆ ಓಡಾಡಿಸಿಕೊಂಡು ಖುಷಿಪಟ್ಟರು.
ನೇಜಿ ನಾಟಿ ಸಮಯದಲ್ಲಿ ಹೇಳುವ ಪಾಡ್ಡನಗಳನ್ನು ಅಚ್ಚರಿಯಿಂದ ಕೇಳುತ್ತಾ ತನ್ಮಯರಾದರು.

Related posts

ಮುಂಡೂರು ಶ್ರೀ ನಾಗಕಲ್ಲುರ್ಟಿ ದೈವಸ್ಥಾನದಲ್ಲಿ 10ನೇ ವರ್ಷದ ಸಂಭ್ರಮದ ಗಣೇಶೋತ್ಸವ

Suddi Udaya

ಬೆಳ್ತಂಗಡಿ ತಾಲೂಕು ಕಚೇರಿಗೆ ಶಾಸಕ ಹರೀಶ್ ಪೂಂಜ ದಿಢೀರ್ ಭೇಟಿ

Suddi Udaya

ಕಜಕೆ ಶಾಲೆಗೆ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ಕನ್ಯಾಡಿಯಲ್ಲಿ ‘ಸ್ಪೂರ್ತಿ’ ಹೊಸ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ

Suddi Udaya

ಶ್ರೀ ಗುರುದೇವ ಮಠದ ಟ್ರಸ್ಟಿಗಳಾಗಿ ಕೆ. ಹರೀಶ್ ಕುಮಾರ್, ಸುಜಿತ ವಿ. ಬಂಗೇರ ಹಾಗೂ ನೂತನ ರಿಲಿಜಿಯಸ್ ಟ್ರಸ್ಟ್ ಗೆ 21 ಮಂದಿ ನೇಮಕ

Suddi Udaya

ಕಳೆಂಜ: ಮಣಿಗೇರಿ, ಕುಲಾಡಿ ಕಾಂಕ್ರೀಟ್ ರಸ್ತೆಯ ಕಾಮಗಾರಿ ಅಂತಿಮ

Suddi Udaya
error: Content is protected !!