July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಎಸ್.ಡಿ.ಎಂ. ಮಹಿಳಾ ಐ.ಟಿ.ಐ. ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭ ಹಾಗೂ ಆಟಿದ ಕೂಟ

ಉಜಿರೆ: ನಿಸ್ವಾರ್ಥವಾಗಿ ನಮ್ಮ ಕ್ಷೇಮವನ್ನು ಬಯಸುವವರು ಇದ್ದಾರೆಂದಾದರೆ ಅದು ನಮ್ಮ ಹೆತ್ತವರು ಮಾತ್ರ. ಹಾಗಾಗಿ ಅವರನ್ನು ಧಿಕ್ಕರಿಸಿ ನಡೆಯಬಾರದು. ಬದುಕಿಗೆ ಮಾರ್ಗದರ್ಶನ ನೀಡುವ ಗುರುಗಳು ಹಾಗೂ ಪೋಷಕರಿಗೆ ಸದಾ ಋಣಿಯಾಗಿರುವುದು ಅಗತ್ಯ” ಉಜಿರೆ ಎಸ್.ಡಿ.ಎಂ. ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ರವೀಶ್ ಪಡುಮಲೆ ಹೇಳಿದರು.

ಉಜಿರೆ ಎಸ್.ಡಿ.ಎಂ. ಮಹಿಳಾ ಐ.ಟಿ.ಐ. ಕಾಲೇಜಿನಲ್ಲಿ ಜು.25ರಂದು ಅವರು ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭ ಹಾಗೂ ಆಟಿದ ಕೂಟ ಕಾರ್ಯಕ್ರಮಕ್ಕೆ ಅಡಿಕೆ ಹಿಂಗಾರ ಅರಳಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿ ಹಾಗೂ ಗುರುಗಳು ತಲೆತಗ್ಗಿಸುವ ಕೆಲಸ ಮಾಡದೆ ಸಮಾಜದಲ್ಲಿ ಆದರ್ಶಪ್ರಾಯರಾಗಿ ಬಾಳಬೇಕು ಎಂದು ಅವರು ತಿಳಿಸಿದರು.

ಆಟಿ ಆಚರಣೆ ಕುರಿತು ಮಾತನಾಡಿದ ಅವರು, “ತುಳು ಸಂಸ್ಕೃತಿ ಪ್ರಕಾರ ಪಗ್ಗು ತಿಂಗಳು (ಸೌರಮಾನ ಯುಗಾದಿಯಿಂದ ಆರಂಭಗೊಂಡು) ಸುಗ್ಗಿ ತಿಂಗಳಿನ ತನಕ ಬರುವ ತಿಂಗಳುಗಳು ಅದರಲ್ಲೂ ಆಟಿ ನಾಲ್ಕನೇ ತಿಂಗಳು ತುಂಬಾ ವಿಶೇಷವಾದ ತಿಂಗಳು. ನಮ್ಮ ಹಿರಿಯರು ಗದ್ದೆಯಲ್ಲಿ ನೇಜಿ (ಬತ್ತದ ನಾಟಿ) ಮಾಡುತ್ತಿದ್ದರು. ಅಲ್ಲದೆ ಈ ಸಂದರ್ಭದಲ್ಲಿ ಹೊರಗೆ ಹೋಗಲು ಅನಾನುಕೂಲ ಇದ್ದ ಕಾರಣ ಪ್ರಕೃತಿಯಲ್ಲಿ ಸಹಜವಾಗಿ ಲಭಿಸುವ ದವಸ ಧಾನ್ಯ, ಸೊಪ್ಪು, ತರಕಾರಿ ತಿಂದು ಬದುಕು ಸಾಗಿಸುತ್ತಿದ್ದರು. ಅದೇ ಸಂಸ್ಕೃತಿ ಇಂದು ನಾವು ಆಚರಿಸುತ್ತಿದ್ದೇವೆ” ಎಂದರು.

ನಮಗೋಸ್ಕರ, ನಮ್ಮ ಸಮಾಜಕ್ಕೋಸ್ಕರ ಯಾರು ನಿಸ್ವಾರ್ಥ ಸೇವೆ ಮಾಡುತ್ತಾರೋ ಅವರಲ್ಲಿ ದೇವರನ್ನು ಕಾಣಬಹುದು. ಪ್ರಸ್ತುತ ಹೆಗ್ಗಡೆಯವರು ತಮಗೋಸ್ಕರ ಆಸ್ತಿ ಮಾಡದೆ ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ಅನೇಕ ಜವಾಬ್ದಾರಿಯುತ ಜನಪರ ಕಾರ್ಯಕ್ರಮ ಮಾಡುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೆ, ಸರಕಾರದ ಅನೇಕ ಸವಲತ್ತುಗಳನ್ನು ಹಳ್ಳಿಯ ಮೂಲೆ-ಮೂಲೆಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ವಿದ್ಯಾದಾನ, ಅನ್ನದಾನ, ಔಷಧ ದಾನ ಮುಂತಾದ ಅನೇಕ ಕಾರ್ಯಕ್ರಮಗಳ ಮೂಲಕ ಸಮಾಜದ ಹೆಣ್ಣುಮಕ್ಕಳ ಕಣ್ಣೀರು ಒರೆಸುವ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ನಾವು ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಸಂಸ್ಕೃತಿಯನ್ನು ಬೆಳೆಸಬೇಕು. ಅದರ ಬದಲು ಅದನ್ನು ಹಾಳು ಮಾಡುವ ಪ್ರಯತ್ನ ಮಾಡಬಾರದು. ನಮಗೆ ವಿದ್ಯೆಯ ಮೂಲಕ ಉತ್ತಮ ಜ್ಞಾನ, ಸಂಸ್ಕೃತಿ ಕಲಿಸಿದ ಹೆತ್ತವರು, ಗುರುಗಳು ತಲೆ ತಗ್ಗಿಸುವ ಕೆಲಸ ಮಾಡಬಾರದು ಎಂದು ಡಾ. ರವೀಶ್ ಪಡುಮಲೆ ತಿಳಿಸಿದರು.


ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಹಾಸ್ಟೆಲ್ ವಿಭಾಗದ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಯುವರಾಜ ಪೂವಣಿ ಅವರು ಮಾತನಾಡಿ, ಶಿಕ್ಷಣದಲ್ಲಿ ಜೀವನ ನಿರ್ವಹಣೆ, ಉತ್ತಮ ಸಂಸ್ಕಾರ, ಆತ್ಮಸ್ಥೈರ್ಯ, ಆತ್ಮಸಂತೃಪ್ತಿ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶ ಹೊಂದಿದಾಗ ಎಲ್ಲಿಯೂ ಹೋಗಿ ಹೇಗೂ ಉದ್ಯೋಗ ಮಾಡಿ ಬದುಕಬಹುದು ಎಂದು ಕಿವಿಮಾತು ಹೇಳಿದರು.

ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಸ್ವಾಗತಿಸಿದರು. ಕಿರಿಯ ತರಬೇತಿ ಅಧಿಕಾರಿಗಳಾದ ಕ್ಷಮಾ ವಂದಿಸಿ, ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.

Related posts

ಬಿ.ಸಿ ರೋಡ್ ಯುವತಿಯ ಹತ್ಯೆ ಪ್ರಕರಣ: ಆರೋಪಿಯ ಫೋಟೋ ತಿರುಚಿ ಬಜರಂಗದಳದ ವಿರುದ್ಧ ಅಪಪ್ರಚಾರ; ಪ್ರಕರಣ ದಾಖಲು

Suddi Udaya

ಯುವ ವೈಭವ: ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕಕ್ಕೆ ಸಮಗ್ರ ಪ್ರಶಸ್ತಿ

Suddi Udaya

ಆರಂಬೋಡಿ: ಎಲ್ಲಾ ಸರಕಾರಿ ಹಿರಿಯ, ಕಿರಿಯ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮನೋಜ್ ಶೆಟ್ಟಿ ಐತ್ತೇರಿ ರವರಿಂದ ಉಚಿತ ನೋಟ್‌ಪುಸ್ತಕ ವಿತರಣೆ

Suddi Udaya

ನಾಳೆ (ಮಾ.1): ಕಕ್ಕಿಂಜೆ ವಿದ್ಯುತ್‌ ನಿಲುಗಡೆ

Suddi Udaya

ಮಾ.10: ಅಂತರಾಷ್ಟ್ರೀಯ ಬಿಲ್ಲವರ ಮಹಾ ಸಮಾವೇಶ: ಕಳಿಯ ಗ್ರಾಮದ ಬಿಲ್ಲವರ ಪೂರ್ವಭಾವಿ ಸಭೆ

Suddi Udaya

ಎ.18 : ಎಸ್.ಡಿ.ಪಿ.ಐ ಅಭ್ಯರ್ಥಿ ಅಕ್ಬರ್ ನಾಮಪತ್ರ ಸಲ್ಲಿಕೆ

Suddi Udaya
error: Content is protected !!