July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಿಜಯರತ್ನ ಪ್ರಶಸ್ತಿ ಪುರಸ್ಕೃತ ಸುಮಂತ್ ಕುಮಾರ್ ಜೈನ್ ರವರಿಗೆ ಎಕ್ಸೆಲ್ ಉದ್ಯೋಗಿಗಳಿಂದ ಅಭಿನಂದನಾ ಸಮಾರಂಭ

ಗುರುವಾಯನಕೆರೆ: ಸಾವಿರಾರು ವಿದ್ಯಾರ್ಥಿಗಳಿಗೆ ಎಕ್ಸೆಲ್ ಕಾಲೇಜಿನ‌ ಮೂಲಕ ಗುಣಮಟ್ಟದ ಶಿಕ್ಷಣ ನೀಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಯುವ ಸಾಧಕ ಎಕ್ಸೆಲ್ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ಪ್ರತಿಷ್ಠಿತ ವಿಜಯರತ್ನ ಪ್ರಶಸ್ತಿಯಿಂದ ಪುರಸ್ಕೃತಗೊಂಡಿದ್ದು ಎಕ್ಸೆಲ್ ಪದವಿ ಪೂರ್ವ ಕಾಲೇಜು ವಿದ್ಯಾಸಾಗರ ಕ್ಯಾಂಪಸ್ ಹಾಗೂ ಅರಮಲೆ ಬೆಟ್ಟ ಕ್ಯಾಂಪಸ್ ಗಳ ಬೋಧಕ ವೃಂದ ಹಾಗೂ ಆಡಳಿತ ಕಛೇರಿ ಉದ್ಯೋಗಿಗಳ ವತಿಯಿಂದ ಅಭಿನಂದನಾ ಸಮಾರಂಭವನ್ನು ಜು.15 ರಂದು ಹಮ್ಮಿಕೊಳ್ಳಲಾಯಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸುಮಂತ್ ಕುಮಾರ್ ಜೈನ್ ಅವರು ‘ ಪ್ರಶಸ್ತಿ ಇಡೀ ನಮ್ಮ ಎಕ್ಸೆಲ್ ಕುಟುಂಬಕ್ಕೆ ಸಮರ್ಪಿತವಾಗಿದೆ. ಪುರಸ್ಕಾರ ಬಂದಾಗ ಹಿಗ್ಗದೆ, ತಿರಸ್ಕಾರ ಆದಾಗ ಜಗ್ಗದೆ ಇರುವುದೇ ನಿಜವಾದ ನಾಯಕತ್ವ. ಅಂಥ ವ್ಯಕ್ತಿತ್ವವನ್ನು ತನ್ನ ತಂದೆ ತಾಯಿ, ಗುರು ವೃಂದ ತನಗೆ ಅನುಗ್ರಹಿಸಿದೆ ಎಂದರು.

ವಿಜಯರತ್ನ ಪ್ರಶಸ್ತಿ ಇಡೀ ಎಕ್ಸೆಲ್ ಕುಟುಂಬಕ್ಕೆ ಸಂದ ಗೌರವ

ಬೆರಳೆಣಿಕೆಯ ಉದ್ಯೋಗಿಗಳಿದ್ದ ನಮ್ಮ ಎಕ್ಸೆಲ್ ಕಾಲೇಜಿನಲ್ಲಿ ಈಗ 700 ಕ್ಕಿಂತ ಹೆಚ್ಚು ಉದ್ಯೋಗಿಗಳಿದ್ದಾರೆ. ಶಾಖೋಪಶಾಖೆಗಳಾಗಿ ಸಂಸ್ಥೆ ಬೆಳೆಯುತ್ತಿದೆ.ಅತ್ಯುತ್ತಮ ಫಲಿತಾಂಶದ ಜೊತೆಗೆ ದೊಡ್ಡ ಮಟ್ಟದಲ್ಲಿ ದಾಖಲಾತಿ ಕೂಡಾ ನಡೆಯುತ್ತಿದೆ.ಇಂಥ ಯಶಸ್ಸಿಗೆ ಕಾರಣರಾದ ಎಲ್ಲರನ್ನೂ ತಾನು ಸ್ಮರಿಸುವುದಾಗಿ ಸುಮಂತ್ ಕುಮಾರ್ ಜೈನ್ ಹೇಳಿದರು.

ಎಕ್ಸೆಲ್ ಕಾಲೇಜು ವಿದ್ಯಾ ಸಾಗರ ಕ್ಯಾಂಪಸ್ ನ ಪ್ರಾಂಶುಪಾಲರಾದ ಡಾ.ನವೀನ್ ಕುಮಾರ್ ಮರಿಕೆ ಮಾತನಾಡಿ ಪುಟ್ಟ ಸಂಸ್ಥೆಯಾಗಿದ್ದ ನಮ್ಮ ಕಾಲೇಜು ಇಂದು ಬೃಹತ್ ಆಗಿ ಬೆಳೆದಿದೆ. ಇದಕ್ಕೆ ಪ್ರಮುಖ ಕಾರಣಕರ್ತರು ನಮ್ಮ ಅಧ್ಯಕ್ಷರು. ಅವರಿಗೆ ಇನ್ನಷ್ಟು ಉನ್ನತ ಸ್ಥಾನ ಮಾನ, ಪ್ರಶಸ್ತಿ – ಪುರಸ್ಕಾರಗಳು ಒಲಿದು ಬರಲಿ ‘ ಎಂದು ಹಾರೈಸಿದರು.

ಅರಮಲೆ ಬೆಟ್ಟ ಕ್ಯಾಂಪಸ್ ನ ಪ್ರಾಂಶುಪಾಲ ಡಾ.ಪ್ರಜ್ವಲ್ ಕಜೆ ಮಾತನಾಡಿ ಕಠಿಣ ಪರಿಸ್ಥಿತಿಯಲ್ಲೂ ಧೃತಿಗೆಡದೆ ಮುನ್ನಡೆಯುವ ಮನಸ್ಥಿತಿ ಅಧ್ಯಕ್ಷರದು ಎಂದರು.

ಕ್ಯಾಂಪಸ್ ಮ್ಯಾನೇಜರ್ ಶಾಂತಿರಾಜ್ ಜೈನ್ ಮಾತನಾಡಿ ಪ್ರಶಸ್ತಿ ನಮ್ಮ ಜವಾಬ್ದಾರಿಯನ್ನು ಹೆಚ್ಚು ಮಾಡುತ್ತದೆ. ಪ್ರಸ್ತುತ ವಿಜಯರತ್ನ ಪ್ರಶಸ್ತಿ ನಮ್ಮ ಅಧ್ಯಕ್ಷರ ಹೊಣೆಯನ್ನು ಹೆಚ್ಚಿಸಿದೆ ಎಂದರು.

ವೇದಿಕೆಯಲ್ಲಿ ಸುಮಂತ್ ಕುಮಾರ್ ಜೈನ್ ಅವರ ತಂದೆ ಸತೀಶ್ ಕುಮಾರ್ ಆರಿಗ, ತಾಯಿ ಶುಭಲತಾ , ಆಡಳಿತಾಧಿಕಾರಿ ಕೀರ್ತಿನಿಧಿ ಜೈನ್ , ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥ ಈಶ್ವರ್ ಶರ್ಮ, ಗಣಿತ ವಿಜ್ಞಾನ ವಿಭಾಗದ ಪ್ರಸಾದಿ ಚೇತನ್, ಪ್ರವೀಣ್ ಪಾಟೀಲ್, ಜೀವ ವಿಜ್ಞಾನ ವಿಭಾಗದ ದೀಪಾ, ಗಣಕ ವಿಜ್ಞಾನ ವಿಭಾಗದ ಪ್ರಭಾಕರ್, ಕನ್ನಡ ವಿಭಾಗ ಮುಖ್ಯಸ್ಥ ಜಯರಾಮ್, ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆಕೆ, ವಿಭಾಗ ಮುಖ್ಯಸ್ಥ ಪ್ರಸನ್ನ ಭೋಜ, ಆಡಳಿತ ಮಂಡಳಿಯ ಸಹನಾ ಜೈನ್, ಪದ್ಮ ಪ್ರಸಾದ್,ರಿತೇಶ್ ಕುಮಾರ್ ಮೊದಲಾದವರಿದ್ದರು.

ಎಕ್ಸೆಲ್ ಕುಟುಂಬದಿಂದ ಸನ್ಮಾನ:
ವಿಜಯ ರತ್ನ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಪಂಚಲೋಹದ ಬೃಹತ್ ಸರಸ್ವತಿ ವಿಗ್ರಹ, ಕೆಂದಾಳಿ ಎಳನೀರು ಗೊನೆ, ಕದಳಿ ಬಾಳೆ ಗೊನೆಗಳನ್ನು ಸಮರ್ಪಿಸಲಾಯಿತು. ಸರಸ್ವತಿ ದೇವಿ ವಿಗ್ರಹಕ್ಕೆ ಪೂಜೆ ಸಲ್ಲಿಸಿ , ಕಾಲೇಜಿನಲ್ಲೇ ಅದನ್ನು ಇರಿಸಲು ಅಧ್ಯಕ್ಷರು ನಿರ್ಧರಿಸಿದರು.
ಪ್ರಾಂಶುಪಾಲರು, ಪ್ರಾಧ್ಯಾಪಕರು, ಆಡಳಿತ ಕಚೇರಿಯ ಸಿಬ್ಬಂದಿ ಹೂಹಾರ ,ಹಾಗೂ ಹೂ ಗುಚ್ಛ ನೀಡಿ ಗೌರವಿಸಿದರು.

ಭೌತ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಸತ್ಯನಾರಾಯಣ ಭಟ್ ಸ್ವಾಗತಿಸಿದರು.ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆಕೆ ವಂದಿಸಿದರು. ಕನ್ನಡ ವಿಭಾಗದ ಮೊಹಮ್ಮದ್ ಮುನೀರ್ ವಂದಿಸಿದರು.


Related posts

ಬಜೆಟ್ ನಲ್ಲಿ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗಾಗಿ 10 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ:ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ : ಶೇಖರ್ ಲಾಯಿಲ

Suddi Udaya

ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ಖರೀದಿಯ ಮೇಲೆ ಶೇ.20 ಸ್ಪೆಷಲ್ ಡಿಸ್ಕೌಂಟ್ ಆಫರ್

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಚಾರಿ ಆಸ್ಪತ್ರೆ ಸುಮಾರು 25 ವಷ೯ಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಡಾ.ನಾರಾಯಣ ಪ್ರಭು ನಿಧನ

Suddi Udaya

ಪೆರಾಲ್ದರಕಟ್ಟೆ ಬದ್ರೀಯಾ ಜುಮಾ ಮಸೀದಿ ನೂತನ ಜಮಾತ್ ಕಮಿಟಿ ರಚನೆ: ನವಾಝ್ ಶರೀಫ್ ಕಟ್ಟೆ 3 ನೇ ಬಾರಿಗೆ ಅಧ್ಯಕ್ಷರಾಗಿ ಪುನರಾಯ್ಕೆ

Suddi Udaya

ಅಮೃತ್ ಮಿತ್ರ 2.0 ಮಿಷನ್ ಯೋಜನೆಯಡಿ ಕುಡಿಯುವ ನೀರಿನ, ನೀರಿನ ಗುಣಮಟ್ಟದ ಪರೀಕ್ಷೆಯ ಕುರಿತಾದ ಪ್ರಾಯೋಗಿಕ ತರಬೇತಿ

Suddi Udaya

ಗೇರುಕಟ್ಟೆ: ವಿದ್ಯುತ್‌ ತಂತಿ ಮೇಲೆ ಅಪಾಯಕಾರಿ ಮರ

Suddi Udaya
error: Content is protected !!