ಕಕ್ಕಿಂಜೆ : ಇಲ್ಲಿಯ ಸರಕಾರಿ ಪ್ರೌಢಶಾಲೆಯಲ್ಲಿ ವಿಜ್ರಂಭಣೆಯ ಸ್ವಾತಂತ್ರ್ಯ ದಿನಾಚರಣೆಯನ್ನುಆಚರಿಸಲಾಯಿತು. ಧ್ವಜಾರೋಹಣವನ್ನು ಎಸ್.ಡಿ.ಎಮ್.ಸಿ.ಕಾರ್ಯಾಧ್ಯಕ್ಷ ವಸಂತ ಗೌಡ ನೆರವೇರಿಸಿಕೊಟ್ಟರು.

ಎಸ್.ಡಿ.ಎಮ್.ಸಿ.ಯ ಸದಸ್ಯರಾದ ಕೇಶವ, ಅಬ್ಬಾಸ್ ,ಶ್ರೀಮತಿ ಆಯಿಷಾ, ಕೃಷ್ಣಪ್ಪ ಅನಾರ್ ಉಪಸ್ಥಿತರಿದ್ದರು.
ಸ್ವಾತಂತ್ರ್ಯ ದ ಮಹತ್ವ ಮತ್ತು ದೇಶ ರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ,ಭಾರತ ದೇಶದ ಇತಿಹಾಸದ ಬಗ್ಗೆ ಮುಖ್ಯ ಶಿಕ್ಷಕ ಶಂಭು ಶಂಕರ್, ಉಪನ್ಯಾಸ ನೀಡಿದರು. ಪುರಮೆರವಣಿಗೆಯ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಶಿಕ್ಷಕರು ಮತ್ತು ಪೋಷಕರು ಹಾಜರಿದ್ದರು.











