ವೇಣೂರು: ಇಲ್ಲಿಯ ‘ಎಸ್.ಎಸ್. ಕಾಂಪ್ಲೆಕ್ಸ್’ನ ವಾಣಿಜ್ಯ ಸಂಕೀರ್ಣದಲ್ಲಿ ನೂತನ ಸುಮುಖ ಮೆಡಿಕಲ್ಸ್ ಇದರ ಶುಭಾರಂಭವು ಜು. 12ರಂದು ನಡೆಯಿತು.
ಮುಖ್ಯ ಅತಿಥಿಗಳಾಗಿ ಮಹೇಶ್ ಭಟ್ ಮಿಯಂದೂರು, ಡಾ. ಶಾಂತಿ ಪ್ರಸಾದ್ , ಡಾ. ಜಗದೀಶ್ ಚೌಟ, ಡಾ. ಸಂತೋಷ ರೇಗೋ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಕೃಷ್ಣ ಭಟ್ ಕಾಂತಾಜೆ, ಪ್ರಶಾಂತ್ ಕುಮಾರ್ ಕರುಮುಗೇರ್, ಎಚ್. ಮಹಮ್ಮದ್, ಭಾಸ್ಕರ ಪೈ ಉದ್ಯಮಿಗಳು, ಸುದೀಪ್ ಸಾಯಿ ಮೆಡಿಕಲ್ ಗುರುವಾಯನಕೆರೆ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಮಾಲಕರಾದ ಸುಜ್ಞಾನ್ ಎನ್., ಸುರೇಶ್ ಪೂಜಾರಿ , ಸುಮತಿ ಎಸ್ ಪೂಜಾರಿ ಬಂದಂತಹ ಅತಿಥಿ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು.











