
ರೆಖ್ಯ ವಿಶ್ವ ಹಿಂದೂ ಪರಿಷತ್, ಬಜರಂಗದಳ ಘಟಕದ ನೇತೃತ್ವದಲ್ಲಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ರೆಖ್ಯದಲ್ಲಿ ನಡೆದ 3ನೇ ವರ್ಷದ ಸಾರ್ವಜನಿಕ ಶ್ರೀ ಶನೇಶ್ವರ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಶ್ರೀ ಶನೇಶ್ಚರ ವೃತ ಕಲ್ಪೋಕ್ತ ಪೂಜೆಯು ಬ್ರಹ್ಮಶ್ರೀ ವೇದಮೂರ್ತಿ ಪುರೋಹಿತ ನಾಗರಾಜ್ ಭಟ್ ಸುಳ್ಯ ಇವರ ಪೌರೋಹಿತ್ಯದಲ್ಲಿ ಡಿ. 30 ರಂದು ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ಹಿಂ.ಪ. ಬಜರಂಗದಳ ರೆಖ್ಯ ಘಟಕದ ಅಧ್ಯಕ್ಷರು ನಿತ್ಯಾನಂದ ಕೆಲೆಂಜಿನೋಡಿ ವಹಿಸಿದ್ದರು. ಧಾರ್ಮಿಕ ಭಾಷಣಕಾರರಾಗಿ ಸಹ ಸಂಯೋಜಕರು ವಿ.ಹಿಂ.ಪ. ಬಜರಂಗದಳ ದಕ್ಷಿಣ ಮುರಳಿಕೃಷ್ಣ ಹಸಂತಡ್ಕ ಆಗಮಿಸಿದ್ದರು.
ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ವಿ.ಹಿಂ.ಪ. ಬಜರಂಗದಳ ಕಾರ್ಯಕಾರಣಿ ಸದಸ್ಯ ರಘು ಸಕಲೇಶಪುರ, ವಿ.ಹಿಂ.ಪ. ಬಜರಂಗದಳ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ , ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ರೆಖ್ಯ ಅಧ್ಯಕ್ಷ ಗಿರಿಯಪ್ಪ ಬಂಗೇರ, ವಿ.ಹಿಂ.ಪ. ಬಜರಂಗದಳ ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಪುತ್ತೂರು, ವಿ.ಹಿಂ.ಪ. ಬಜರಂಗದಳ ಪುತ್ತೂರು ನಗರ ಸಂಯೋಜಕ
ಜಯಂತ್ ಕುಂಜೂರ್ಪಂಜ, ಬಜರಂಗದಳ ಪ್ರಮುಖರು ಪುತ್ತೂರು ಕೇಶವ ಪ್ರಸಾದ್ , ಹಾಗೂ ಊರ-ಪರವೂರ ಭಕ್ತಾಭಿಮಾನಿಗಳು ಭಾಗವಹಿಸಿದ್ದರು.
ಅಖಿಲ್ ರೆಖ್ಯ ಸತ್ಸಂಗ ಪ್ರಮುಖ್ ವಿ.ಹಿಂ.ಪ. ಬಜರಂಗದಳ ಬೆಳ್ತಂಗಡಿ ಪ್ರಖಂಡ ಸ್ವಾಗತಿಸಿದರು.
ಯಶೋಧರ ಗೌಡ ಕೋಟಿಮಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರದೀಪ್ ಸಂಪಿಗೆತ್ತಡಿ ಧನ್ಯವಾದವಿತ್ತರು.













