July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕುಂಟಿನಿ ಎಸ್.ಬಿ.ಎಸ್ ಚುನಾವಣೆ: ಅಧ್ಯಕ್ಷರಾಗಿ ಮುಹಮ್ಮದ್ ಉವೈಸ್ ಆಯ್ಕೆ

ಉಜಿರೆ: ಮುಹಿಯುದ್ದೀನ್ ಅರಬಿಕ್ ಸೆಕೆಂಡರಿ ಮದ್ರಸ ಕುಂಟಿನಿ ವಿಧ್ಯಾರ್ಥಿಗಳ ಸಂಘಟನೆ ಯಾದ ಎಸ್.ಬಿ.ಎಸ್(ಸುನ್ನೀ ಬಾಲ ಸಂಘ) ಇದರ ನಾಯಕತ್ವ ಚುನಾವಣೆ ಯೂ ಇತ್ತೀಚೆಗೆ ಅಲ್ ಬುಖಾರಿ ಮಸ್ಜಿದ್ ಆಡಳಿತ ಸಮೀತಿ ಅಧ್ಯಕ್ಷ ಹುಸೈನ್ ತಂಗಳ್ ನೇತ್ರತ್ವದಲ್ಲಿ ನಡೆಯಿತು.

ಮುಖ್ಯ ಗುರುಗಳಾದ ಉಮರುಲ್ ಫಾರೂಖ್ ಸಅದಿ ಸ್ವಾಗತಿಸಿ ಚುನಾವಣಾ ಮಾಹಿತಿಯನ್ನು ವಿಧ್ಯಾರ್ಥಿ ಗಳೊಂದಿಗೆ ನೀಡಿದರು. ಅಧ್ಯಾಪಕರು ಹಾಗೂ ಆಡಳಿತ ಸಮಿತಿಯ ನಾಯಕರು, ಯಂಗ್ ಮೆನ್ಸ್ ಸದಸ್ಯರು ಚುನಾವಣಾ ಯಶಸ್ವಿಯಾಗಿ ಸಹಕರಿದರು‌. ಪ್ರಸ್ತುತ ಚುನಾವಣೆಯಲ್ಲಿ 7 ವಿಧ್ಯಾರ್ಥಿಗಳು ಸ್ಪರ್ಧಿಸಿದರು. ಮುಹಮ್ಮದ್ ಉವೈಸ್ ಖಲಂದರ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು. ಪ್ರ.ಕಾರ್ಯದರ್ಶಿ ಯಾಗಿ ಮುಹಮ್ಮದ್ ಮಿಸ್ರಾಫ್ ಹಾಗೂ ಕೋಶಾಧಿಕಾರಿಯಾಗಿ ಮುಹಮ್ಮದ್ ಶಹೀಂ ಅಲಿ ಸೈಟ್ ಆಯ್ಕೆಯಾದರು.

ಅಲ್ ಬುಖಾರಿ ಪ್ರ.ಕಾರ್ಯದರ್ಶಿ ಸುಲೈಮಾನ್ ಬದ್ರಿಯಾ ಮುಖ್ಯ ಚುನಾವಣಾ ವೀಕ್ಷಕರಾಗಿ ಸಹಕರಿಸಿದರು. ಖತೀಬರಾದ ಅಬ್ದುಲ್ ಖಾದರ್ ಹಿಕಮಿ ಸಂದೇಶ ಭಾಷಣ ಮಾಡಿದರು.ಸಭೆಯಲ್ಲಿ ಕತ್ತರ್ ಮುಹಮ್ಮದ್ ಹಾಜಿ, ಮೊಯ್ದೀನ್ ಕುಕ್, ಹನೀಫ್ ಡ್ರೈವರ್ ಕುಂಟಿನಿ, ಮುಹಿಯುದ್ದೀನ್ ನಜಾತ್,ರಝಾಖ್ ಕುಂಟಿನಿ, ಸಿದ್ದೀಖ್ ವಾಫಿರ್,ಸಿಕಂದರ್ ಕಲ್ಯಾಣಪುರ,ಅಬೂಬಕ್ಕರ್ ಪಂಡಿತ್, ಮುಹಮ್ಮದ್ ಅಲಿ ಉಜಿರೆ, ಶಂಶುದ್ದೀನ್ ನಾಡ್ಜೆ, ರಫೀಖ್ ಕುಂಟಿನಿ, ಅಶ್ರಫ್ ಮೇಸ್ತ್ರಿ ಯೂಸುಫ್ ಹಲೇಜಿ ಸಹಿತ ಜಮಾಅತ್ತ್ ನಾಯಕರು ಉಪಸ್ಥಿತರಿದ್ದರು.ಅಧ್ಯಾಪಕರಾದ ಹಬೀಬುರ್ರಹ್ಮಾನ್ ಜೌಹರಿ ಗೋಳಿಯಂಗಡಿ ಚುನಾವಣಾ ಫಲಿತಾಂಶ ವನ್ನು ಘೋಷಿಸಿದರು. ಹಸೈನಾರ್ ಉಸ್ತಾದ್ ಕಕ್ಕಿಂಜೆ ಧನ್ಯವಾದವಿತ್ತರು.

Related posts

ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ರಚನೆ

Suddi Udaya

ಎಕ್ಸೆಲ್ ಗುರುವಾಯನಕೆರೆಗೆ 15 ಲಕ್ಷ ಲೀಟರ್ ಸಾಮರ್ಥ್ಯದ ಎಸ್ ಟಿ ಪಿ ರಚನೆಗೆ ಭೂಮಿ ಪೂಜೆ

Suddi Udaya

ಉಜಿರೆಯಲ್ಲಿ ಚುನಾವಣಾ ಪ್ರಚಾರದ ಅಂಗವಾಗಿ ಅಸ್ಸಾಂ ಮುಖ್ಯಮಂತ್ರಿ ಡಾ. ಹಿಮಂತ್ ಬಿಸ್ವಾಸ್ ಶರ್ಮ ಬೃಹತ್ ರೋಡ್ ಶೋ: ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಪರ ಮತ ಪ್ರಚಾರ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಕುಟುಂಬ ಸಮೇತರಾಗಿ ಭೇಟಿ

Suddi Udaya

ಬೆಳ್ತಂಗಡಿ: ಅರುವ ಕೊರಗಪ್ಪ ಶೆಟ್ಟಿ ಅವರಿಗೆ “ಜಾನಪದ ಶ್ರೀ” ಪ್ರಶಸ್ತಿ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಗೆ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಬಹುಮಾನ

Suddi Udaya
error: Content is protected !!