25.5 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಸ್.ಎಸ್.ಎಫ್ ಬೆಳ್ತಂಗಡಿ ಡಿವಿಷನ್ ನಾಯಕರ ಸೆಕ್ಟರ್ ಭೇಟಿ

ಬೆಳ್ತಂಗಡಿ : ಸಕ್ರೀಯತೆಗೆ ಮನಸ್ಸುಗಳನ್ನು ಪೋಣಿಸುವ ಎಂಬ ಧ್ಯೇಯ ವಾಕ್ಯದೊಂದಿಗೆ ಎಸ್.ಎಸ್.ಎಫ್ ಬೆಳ್ತಂಗಡಿ ಡಿವಿಷನ್ ಸಮಿತಿಯು ಹಮ್ಮಿಕೊಂಡಿದ್ದ ಸೆಕ್ಟರ್ ಸಂಚಾರ ಕಾರ್ಯಕ್ರಮವು ಎಸ್.ಎಸ್.ಎಫ್ ಉಜಿರೆ ಸೆಕ್ಟರ್ ವ್ಯಾಪ್ತಿಯಲ್ಲಿ ಜು.20 ರಂದು ಮಲ್ಜಹ್ ಕ್ಯಾಂಪಸ್ ಉಜಿರೆಯಲ್ಲಿ ನಡೆಯಿತು.

ದುವಾ ನೇತೃತ್ವ ಮತ್ತು ತರಗತಿ ಮಂಡನೆ ಸಯ್ಯಿದ್ ಫಹೀಮ್ ಅಹ್ಸನಿ ಅಲ್ ಕಾಮಿಲ್ ಸಖಾಫಿಯವರು ಮಾಡಿದರು ಹಾಗೂ
ಸೆಕ್ಟರ್ ಅಧ್ಯಕ್ಷ ಶಾಕೀರ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.
ಕಾರ್ಯಕ್ರಮವನ್ನು ಉಜಿರೆ ಸರ್ಕಲ್ ಕೆ.ಎಮ್.ಜೆ ಅಧ್ಯಕ್ಷ ಅಲ್ ಹಾಜಿ ಹೈದರ್ ಮದನಿ ಉದ್ಘಾಟಿಸಿದರು.
ಪ್ರಾಸ್ತಾವಿಕ ಭಾಷಣವನ್ನು ಕೆ.ಎಮ್.ಜೆ ಉಜಿರೆ ಸರ್ಕಲ್ ಪ್ರ.ಕಾರ್ಯದರ್ಶಿ ಖಾಲಿದ್ ಮುಸ್ಲಿಯಾರ್ ಮಾತನಾಡಿದರು
ಡಿವಿಷನ್ ಉಪಾಧ್ಯಕ್ಷ ಲತೀಫ್ ಅಹ್ಸನಿ ತರಗತಿ ಮಂಡನೆ ಮಾಡಿದರು.
ಡಿವಿಷನ್ ಕಾರ್ಯದರ್ಶಿಯಾದ ನಾಸೀರ್ ಪಡ್ಡಂದಡ್ಕ ಸೆಕ್ಟರ್ ಹಾಗೂ ಯುನಿಟ್ ಬಗ್ಗೆ ಅವಲೋಕನ ನಡೆಸಿದರು. ಎ

ಸ್.ಎಸ್.ಎಫ್ ಬೆಳ್ತಂಗಡಿ ಡಿವಿಷನ್ ಅಧ್ಯಕ್ಷ ಇಸಾಕ್ ಅಳದಂಗಡಿ, ಡಿವಿಷನ್ ನಾಯಕರು ಕೆ.ಎಮ್.ಜೆಮತ್ತು ಎಸ್.ಎಸ್.ಎಫ್ ಉಜಿರೆ ಸರ್ಕಲ್ ನಾಯಕರು, ಎಸ್.ಎಸ್.ಎಫ್ ಸೆಕ್ಟರ್ ವ್ಯಾಪ್ತಿಯ ಯೂನಿಟ್ ಕ್ಯಾಬಿನೆಟ್ ಸದಸ್ಯರು ಉಪಸ್ಥಿತರಿದ್ದರು.
ಸೆಕ್ಟರ್ ಪ್ರ.ಕಾರ್ಯದರ್ಶಿಗಳಾದ ರಿಯಾಝ್ ನಿಡಿಗಲ್ ಧನ್ಯವಾದ ಮಾಡಿದರು.

Related posts

ವೇಣೂರು ಶ್ರೀ ಬಾಹುಬಲಿ ಬೆಟ್ಟದ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಪಟ್ರಮೆ: ಚಾಲಕನ ನಿಯಂತ್ರಣ ತಪ್ಪಿ ಹೊಳೆ ಬದಿಗೆ ಬಿದ್ದ ಕಾರು

Suddi Udaya

ಬಳಂಜ: ಯುವ ಬಿಲ್ಲವ ವೇದಿಕೆಯಿಂದ ಬಿಡ್ಡಿಂಗ್ ಮಾದರಿಯ ವಾಲಿಬಾಲ್ ಪಂದ್ಯಾವಳಿ,ಸನ್ಮಾನ

Suddi Udaya

ಓಡಿಲ್ನಾಳ : ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

Suddi Udaya

ರೆಖ್ಯ: ನಾರಾಯಣ ಕುಲಾಲ್ ನಿಧನ

Suddi Udaya

ಬಿಜೆಪಿ ಕಳೆಂಜ ಬೂತ್ ಸಮಿತಿಯ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಆಯ್ಕೆ

Suddi Udaya
error: Content is protected !!