ಇಂದಬೆಟ್ಟು ವಲಯದ ನಾವೂರು ವಿಭಾಗದ ಅಲೆಕ್ಕಿಯಲ್ಲಿ ಗೋಪಾಲ ಕೃಷ್ಣ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನಾ ಸಮಾರಂಭ ನಡೆಯಿತು.
ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರಿಯಾ ಲಕ್ಷ್ಮಣ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಹೇಮಾವತಿ ಹೆಗ್ಗಡೆಯವರು ಪ್ರಾರಂಭಿಸಿದ ಜ್ಞಾನ ವಿಕಾಸ ಕಾರ್ಯಕ್ರಮ ಮಹಿಳೆಯರಿಗೆ ಉತ್ತಮ ಮಾಹಿತಿಯೊಂದಿಗೆ ಆತ್ಮ ಸ್ಥೈರ್ಯ ವನ್ನು ಹೆಚ್ಚಿಸುತ್ತದೆ ಮಹಿಳೆಯ ಪ್ರತಿಭೆಯನ್ನು ಹೊರಹಾಕಲು ಕೇಂದ್ರವು ಉತ್ತಮ ವೇದಿಕೆಯಾಗಿದೆ ಎಂದರು.
ಮೇಲ್ವಿಚಾರಕರಾದ ಉಷಾ ರವರು ಎಲ್ಲರೂ ಕೇಂದ್ರದ ಸಭೆಯಲ್ಲಿ ಆಸಕ್ತಿ ಯಿಂದ ಭಾಗವಹಿಸುವಂತೆ ತಿಳಿಸಿದರು. ಜ್ಞಾನ ವಿಕಾಸ ಸಮನ್ವಯಧಿಕಾರಿ ಮಧುರಾ ವಸಂತ್ ರವರು ಜ್ಞಾನ ವಿಕಾಸ ಕೇಂದ್ರದ ಧ್ಯೇಯೋದ್ದೇಶಗಳು ಕೇಂದ್ರದ ಸಭೆಯಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಂಯೋಜಕಿ ರೋಹಿಣಿ ಉಪಸ್ಥಿತರಿದ್ದರು ಗುಲಾಬಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸುನೀತಾ ಸ್ವಾಗತಿಸಿ ಸೇವಾಪ್ರತಿನಿಧಿ ಪುಷ್ಪ ಧನ್ಯವಾದ ನೀಡಿದರು.











