25.1 C
ಪುತ್ತೂರು, ಬೆಳ್ತಂಗಡಿ
August 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪುತ್ತೂರು ಮುಳಿಯದಲ್ಲಿ ಡೈಮಂಡ್ ಉತ್ಸವಕ್ಕೆ ಚಾಲನೆ

ಪುತ್ತೂರು: ಚಿನ್ನ, ವಜ್ರಾಭರಣಗಳಲ್ಲಿ ಸದಾ ಹೊಸತನ ಪರಿಚಯಿಸುವ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರವಾಗಿರುವ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ನಲ್ಲಿ ಆ.7 ರಂದು ಡೈಮಂಡ್ ಫೆಸ್ಟ್‌ ಗೆ ಚಾಲನೆ ನೀಡಲಾಯಿತು.

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಚಿನ್ನ, ವಜ್ರ ಆಭರಣಗಳ ವ್ಯವಹಾರದಲ್ಲಿ ವಿಶ್ವಾಸ, ನಂಬಿಕೆ ಬೇಕು. ಇಂತಹ ನಂಬಿಕೆ ಮುಳಿಯ ಗೋಲ್ಡ್ ಡೈಮಂಡ್ಸ್ ಸಂಸ್ಥೆಯಲ್ಲಿದೆ. ನಾಡಿನಾದ್ಯಂತ ಗ್ರಾಹಕರ ಪ್ರೀತಿ ವಿಶ್ವಾಸಕ್ಕೆ ಮುಳಿಯ ಸಂಸ್ಥೆ ಪಾತ್ರವಾಗಿದೆ ಎಂದರು.

ಮುಳಿಯದವರು ಆಭರಣ ವ್ಯವಹಾರ ಅಲ್ಲದೆ ಮನೆ ನಿರ್ಮಾಣದ ಲೇಔಟ್ ಕೂಡ ಕೊಡುತ್ತಿದ್ದಾರೆ. ಅವರ ವ್ಯವಹಾರ ಪಾರದರ್ಶಕತೆಯಲ್ಲಿ ಇರುತ್ತದೆ. ಮುಳಿಯ ಕುಟುಂಬದ ಹಿರಿಯರು ದಾನಧರ್ಮದಲ್ಲಿ ಮುಂಚೂಣಿಯಲ್ಲಿದ್ದಾರೆ. ಪುತ್ತೂರು ಕಂಬಳಕ್ಕೂ ತುಂಬಾ ಸಹಕಾರ ನೀಡುತ್ತಿದ್ದಾರೆ. ಬಡವರ ಕುಟುಂಬದ ಕಣ್ಣೀರೊರೆಸುವ ಕಾರ್ಯ ಮಾಡುತ್ತಿದ್ದಾರೆ. ಎಂದ ಅವರು ಮುಳಿಯದವರ ಪ್ರೀತಿ, ವಿಶ್ವಾಸದಿಂದ ನಾನು ಇಲ್ಲಿಗೆ ಆಗಮಿಸಿದ್ದೇನೆ ಎಂದು ಹೇಳಿ ಶುಭಹಾರೈಸಿದರು.

ಮುಖ್ಯ ಅತಿಥಿ ಸಂತ ಫಿಲೋಮಿನಾ ಪದವಿ (ಸ್ವಾಯತ್ತ) ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆಯಾದ ಭಾರತಿ ಎಸ್. ರೈ ಮಾತನಾಡಿ ಆಭರಣಗಳನ್ನು ಖರೀದಿಸುವುದು, ಧರಿಸುವುದು ನಮ್ಮ ಸಂಸ್ಕೃತಿಯಲ್ಲಿ ಸೇರಿ ಹೋಗಿದೆ. ವಜ್ರ ಅಂದರೆ ಕೇವಲ ಕಲ್ಲಲ್ಲ, ಶುದ್ದತೆ, ಶಕ್ತಿ ವರ್ಧತೆ ಹಾಗೂ ಶಾಶ್ವತ ಪ್ರೇಮವನ್ನು ಸೂಚಿಸುತ್ತದೆ. ಇದು ವೈಭವ, ಮನೋರಂಜನೆ, ಸಾಮರಸ್ಯವನ್ನು ಹೆಚ್ಚಿಸುತ್ತದೆ. ಬಂಗಾರ ಮತ್ತು ವಜ್ರ ಧಾರ್ಮಿಕ ಪರಂಪರೆಯನ್ನು ಸೂಚಿಸುತ್ತದೆ ಎಂದರು.

ನಿರಂತರ ನಂಬಿಕೆ, ವೈವಿಧ್ಯಮಯವಾದ ವಿನ್ಯಾಸಗಳಿಂದ ಮುಳಿಯ ಗೋಲ್ಡ್ ಡೈಮಂಡ್ಸ್‌ನ ವೈಶಿಷ್ಟ್ಯತೆ ಅಡಗಿದೆ. ಗುಣಮಟ್ಟದೊಂದಿಗೆ ಜತೆಯಾಗಿ ಖಚಿತತೆ ಮತ್ತು ಪ್ರಾಮಾಣಿಕತೆಯೊಂದಿಗೆ ಬಂದಿದೆ. 2002ರಿಂದ ನಾನು ಮತ್ತು ನನ್ನ ಕುಟುಂಬ ಮುಳಿಯದ ಗ್ರಾಹಕರಾಗಿದ್ದೇವೆ. ವರಮಹಾಲಕ್ಷ್ಮಿ ಹಬ್ಬದ ಹೊಸ್ತಿಲಲ್ಲಿ ನಾವು ಇದ್ದೇವೆ. ಹಬ್ಬದ ಸಮಯದಲ್ಲಿ ನಿಮಗಿಷ್ಟವಾದ ವಿನ್ಯಾಸದ ಆಭರಣಗಳನ್ನು ಖರೀದಿಸಿ. ಮುಳಿಯ ಸಿಬ್ಬಂದಿಗಳ ನಗುಮೊಗದ ಸೇವೆ ಪಡೆಯಿರಿ ಎಂದು ಹೇಳಿದ ಅವರು ಮುಳಿಯ ಸಂಸ್ಥೆಯ ಹೆಸರು ನಾಲ್ಕಡಿಯಾಗಿ ಬೆಳಗಲಿ ಎಂದು ಹಾರೈಸಿದರು.
ಪ್ರಥಮ ಗ್ರಾಹಕರಿಗೆ ವಜ್ರಾಭರಣ ಹಸ್ತಾಂತರ: ಡೈಮಂಡ್ಸ್ ಫೆಸ್ಟ್ ನ ಪ್ರಥಮ ಗ್ರಾಹಕರಿಗೆ ಆಭರಣ ಹಸ್ತಾಂತರಿಸಲಾಯಿತು. ಪ್ರಥಮ ಗ್ರಾಹಕರಾದ ಸ್ನೇಹ ಸಿಮ್ಮನ ಮಾಲಕರಾದ ಸತೀಶ್ ದಂಪತಿಯವರಿಗೆ ಅತಿಥಿಗಳು ಆಭರಣ ಹಸ್ತಾಂತರಿಸಿದರು.

ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಶ್ರೀ ಪಂಜಿಗುಡ್ಡೆ, ಶೋರೂಮ್ ಮ್ಯಾನೇಜರ್ ರಾಘವೇಂದ್ರ ಪಾಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡೈಮಂಡ್ಸ್ ವಜ್ರಾಭರಣಗಳನ್ನು ಅತಿಥಿಗಳು ಪ್ರದರ್ಶಿಸಿದರು. ಭವ್ಯಶ್ರೀ ಪ್ರಾರ್ಥಿಸಿ, ಫ್ಲೋರ್ ಮ್ಯಾನೇಜರ್ ಯತೀಶ್ ಸ್ವಾಗತಿಸಿದರು. ಆನಂದ ಕುಲಾಲ್ ವಂದಿಸಿದರು.

ಡೈಮಂಡ್‌ ಫೆಸ್ಟ್‌ನಲ್ಲಿ ಅಪರೂಪದ ಸಂಗ್ರಹ
ಭಾರತದಲ್ಲಿ ಪ್ರಪ್ರಥಮ ಬಾರಿಗೆ ಮುಳಿಯದಲ್ಲಿ ಡೈಮಂಡ್ ಟೆಸ್ಟಿಂಗ್ ಮೆಷಿನ್ ಪರಿಚಯಿಸಿದ್ದೇವೆ.

81 ವರ್ಷದ ಅಭೂತಪೂರ್ವ ಪರಂಪರೆ ಹೊಂದಿರುವ ಮುಳಿಯ ಸಂಸ್ಥೆ ಪುತ್ತೂರಲ್ಲಿ ಗ್ರಾಹಕರಿಗೆ ಸೇವೆ ನೀಡುತ್ತಿದೆ. 2002ರಿಂದ ವಜ್ರಗಳ ಉತ್ಸವ ಕಾರ್ಯಕ್ರಮದ ಮೂಲಕ ಗ್ರಾಹಕರಿಗೆ ವಜ್ರಾಭರಣಗಳ ಅತ್ಯುತ್ತಮ ಆಯ್ಕೆ ನೀಡುತ್ತಿದ್ದೇವೆ. ಡೈಮಂಡ್ ಫೆಸ್ಟ್ ನ ವಿಶೇಷತೆ ಎಂದರೆ ಸಾಲಿಟ್ಟಿರ್ ಕಲೆಕ್ಷನ್ಸ್ ಇದೆ. ಅಪರೂಪದ ಕಲೆಕ್ಷನ್‌ನ್ನು ಪರಿಚಯಿಸುತ್ತಿದ್ದೇವೆ. ಶೋರೂಮ್ ಉದ್ಘಾಟನೆ ಸಮಯದಲ್ಲಿ ಡೈಮಂಡ್‌ ಗುಣಮಟ್ಟ ಪರೀಕ್ಷಿಸುವ ಯಂತ್ರವನ್ನು ಲಾಂಚ್ ಮಾಡಿದ್ದೇವೆ. ಈ ಯಂತ್ರ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಮುಳಿಯದಲ್ಲಿ ಆರಂಭಿಸಿದ್ದೇವೆ. ಇದರಲ್ಲಿ ನ್ಯಾಚುರಲ್ ಹಾಗೂ ಲ್ಯಾಟ್ರೋ ಡೈಮಂಡ್‌ನ್ನು ಪರೀಕ್ಷಿಸಲು ಸಾಧ್ಯವಾಗುತ್ತದೆ. ಡೈಮಂಡ್ ಸಂಪೂರ್ಣ ಮಾಹಿತಿಯನ್ನು ನಮ್ಮ ಸಿಬಂದಿಗಳು ನೀಡುತ್ತಿದ್ದಾರೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಿ.

ಕೃಷ್ಣನಾರಾಯಣ ಮುಳಿಯ
ಆಡಳಿತ ನಿರ್ದೇಶಕರು, ಮುಳಿಯ ಗೋಲ್ಡ್ ಆಯಂಡ್ ಡೈಮಂಡ್ಸ್

Related posts

ನಾವೂರು ಸರಕಾರಿ ಪ್ರೌಢ ಶಾಲೆಗೆ ಶೇ. 100 ಫಲಿತಾಂಶ

Suddi Udaya

ಬೆಳ್ತಂಗಡಿ: ರೆಂಕೆದಗುತ್ತು ನಿವಾಸಿ ಪಟ್ಟಣ ಪಂಚಾಯಿತ್ ನಾಮನಿರ್ದೇಶನ ಸದಸ್ಯರ ಅಬ್ದುಲ್ ಬಶೀರ್ ಆತ್ಮಹತ್ಯೆ

Suddi Udaya

ಡಿ.29-31: ಸುಲ್ಕೇರಿಯಲ್ಲಿ ಭಗವಾನ್ 1008 ಶ್ರೀ ನೇಮಿನಾಥ ಸ್ವಾಮಿ ಬಸದಿಧಾಮ ಸಂಪ್ರೋಕ್ಷಣ ಮಹೋತ್ಸವ

Suddi Udaya

ಬೆಳ್ತಂಗಡಿ ಬ್ಲಾಕ್ ಸಮಿತಿಗಳಿಗೆ ಲೋಕಸಭಾ ಚುನಾವಣಾ ಪ್ರಚಾರ ಸಮಿತಿ ಉಸ್ತುವಾರಿಯಾಗಿ ಶಾಹುಲ್ ಹಮೀದ್ ಕೆ.ಕೆ. ಹಾಗೂ ಲೋಕೇಶ್ವರಿ ವಿನಯಚಂದ್ರ ನೇಮಕ

Suddi Udaya

ಶಿರ್ಲಾಲು: ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಅಶೋಧರ ಸಾಲಿಯಾನ್ ನಿಧನ

Suddi Udaya

ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ವತಿಯಿಂದ ಖ್ಯಾತ ಮೂತ್ರರೋಗ ತಜ್ಞ ಡಾ| ಸದಾನಂದ ಪೂಜಾರಿರವರಿಗೆ ಆರೋಗ್ಯ ಸೇವಾ ಶ್ರೇಷ್ಠತೆ ಪ್ರಶಸ್ತಿ

Suddi Udaya
error: Content is protected !!