July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆಯಲ್ಲಿ ರೈತ ತರಬೇತಿ ಕಾರ್ಯಕ್ರಮ

ಬೆಳ್ತಂಗಡಿ : ಜಿಲ್ಲಾ ರೈತ ತರಬೇತಿ ಕೇಂದ್ರ ಬೆಳ್ತಂಗಡಿ ಹಾಗೂ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟ ಉಜಿರೆ ಇವರ ಸಹಯೋಗದಲ್ಲಿ ಒಂದು ದಿನದ ರೈತ ತರಬೇತಿ ಕಾರ್ಯಕ್ರಮ ಉಜಿರೆ ಗ್ರಾಮದ ಕಿರಿಯಾಡಿ ಸದಾಶಿವೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಅರ್ಚಕರಾದ ಕೃಷ್ಣ ಹೊಳ್ಳ ರವರ ಅಧ್ಯಕ್ಷತೆಯಲ್ಲಿ ಆ.6ರಂದು ನಡೆಯಿತು.

ಕೃಷಿ ಸಖಿ ಭಾಗೀರಥಿ ಇವರು ವಾಸ್ತವಿಕವಾಗಿ ಮಾತಾಡಿ ಬೆಳೆ ವಿಮೆ ಬೆಳೆ ಸಮೀಕ್ಷೆಯ ಬಗ್ಗೆ ಹಾಗೂ ರೈತ ತರಬೇತಿಯ ಮಹತ್ವವನ್ನು ತಿಳಿಸಿದರು.

ಸಭೆಯನ್ನು ಉದ್ಘಾಟಿಸಿ ಮಾತಾಡಿದ ಅರ್ಚಕರಾದ ಕೃಷ್ಣ ಹೊಳ್ಳ ಇದು ಬಹಳ ಉತ್ತಮವಾದ ಕಾರ್ಯಕ್ರಮ ನಾವು ರೈತರು ಮಾಡುವ ತಪ್ಪುಗಳನ್ನು ತಿದ್ದಿಕೊಂಡು ಇಂತಹ ತರಬೇತಿಯಲ್ಲಿ ಮಾಹಿತಿ ಪಡೆದು ಅಭಿವೃದ್ಧಿ ಹೊಂದಬೇಕು ಎಂದು ಶುಭ ಹಾರೈಸಿದರು. ಕೃಷಿ ಇಲಾಖೆಯ ನವನೀತ ಮಾತಾಡಿ , ನ್ಯಾಚುರಲ್ ಫಾರ್ಮಿಂಗ್ ಬೆಳೆ ಸಮೀಕ್ಷೆ ಬೆಳೆ ವಿಮೆ ಕೃಷಿ ಇಲಾಖೆಯಲ್ಲಿ ಸಿಗುವ ಸವಲತ್ತುಗಳು ಹಾಗೂ ಅದನ್ನು ಪಡೆದುಕೊಳ್ಳುವ ವಿಧಾನಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾದ ಪ್ರಭಾಕರಮಯ್ಯ ಇವರು ಅಡಿಕೆ ಹಾಗೂ ತೆಂಗು ಗಿಡಗಳಿಗೆ ಬರುವ ರೋಗಗಳು ಹಾಗೂ ಅದನ್ನು ನಿಯಂತ್ರಣ ಮಾಡುವ ವಿಧಾನ ಗಿಡಗಳಿಗೆ ಗೊಬ್ಬರ ಹಾಕುವ ಸಮರ್ಪಕ ವಿಧಾನಗಳು ಬೋರ್ಡೋ ದ್ರಾವಣದ ಮಿಶ್ರಣ ಹಾಗೂ ಅದರ ಪ್ರಾತ್ಯಕ್ಷಿಕೆಯನ್ನು ಮನಮುಟ್ಟುವಂತೆ ರೈತರಿಗೆ ತಿಳಿಸಿದರು. ಪಶುಸಖಿ ಏಕಲತಾ ಇವರು ಪಶು ಇಲಾಖೆಯ ಮಾಹಿತಿ ನೀಡಿದರು.

ಸಭೆಯಲ್ಲಿ ಪಂಚಾಯತ್ ಸದಸ್ಯರಾದ ಶಶಿಕಲಾ ದೇವಪ್ಪ ಗೌಡ , ಮಾಜಿ ಸದಸ್ಯರಾದ ಮಂಜಪ್ಪ ಬಂಗೇರ, ಹಿರಿಯರಾದ ಕೊರಗಪ್ಪ ಗೌಡ , ರೈತರು, ರೈತ ಮಹಿಳೆಯರು ಭಾಗವಹಿಸಿದ್ದರು . ರಾಜೇಶ್ವರಿ ಚಂದ್ರಕಾಂತ್ ಸ್ವಾಗತಿಸಿದರು.

Related posts

ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಮಾಜಿ ಶಾಸಕ ದಿ| ಕೆ. ವಸಂತ ಬಂಗೇರರಿಗೆ ನುಡಿನಮನ

Suddi Udaya

ಶಿಶಿಲ : ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಡಿತ; ಮಹಿಳೆ ಸಾವು

Suddi Udaya

ಡೆನ್ನಾನ ಡೆನ್ನನ ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ: ಯುವವಾಹಿನಿ ಬೆಳ್ತಂಗಡಿ ಘಟಕಕ್ಕೆ ಚತುರ್ಥ ಸ್ಥಾನ

Suddi Udaya

ಉಜಿರೆ: ಅಂತರ್ ಕಾಲೇಜು ಮಟ್ಟದ ವಾಲಿಬಾಲ್ ಪಂದ್ಯಾಟ: ಎಸ್ ಡಿ ಎಮ್ ಕಾಲೇಜಿಗೆ ಚಾಂಪಿಯನ್ ಶಿಪ್ ಪಟ್ಟ

Suddi Udaya

ಉಜಿರೆ ರುಡ್ ಸೆಟ್ ಬಳಿ ಕಾರುಗಳು ಪರಸ್ಪರ ಡಿಕ್ಕಿ

Suddi Udaya

ಎಲ್ ಸಿ ಆರ್ ವಿದ್ಯಾ ಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

Suddi Udaya
error: Content is protected !!