ಶಿಶಿಲ: ನಾಡಿನ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ಶಿಶಿಲದ ಶಿಶಿಲೇಶ್ವರ ದೇವಸ್ಥಾನಕ್ಕೆ ಕಳೆದ ಎರಡು ವರ್ಷಗಳಿಂದ ವ್ಯವಸ್ಥಾಪನ ಸಮಿತಿಯನ್ನು ರಚನೆ ಮಾಡದೆ ಇದ್ದು, ಇದೀಗ ಸರಕಾರವು ವ್ಯವಸ್ಥಾಪನ ಸಮಿತಿಯನ್ನು ರಚನೆ ಮಾಡಿದ್ದು, ಅಧ್ಯಕ್ಷರಾಗಿ ಸುನೀಲ್ ಗೋಖಲೆ ಉಮ್ಮಂತಿಮಾರ್ ಆಯ್ಕೆಯಾಗಿದ್ದಾರೆ.

ಉಳಿದಂತೆ ಅರ್ಚಕರಾಗಿ ಪಿ. ರಾಮ ಕಾರಂತ್, ಸಮಿತಿಯ ಸದಸ್ಯರಾಗಿ ಚೆನ್ನಪ್ಪ ಬಂಗ್ಲೆತಡ್ಕ , ವಿಮಲ ಎಳ್ಳುಮಜಲು , ಪ್ರೇಮ ದೇವಸ, ರಮೇಶ್ ಮುಚ್ಚಿರಡ್ಕ, ಸುಂದರ ಗೌಡ ನಾಗನಡ್ಕ ಆಯ್ಕೆಯಾಗಿದ್ದಾರೆ.


ಈ ವೇಳೆ ಶಿಶಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ದೇವಸ್ಥಾನದ ಆಡಳಿತ ಅಧಿಕಾರಿಯಾಗಿದ್ದ ದಿನೇಶ್ ರವರು ಸುನೀಲ್ ಗೋಖಲೆ ರವರಿಗೆ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸೌತಡ್ಕ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ , ಗ್ರಾಮಸ್ಥರು ಉಪಸ್ಥಿತರಿದ್ದರು.











