ಕೊಕ್ಕಡ : ಸೌತಡ್ಕದಲ್ಲಿ ಜು. 17ರಂದು ನಡೆದ ಆನೆ ದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಶೆಟ್ಟಿ ಸೌತಡ್ಕ ರವರ ಮನೆಗೆ ಜು. 18ರಂದು ಭೇಟಿ ನೀಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಈ ಬಗ್ಗೆ ಅರಣ್ಯ ಸಚಿವರಲ್ಲಿ ಮಾತನಾಡಿ ಗರಿಷ್ಠ ಪ್ರಮಾಣದ ಪರಿಹಾರ ದೊರಕಿಸಿಕೊಡುವಲ್ಲಿ ಹಾಗೂ ಇಂಜಿನಿಯರಿಂಗ್ ಕಲಿತ ಮೃತರ ಪುತ್ರಿಗೆ ಸರಕಾರಿ ಉದ್ಯೋಗಕ್ಕೆ ಪ್ರಯತ್ನಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಸೌತಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಸದಸ್ಯ ಹರಿಶ್ಚಂದ್ರ, ಗಣ್ಯರಾದ ಪ್ರವೀಣ್ ಫೆರ್ನಾಂಡಿಸ್ ಹಳ್ಳಿಮನೆ ಉಜಿರೆ, ದಯಾನೀಶ್, ಸಿರಿಲ್ ಡಿ’ಸೋಜಾ, ನಿತಿನ್ ಕಡೀರ, ಆಸೀಫ್ ಐಡಿಯಲ್, ಮಾಧವ ಸೌತಡ್ಕ, ಗಣೇಶ್ ಪೂಜಾರಿ, ಜಾನ್ಸನ್ ಪಾಯಸ್, ಗೋಪಾಲ್, ನಾರಾಯಣ ಹಿಬರ, ಇನ್ನಿತರರು ಉಪಸ್ಥಿತರಿದ್ದರು.












