ವೇಣೂರು : ಇತ್ತೀಚೆಗೆ ನಿಧನರಾದ ದಿ| ಕಮಲ ಬಂಗೇರರ ಶೃದ್ಧಾಂಜಲಿ ಸಭೆಯು ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಆ.3ರಂದು ನಡೆಯಿತು.
ಈ ವೇಳೆ ಶಾಸಕ ಹರೀಶ್ ಪೂಂಜರು ನುಡಿನಮನ ಸಲ್ಲಿಸಿದರು. ನಂತರ ದಿ| ಕಮಲ ಬಂಗೇರರ ಸ್ಮರಣಾರ್ಥವಾಗಿ ಮಕ್ಕಳು ರೂ.12,22000 ದೇಣಿಗೆಯನ್ನು ದೇವಸ್ಥಾನದ ಜೀರ್ಣೋದ್ಧಾರಕ್ಕೆ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಜಯರಾಮ್ ಶೆಟ್ಟಿ, ಅಶೋಕ್, ನಾರಾಯಣ ಭಟ್, ಜಯ ಸಾಲ್ಯಾನ್, ಜಾನಕಿ, ಪುರುಷೋತ್ತಮ ಹಾಗೂ ಜೀರ್ಣೋದ್ಧಾರ ಸಮಿತಿ ಮತ್ತು ವ್ಯವಸ್ಥಾಪನಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.











