ಪದ್ಮುಂಜ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ ಗುರುವಾಯನಕೆರೆ ಶ್ರೀ ಗೌರಿ ಜ್ಞಾನವಿಕಾಸ ಕೇಂದ್ರ ಪದ್ಮುಂಜದಲ್ಲಿ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕ ಕಾರ್ಯಕ್ರಮವನ್ನು ಒಕ್ಕೂಟದ ಅಧ್ಯಕ್ಷ ಗಿರಿಧರ ಗೌಡ , ತಾಲೂಕು ಯೋಜನಾಧಿಕಾರಿಗಳು ಅಶೋಕ್, ಆರ್ಥಿಕ ಸಾಕ್ಷಾರತ ಕೇಂದ್ರದ ಕೌನ್ಸಿಲರ್ ಉಷಾ ವಿ. ನಾಯಕ್ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಇಂದಿರಾ ಉದ್ಘಾಟಿಸಿದರು.

ಹೇಮಾವತಿ ವಿ .ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯುವ ಜ್ಞಾನ ವಿಕಾಸ ಕಾರ್ಯಕ್ರಮದ ಮಹತ್ವ ಹಾಗೂ ಅನುಷ್ಠಾನದ ಬಗ್ಗೆ ಯೋಜನಾಧಿಕಾರಿಗಳು ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ಪೌಷ್ಟಿಕ ಆಹಾರದ ಬಗ್ಗೆ ತಿಳಿಸಿದರು. ವಲಯ ಮೇಲ್ವಿಚಾರಕಿ ಶಿಲ್ಪಾ, ಜ್ಞಾನ ವಿಕಾಸ ಸಮನ್ವಯಧಿಕಾರಿ ಪೂರ್ಣಿಮಾ, ಸೇವಾಪ್ರತಿನಿಧಿ ತಾರಾ, ಕೇಂದ್ರದ ಸಂಯೋಜಕಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಪೌಷ್ಟಿಕ ಆಹಾರ ತಯಾರಿ ಮಾಡಿದ ಸದಸ್ಯರು ಅನಿಸಿಕೆ ವ್ಯಕ್ತಪಡಿಸಿದರು. ಜ್ಞಾನವಿಕಾಸ ಸದಸ್ಯೆ ಚಂದ್ರಾವತಿ ಅನಾರೋಗ್ಯದಿಂದ ನಡೆದಾಡಲು ಅಸಾಧ್ಯವಾಗಿದ್ದು ಇವರಿಗೆ ಶ್ರೀ ಕ್ಷೇತ್ರದಿಂದ ಜನಮಂಗಳ ಕಾರ್ಯಕ್ರಮ ದಡಿಯಲ್ಲಿ ಸಿಗುವ ಕಾಮೋಡೋ ವೀಲ್ ಚೇರ್ ನ್ನು ವಿತರಣೆ ಮಾಡಲಾಯಿತು.











