July 23, 2026
ವರದಿ

ತಾಲೂಕಿನ ಪುಟಾಣಿಗಳಿಗೆ ಕೆಜಿ ಲೆಕ್ಕದಲ್ಲಿ ಆಕರ್ಷಕವಾದ ಬಟ್ಟೆ ಖರೀದಿಗೆ ಸುವರ್ಣಾವಕಾಶ ಬೆಳ್ತಂಗಡಿಯಲ್ಲಿ ನೂತನವಾಗಿ ಶುಭಾರಂಭಗೊಂಡ ಬೇಬಿ ಕ್ಲೌಡ್ ಕೆಜಿ ಮಾರ್ಟ್ ಕೆಜಿ ಲೆಕ್ಕದಲ್ಲಿ ಮಕ್ಕಳ ಉಡುಪು ನೀಡುವ ಈ ಉದ್ಯಮ ಸಫಲವಾಗಲಿ – ರಕ್ಷಿತ್ ಶಿವಾರಂ

ಬೆಳ್ತಂಗಡಿ: ತಾಲೂಕಿನ ಪುಟಾಣಿಗಳಿಗೆ ಕೆಜಿ ಲೆಕ್ಕದಲ್ಲಿ ಆಕರ್ಷಕವಾದ ಬಟ್ಟೆ ಖರೀದಿಗೆ ಬೇಬಿ ಕ್ಲೌಡ್ ಕೆಜಿ ಮಾರ್ಟ್ ಅವಕಾಶ ಕಲ್ಪಿಸಿದ್ದು ಬೆಳ್ತಂಗಡಿಯ ಬಸ್ ಸ್ಟ್ಯಾಂಡ್ ಬಳಿಯಿರುವ ಸಾಂತೋಮ್ ಟವರ್ಸ್ ನಲ್ಲಿ ಜು. 24ರಂದು ಶುಭಾರಂಭಗೊಂಡಿತು.

ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವಾರಂ ಬೆಳ್ತಂಗಡಿಯಲ್ಲಿ ವಿನೂತನ ಪ್ರಯತ್ನದೊಂದಿಗೆ ಮಕ್ಕಳ ಉತ್ತಮ ಗುಣಮಟ್ಟದ ವಸ್ತ್ರಗಳನ್ನು ಕೆಜಿ ಲೆಕ್ಕದಲ್ಲಿ ನೀಡುವ ಮಳಿಗೆಯ ಈ ಪ್ರಯೋಗಕ್ಕೆ ಯಶಸ್ವಿಯಾಗಿ ನಡೆಯಲಿ. ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿದೆ. ಅಜರುದ್ದೀನ್ ಅವರ ಈ ಹೆಜ್ಜೆ ಸಫಲಗೊಳ್ಳಲಿ ಎಂದು ಅಭಿಪ್ರಾಯಪಟ್ಟರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್,ಸಾಂತೋಮ್ ಟವರ್ ನಿರ್ದೇಶಕ ಬಿನೋಯಿ, ನಾವೂರು ಗ್ರಾಮ ಪಂಚಾಯತ್ ಸದಸ್ಯ, ಸ್ಥಾಪಕ ಹಸೈನರ್ ಎಂಕೆ, ಪ್ರಶಸ್ತಿ ವಿಜೇತ ಶಿಕ್ಷಕ ಯಾಕೂಬ್ ಎಸ್ ಕೊಯ್ಯುರು, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಮೆರಿಟಾ ಪಿಂಟೋ ಹಾಗೂ ಸೌಮ್ಯಲತಾ, ಅನುಗ್ರಹ ವಿದ್ಯಾ ಸಂಸ್ಥೆಯ ಮಾಲಕ ತಲಹತ್, ಝಿನತ್ ಉಜಿರೆ,ಇಮೇಜ್ ಮೊಬೈಲ್ ಮಾಲೀಕ ಮೊಹಮ್ಮದ್ ಹರ್ಷದ್ ಸಹಿತ ಮುಂತಾದವರು ಉಪಸ್ಥಿತರಿದ್ದರು.ಸಂಸ್ಥೆಯ ಮಾಲಕ ಅಜರ್ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ,ಸತ್ಕರಿಸಿದರು.

ಇಮೇಜ್ ಮೊಬೈಲ್ ನ ಎಲ್ಲರೂ ಸಹಕರಿಸಿದರು.ಹುಟ್ಟಿದ ಮಗುವಿನಿಂದ ಹಿಡಿದು ಹತ್ತು,ಹದಿನಾಲ್ಕು ವರ್ಷದ ಮಕ್ಕಳವರೆಗೆ ಉತ್ತಮ ಗುಣಮಟ್ಟದ ಬಟ್ಟೆಗಳು ಕೆಜಿ ಲೆಕ್ಕದಲ್ಲಿ ದೊರೆಯಲಿದೆ.ಒಂದು ಕೆಜಿಗೆ ರೂ. 999,ಒಂದು ಪೀಸ್ ಬಟ್ಟೆಗೆ ರೂ.19 ರಿಂದ ಪ್ರಾರಂಭ,ರೂ.499 ಕ್ಕೆ ಬ್ರಾಂಡೆಡ್ ಸರ್ಪಲೆಸ್ ಬಟ್ಟೆಗಳು ದೊರೆಯುತ್ತದೆ ಎಂದು ಇಮೇಜ್ ಗ್ರೂಪ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.ಮಾಹಿತಿಗಾಗಿ 9731209508,9901309508 ಈ ನಂಬರನ್ನು ಸಂಪರ್ಕಿಸಬಹುದು.

Related posts

ವಕ್ಫ್‌ ಕಾಯ್ದೆಯನ್ನು ಶೀಘ್ರವಾಗಿ ತಿದ್ದುಪಡಿ ಮಾಡಬೇಕು ಮತ್ತು ಎಚ್.ಡಿ. ಕುಮಾರಸ್ವಾಮಿಯನ್ನು ವರ್ಣದ ವಿಚಾರವಾಗಿ ನಿಂದಿಸಿದ ಸಚಿವ ಜಮೀರ್ ಅಹ್ಮದ್ ಖಾನ್ ಕ್ಷಮೆಯಾಚಿಸಬೇಕೆಂದು ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಅಗ್ರಹ

Suddi Udaya

ಉರುವಾಲು ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ವಾರ್ಷಿಕ ಮಹಾಸಭೆ

Suddi Udaya

ಭಾರತೀಯ ಜೀವ ವಿಮಾ ನಿಗಮದ ಬೆಳ್ತಂಗಡಿ ಉಪಗ್ರಹ ಶಾಖಾಧಿಕಾರಿಯಾಗಿ ಸಂತೋಷ್ ರೆಡ್ಡಿ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವನಮಹೋತ್ಸವ ಆಚರಣೆ

Suddi Udaya

ಉರುವಾಲು : ವಿಷ ಸೇವಿಸಿ ಯುವಕ ಆತ್ಮಹತ್ಯೆ

Suddi Udaya

ಉಜಿರೆ : ಬೆನಕ ಹೆಲ್ತ್ ಸೆಂಟರ್ ವತಿಯಿಂದ ಬದನಾಜೆ ಸ.ಉ.ಪ್ರಾ. ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya
error: Content is protected !!