July 23, 2026
ವರದಿಸಂಘ-ಸಂಸ್ಥೆಗಳು

ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ ವಾರ್ಷಿಕ ವ್ಯವಹಾರ ರೂ.300 ಕೋಟಿ – ಲಾಭ ರೂ.1.13 ಕೋಟಿ – ಶೇ.16 ಡಿವಿಡೆಂಟ್

ಗೇರುಕಟ್ಟೆ: ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.10ರಂದು ಸಂಘದ ಸಹಕಾರಿ ಸಭಾಭವನದಲ್ಲಿ ಜರುಗಿತು. ಸಂಘದ ವಸಂತ ಮಜಲು ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಸಂಘವು ಪ್ರಸಕ್ತ ಸಾಲಿನಲ್ಲಿ ಈ ಸಾಲಿನಲ್ಲಿ ರೂ.300. 34.ಕೋಟಿ ವ್ಯವಹಾರ ನಡೆಸಿ, ರೂ.1.13 ಕೋಟಿ ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ.16ಡಿವಿಡೆಂಡ್ ನೀಡುವುದಾಗಿ ಪೋಷಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ರಾಜ್ ಪ್ರಕಾಶ್ ಶೆಟ್ಟಿ , ನಿರ್ದೇಶಕರಾದ ಹರಿದಾಸ್ ಪಡಂತ್ತಾಯ, ಬಾಲಕೃಷ್ಣ ಬಿರ್ಮೊಟ್ಟು, ಉದಿತ್, ಕೇಶವ ಪೂಜಾರಿ, ಗೋಪಾಲ ಬನ, ಲೋಕೇಶ್, ಕುಶಾಲಪ್ಪ ಗೌಡ, ಮಮತಾ, ಚಂದ್ರಾವತಿ ಹಾಗೂ ಸಂಘದ ಸರ್ವ ಸದಸ್ಯರು, ಡಿ.ಸಿ.ಸಿ. ಪ್ರತಿನಿಧಿ ಸುದರ್ಶನ್ ಉಪಸ್ಥಿತರಿದ್ದರು.

ಅತಿ ಹೆಚ್ಚು ಪೈಪ್ ಬಿಡಿ ಭಾಗಗಳನ್ನು ಖರೀದಿಸಿದ ಸಂಘದ ಸದಸ್ಯರಾದ ಅನುದೀಪ್, ಲಕ್ಷ್ಮಿ, ಶೀಲಾ, ಶಿವರಾಮ ಮಡಿವಾಳ, ಲೀಲಾವತಿ, ಶಿವರಾಮ, ಅತಿ ಹೆಚ್ಚು ರಸಗೊಬ್ಬರ ಖರಿದಿ ಪೆಲಿಕ್ಷ್ ಕೊರಯ ಅವರನ್ನು ಗುರುತಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಶಿಕ್ಷಕರಾದ ಲಕ್ಷ್ಮೀನಾರಾಯಣ, ನಿವೃತ್ತ ಅಂಚೆಪಾಲಕ ಡಾಕಯ್ಯ ಗೌಡ ಕ್ರೀಡೆಯಲ್ಲಿ , ಚಿರಾಗ್, ಶ್ರಜನ್ ರನ್ನು ಅತಿ ಹೆಚ್ಚು ಅಂಕ ಗಳಿಸಿದ ನಮೃತಾ, ಆಕಾಂಕ್ಷ, ಮಾನ್ಯ ವೈ., ಆಕರ್ಷ ಇವರನ್ನು ಸನ್ಮಾನಿಸಲಾಯಿತು .

ನಿರ್ದೇಶಕ ಶೇಖರ್ ನಾಯ್ಕ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕವಿತಾ ವಾರ್ಷಿಕ ವರದಿ ವಾಚಿಸಿದರು. ಲೆಕ್ಕ ಪತ್ರ ಸಿಬ್ಬಂದಿ ಸಂತೋಷ ವಾಚಿಸಿದರು ರಾಜೇಶ್ ಪೆಂರ್ಬಡ ಕಾರ್ಯಕ್ರಮ ನಿರೂಪಿಸಿಸಿಬ್ಬಂದಿ ಸಂತೋಷ್ ಕುಮಾರ್ ಧನ್ಯವಾದವಿತ್ತರು.

Related posts

ಮಚ್ಚಿನ : ಶ್ರೀ ಕ್ಷೇ. ಧ.ಗ್ರಾ, ಯೋಜನೆಯಿಂದ ಆರ್ಥಿಕ ಸಹಾಯಧನ ಹಸ್ತಾಂತರ

Suddi Udaya

ಬೆಳ್ತಂಗಡಿ ಪಾರಸ್ ಪೃಥ್ವಿ ಜುವೆಲ್ಸ್ ನಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ” ಪೃಥ್ವಿ ಮಹಾಪರ್ವ”

Suddi Udaya

ಗ್ರಾಮೀಣ ಸರಕಾರಿ ಪ್ರೌಢಶಾಲೆಯಲ್ಲಿ ಹೀಗೊಂದು ವಿನೂತನ ಶೌಚಾಲಯ

Suddi Udaya

ಲಾಯಿಲ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷರಾಗಿ ಗಣೇಶ್ ಕನ್ನಾಜೆ ಆಯ್ಕೆ

Suddi Udaya

ಶಿಶಿಲೇಶ್ವರ ದೇವಸ್ಥಾನಕ್ಕೆ ವ್ಯವಸ್ಥಾಪನ ಸಮಿತಿ ರಚನೆ ವಿಳಂಬ: ದೇವಸ್ಥಾನ ದೈನಂದಿನ ಪೂಜಾ ಕಾರ್ಯ ಹಾಗೂ ವಾರ್ಷಿಕ ಆಚರಣೆಗಳಿಗೆ ತೀವ್ರ ಅಡಚಣೆ: ಮಳೆಯಿಂದ ದೇವಾಲಯದ ತಡೆಗೋಡೆ ಕುಸಿದು ದೇವಾಲಯದ ಒಳಗೆ ಕೆಸರುಮಯವಾದರೂ ಕೇಳುವವರಿಲ್ಲ: ಭಕ್ತರ ತೀವ್ರ ಅಕ್ರೋಶ, ದೇವಸ್ಥಾನದಲ್ಲಿ ಧರಣಿ ನಡೆಸುವ ಎಚ್ಚರಿಕೆ

Suddi Udaya

ವಾಣಿ ಪದವಿಪೂರ್ವ ಕಾಲೇಜಿನ ನಮೃತ ರಾಜ್ಯಕ್ಕೆ ಹತ್ತನೇ ಸ್ಥಾನ

Suddi Udaya
error: Content is protected !!