July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ನಡ ಸ. ಪ.ಪೂ. ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

ನಡ: ಮನುಷ್ಯರಾದ ಮೇಲೆ ಎಲ್ಲವನ್ನೂ ಸಾಧಿಸುವ ಸಾಮರ್ಥ್ಯ, ಧೈರ್ಯ ಇರಬೇಕು. ಗಡಿಯಲ್ಲಿ ಚಳಿ, ಮಳೆಯನ್ನು ಲೆಕ್ಕಿಸದೆ ದೇಶ ಕಾಯುವ ಯೋಧರಿಂದಾಗಿ ನಾವು ನೆಮ್ಮದಿಯ ನಿದ್ರೆ ಮಾಡುತ್ತೇವೆ, ಸೈನಿಕರಾಗಿ ಸೇರಿ ದೇಶಸೇವೆ ಮಾಡಲು ಎಲ್ಲರೂ ಮನಸು ಮಾಡಬೇಕೆಂದು ಮಾಜಿ ವೀರ ಯೋಧ ವಿಕ್ಟರ್ ಕ್ರಾಸ್ಟಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ನಡ ಸ. ಪ. ಪೂ. ಕಾಲೇಜಿನ ಕಲ್ಪನಾ ಚಾವ್ಲಾ ರೇಂಜರ್ಸ್ ಘಟಕದ ವತಿಯಿಂದ ನಡೆಸಿದ ಕಾರ್ಗಿಲ್ ವಿಜಯ ದಿನ-೨೬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಹಿರಿಯ ಉಪನ್ಯಾಸಕಿ ಲಿಲ್ಲಿ ಪಿ.ವಿ. ಉಪಸ್ಥಿತರಿದ್ದರು.

ರೇಂಜರ್ ಶಶಿಕಲಾ ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ಅವರ ಧೀರೋದಾತ್ತ ವ್ಯಕ್ತಿತ್ವವನ್ನು ವಿವರಿಸಿದರು. ರೇಂಜರ್ ಸುರಕ್ಷಿತಾ ಅತಿಥಿಗಳನ್ನು ಪರಿಚಯಿಸಿದರು. ರೇಂಜರ್ ಲೀಡರ್ ವಸಂತಿ ಪಿ. ಪ್ರಾಸ್ತಾವಿಸಿದರು. ರೇಂಜರ್ ಸುದಿಶಾ ಸ್ವಾಗತಿಸಿ, ರೇಂಜರ್ ಸಿಂಚನಾ ಕಾರ್ಯಕ್ರಮ ನಿರೂಪಿಸಿ, ರೇಂಜರ್ ಗಾಯತ್ರಿ ವಂದಿಸಿದರು.

Related posts

ಶ್ರೀ ರಾಮ ಕ್ಷೇತ್ರದಲ್ಲಿ ಬಳಂಜ ಸಂಘದಿಂದ ಶ್ರೀ ರಾಮತಾರಕ ಮಂತ್ರ

Suddi Udaya

ಕಳೆದ ರಾತ್ರಿ ಸುರಿದ ಗುಡುಗು ಸಹಿತ ಜೋರಾದ ಗಾಳಿ ಮಳೆ: ಮುಂಡಾಜೆ- ಕಲ್ಮಂಜದಲ್ಲಿ 2 ಮನೆಗಳಿಗೆ ಮರ ಬಿದ್ದು ಸಂಪೂರ್ಣ ಹಾನಿ

Suddi Udaya

ಕುಂಟಾಲಪಳಿಕೆ ಅಂಗನವಾಡಿ ಕೇಂದ್ರದ 28ನೇ ವರ್ಷದ ಸಂಭ್ರಮ “ಮಕ್ಕಳ ಹಬ್ಬ

Suddi Udaya

ಉಳ್ಳಾಲ ಖಾಝಿಯಾಗಿ ಶೈಖುನಾ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ನೇಮಕ

Suddi Udaya

ಬೆಳ್ತಂಗಡಿ ರೋಟರಿ ಕುಟುಂಬ ಸಮ್ಮಿಲನದಲ್ಲಿ ರೋಟರಿ ಕ್ಲಬ್ ಸಾಧನೆಗೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಂದ ಶ್ಲಾಘನೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮತ್ತು ಡಾ.ಹೆಗ್ಗಡೆಯವರ ವ್ಯಕ್ತಿತ್ವದ ತೇಜೋವಧೆ: ಭಾರತೀಯ ಜೈನ್ ಮಿಲನ್ ಸಭೆಯಲ್ಲಿ ಖಂಡನಾ ನಿರ್ಣಯ

Suddi Udaya
error: Content is protected !!