ಪಡಂಗಡಿ ಗ್ರಾಮ ಪಂಚಾಯತ್ ಗೆ ಒಳಪಟ್ಟ ರಸ್ತೆಯು ತೀರಾ ಹದಗೆಟ್ಟಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲಲ್ಲಿ ವಾಹನ ಸವಾರರು ಬಿದ್ದು ಗಾಯಗೊಂಡಿದ್ದು, ಆದಷ್ಟು ಬೇಗ ದುರಸ್ತಿಗೊಳಿಸುವಂತೆ ಪಡಂಗಡಿ ಗ್ರಾಮಸ್ಥರಿಂದ ಪಡಂಗಡಿ ಗ್ರಾಮ ಪಂಚಾಯತ್ ನಿಂದ ಲೋಕೋಪಯೋಗಿ ಇಲಾಖೆಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂತೋಷ್ ಕುಮಾರ್ ಜೈನ್, ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಸುವರ್ಣ, ಮೀನಾಕ್ಷಿ, ಅಶೋಕ್, ನರೇಂದ್ರ ಕುಮಾರ್, ಅಂತೋನಿ ಫೆರ್ನಾಂಡೀಸ್, ಅಹಮ್ಮದ್ ಬಾವ, ವನಜಾಕ್ಷಿ, ಬಿ.ಎನ್ ವಸಂತಿ , ಸಂತೋಷ್ ಶೆಟ್ಟಿ ಹಳ್ಳಂದೋಡಿ, ಅಶ್ವಿತ್ ಕುಲಾಲ್, ರಜಾಕ್, ಸಂಪತ್, ಕಿಶೋರ್ ಕುಮಾರ್, ಹರೀಶ್ ಗರ್ಡಾಡಿ, ರಿಕ್ಷಾಚಾಲಕರು ಉಪಸ್ಥಿತರಿದ್ದರು.











