ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಮಿತ್ತಬಾಗಿಲು ಗ್ರಾಮದ ಜನಾರ್ದನ ಗೌಡ ಎಂಬುವವರಿಗೆ ರೂ. 12,000/- ಮೌಲ್ಯದ ಅತ್ಯಾಧುನಿಕ ತಂತ್ರ ಜ್ಞಾನದ ವೀಲ್ ಚೆಯರ್ ನ್ನು ಜು.21 ರಂದು ವಕೀಲರಾದ ಧನಂಜಯ್ ರಾವ್ ರವರ ಕಚೇರಿಯಲ್ಲಿ ಹಸ್ತಾಂತರಿಸಲಾಯಿತು.
ಎರಡು ವರ್ಷದ ಹಿಂದೆ ಇವರಿಗೆ ರೂ. 16,000 ಮೌಲ್ಯದ ವಿಶೇಷ ಮರದ ಮಂಚ ಮತ್ತು ರೂ. 11,000/- ನಗದು ನೀಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷ ಪ್ರಕಾಶ್ ಪ್ರಭು, ಕಾರ್ಯದರ್ಶಿ ಡಾ. ಎಂ.ಎಂ. ದಯಾಕರ್, ಧನಂಜಯ್ ರಾವ್, ಡಾ. ಶಶಿಕಾಂತ ಡೋಂಗ್ರೆ, ವಿದ್ಯಾಶ್ರೀ ಹರ್ಷೇಂದ್ರ, ರೋನಾಲ್ಡ್ ಲೋಬೊ, ಪ್ರೊ.ರಾಧಾಕೃಷ್ಣ ಮಯ್ಯ, ತ್ರಿವಿಕ್ರಮ್ ಹೆಬ್ಬಾರ್, ರಾಜಶ್ರೀ ಧನಂಜಯ್, ಗೀತಾ ಪ್ರಕಾಶ ಪ್ರಭು, ಡಾ. ಅನಿತಾ ದಯಾಕರ್ ಉಪಸ್ಥಿತರಿದ್ದರು.











