July 23, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಶ್ರೀ ಗುರುದೇವ ಮಠದ ಟ್ರಸ್ಟಿಗಳಾಗಿ ಕೆ. ಹರೀಶ್ ಕುಮಾರ್, ಸುಜಿತ ವಿ. ಬಂಗೇರ ಹಾಗೂ ನೂತನ ರಿಲಿಜಿಯಸ್ ಟ್ರಸ್ಟ್ ಗೆ 21 ಮಂದಿ ನೇಮಕ

ಧರ್ಮಸ್ಥಳ : ದೇವರ ಗುಡ್ಡೆ ಶ್ರೀ ಗುರುದೇವ ಮಠ ಟ್ರಸ್ಟ್ ಗೆ ತೆರವಾದ ಟ್ರಸ್ಟಿಗಳ ಸ್ಥಾನಕ್ಕೆ ತಾಲೂಕಿನ ಇಬ್ಬರು ಸೇರಿ 5 ಮಂದಿ ಸದಸ್ಯರನ್ನು ಟ್ರಸ್ಟಿಗಳಾಗಿ ಹಾಗೂ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನಮ್ ನಿತ್ಯಾನಂದ ನಗರ ಇದರ ನೂತನ ರಿಲಿಜಿಯಸ್ ಟ್ರಸ್ಟ್ ಗೆ ತಾಲೂಕಿನ 4 ಮಂದಿ ಸೇರಿ ಒಟ್ಟು 21 ಮಂದಿಯನ್ನು ಟ್ರಸ್ಟಿಗಳಾಗಿ ಶ್ರೀ ರಾಮ ಕ್ಷೇತ್ರದ ಮಠಾಧೀಶ 1008 ಮಹಾ ಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ನೇಮಕ ಮಾಡಿದ್ದಾರೆ ಎಂದು ಟ್ರಸ್ಟ್ ಕಾರ್ಯದರ್ಶಿ ತುಕಾರಾಮ ಸಾಲಿಯಾನ್ ಆರ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ಗುರುದೇವ ಮಠ ಟ್ರಸ್ಟ್ ಗೆ ಮೆಸ್ಕಾಂ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಹರೀಶ್ ಕುಮಾರ್, ಮಾಜಿ ಶಾಸಕ ದಿ. ವಸಂತ ಬಂಗೇರರ ಪತ್ನಿ ಬೆಳ್ತಂಗಡಿ ಬಿಲ್ಲವ ಮಹಿಳಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಸುಜಿತಾ ವಿ. ಬಂಗೇರ, ಸಿರ್ಸಿ ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ್, ಸಾಗರ ಹೋಟೆಲ್ ಉದ್ಯಮಿ ಚಂದ್ರ ಪೂಜಾರಿ, ಕುಮುಟಾ ಗುತ್ತಿಗೆಗಾರ ಹೆಚ್. ಆರ್. ನಾಯ್ಕ ಇವರನ್ನು ನೇಮಕ ಮಾಡಲಾಗಿದೆ.

ರಿಲೀಜಿಯಸ್‌ ಟ್ರಸ್ಟಿಗಳಾದ ನಿವೃತ್ತ ಪೊಲೀಸ್ ವರಿಷ್ಟಾಧಿಕಾರಿ ಪೀತಾಂಬರ ಹೇರಾಜೆ ಬೆಳ್ತಂಗಡಿ, ನೋಟರಿ ವಕೀಲರು ಬೆಳ್ತಂಗಡಿ ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಭಗೀರಥ ಜಿ., ಉದ್ಯಮಿ ಕನ್ಯಾಡಿ ಶ್ರೀ ಗಣೇಶ್ ಪೇಂಟಿಂಗ್ ಮತ್ತು ಫ್ಲೋರಿಂಗ್ ಮಾಲಕ ರವೀಂದ್ರ ಪೂಜಾರಿ ಆರ್ಲ, ದ. ಕ. ಜಿಲ್ಲಾ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರು ಡಾ. ಸದಾನಂದ ಪೂಜಾರಿ, ವಕೀಲರು ಕುದ್ರೋಳಿ ಶ್ರೀ ಗೋಕರ್ಣನಾಥ್ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಅಖಿಲ ಭಾರತ ಬಿಲ್ಲವ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಗುತ್ತಿಗೆದಾರ ದಯಾನಂದ ಬೋಂಟ್ರ ಬಿ. ಬರೋಡ ಗುಜರಾತ್, ಉದ್ಯಮಿ ಗಂಗಾಧರ ಆಮೀನ್ ನಾಸಿಕ್, ಡಾ. ಜೀವರಾಜ್ ಸೊರಕೆ ಎಸ್ ಸಿ ಎಸ್ ಆಸ್ಪತ್ರೆ ಮಂಗಳೂರು, ಉರ್ಮಿಳಾ ರಮೇಶ್ ಮಂಗಳೂರು, ಶೇಖರ್ ಬಂಗೇರ ವಿಧ್ಯಾಮ್ ಗ್ರೂಪ್ ಆಫ್ ಹೋಟೆಲ್ ನವದೆಹಲಿ, ಕೃತೀನಾ ಅಮೀನ್ ಜೆ.ವಿ.ಸನ್ಸ್ ಮಂಗಳೂರು, ಉದ್ಯಮಿ ಸಂತೋಷ್ ಕುಮಾರ್ ಜನಾರ್ದನ ದೆಹಲಿ, ಸಮಾಜ ಸೇವಕ ಕೃಷ್ಣ ಆರ್. ನಾಯ್ಕ ಭಟ್ಕಳ, ಉದ್ಯಮಿ ವಿಜಯ ಕುಮಾರ್ ಸೊರಕೆ ಪುತ್ತೂರು, ಉದ್ಯಮಿ ರಘುನಾಥ ಮಾಬನ್ ಉಡುಪಿ, ಹರೀಶ್ ಸಾಲಿಯಾನ್ ಅಧ್ಯಕ್ಷರು ಬಿಲ್ಲವ ಸಂಘ ಬಹೇರಿನ್, ಭುವನೇಶ್ ಅಧ್ಯಕ್ಷರು ಶ್ರೀ ಗುರುನಾರಾಯಣ ಸ್ವಾಮಿ ಸಂಘ ಬಂಟ್ವಾಳ, ಡಾ ಪುರುಷೋತ್ತಮ ರಾಮಯ್ಯ ಎ. ಜೆ.ಆಸ್ಪತ್ರೆ ಮಂಗಳೂರು, ಉದ್ಯಮಿ ಲೋಕನಾಥ್ ಕೆ. ಮಂಗಳೂರು, ಉದ್ಯಮಿ ರವಿದಾಸ್ ಕೆ. ವಿ. ಬೆಂಗಳೂರು.

Related posts

ಶಿಬಾಜೆ: ಶ್ರೀ ಕ್ಷೇತ್ರ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪ್ರಾರಂಭ

Suddi Udaya

ಪಂಚಾಯತ್ ಕಾಮಗಾರಿಗಳನ್ನು ನಡೆಸಲು ಇಂಜಿನಿಯರ್ ಗಳ ಕೊರತೆ: ಕೂಡಲೇ ಸರಕಾರ ಕ್ರಮ ಜರುಗಿಸುವಂತೆ ಕೊಕ್ಕಡ ಗ್ರಾ.ಪಂ. ಉಪಾಧ್ಯಕ್ಷ ಪ್ರಭಾಕರ ಗೌಡ ಒತ್ತಾಯ

Suddi Udaya

ಕಳೆಂಜ ಬಿಜೆಪಿ ಮುಖಂಡನ ಮೇಲಿನ ಹಲ್ಲೆ ಕುರಿತು ಬಿಜೆಪಿ ಮಂಡಲ ವತಿಯಿಂದ ಪತ್ರಿಕಾಗೋಷ್ಠಿ

Suddi Udaya

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ

Suddi Udaya

ಡಾ.ಅಣ್ಣಯ್ಯ ಕುಲಾಲ್‌ರಿಂದ ‘ಸಿರಿಂಜ್ ಹಿಡಿದ ಕೈ ಪೆನ್ನು ಹಿಡಿದಾಗ’ ಕೃತಿ ಡಾ. ಹೆಗ್ಗಡೆಯವರಿಗೆ ಅರ್ಪಣೆ

Suddi Udaya

ಕುಕ್ಕೇಡಿ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಅನಿತಾ, ಉಪಾಧ್ಯಕ್ಷರಾಗಿ ಕುಸುಮ ಆಯ್ಕೆ

Suddi Udaya
error: Content is protected !!