ಬೆಳ್ತಂಗಡಿ : ವರ್ತಕರ ಸಂಘ ಹಾಗೂ ಸೀನಿಯರ್ ಚೇಂಬರ್ರ್ ಇಂಟರ್ ನ್ಯಾಷನಲ್ ಸಹ ಬಾಗಿತ್ವದಲ್ಲಿ ಬೆಳ್ತಂಗಡಿ ಲೋಬೊ ಟಿವಿಸ್ ಷೋರೂಮ್ ಎದುರುಗಡೆ 79ನೇ ಸ್ವಾತಂತ್ರೋತ್ಸವದ ಪ್ರಯುಕ್ತ ವರ್ತಕರ ಸಂಘದ ಅಧ್ಯಕ್ಷ ರಾದ ರೋನಾಲ್ಡ್ ಲೋಬೊರವರರು ಧ್ವಜಾರೋಹಣ ಮಾಡಿದರು.

ಈ ಸಂದರ್ಭದಲ್ಲಿ ವರ್ತಕರ ಸಂಘ ಹಾಗೂ ಮಂಜುಶ್ರೀ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮಾಜಿ ಯೋಧರಾದ ಸುನಿಲ್ ಶೆಣೈ, ಶಿವಕುಮಾರ್ , ಸುಧೀರ್ ಶ್ಯಾನಭಾಗ್ ಹಾಗೂ ದಯಾನಂದ ಇವರಿಗೆ ಗೌರವಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವರ್ತಕರ ಸಂಘದ ಕಾರ್ಯದರ್ಶಿ ಲಾನ್ಸಿ ಪಿರೇರ ಉಪಾಧ್ಯಕ್ಷರಾದ ಶಶಿಧರ್ ಪೈ, ಉಪಕಾರ್ಯದರ್ಶಿ ಯಶವಂತ್ ಪತ್ವರ್ಡನ್, ಖಜಾಂಚಿ ಸುನೀಲ್ ಶೆಣೈ , ಅಲ್ಪೊನ್ಸ್ ಫ್ರಾಂಕೊ, ಜೂಡ್ ಲೋಬೊ, ಶೀತಲ್ ಜೈನ್ , ಎಮ್.,ಹೆಚ್ ಅಬೂಬಕರ್, ವಿನ್ಸಂಟ್ ಡಿಸೋಜಾ, ಸೀನಿಯರ್ ಚೇಂಬರ್ ಸ್ಥಾಪಕಧ್ಯಕ್ಷ ಪ್ರಮೋದ್ ನಾಯಕ್, ಬಿ.ಪಿ.ಅಶೋಕ್, ಕಾರ್ಯಕಾರಿ ಸಮಿತಿ ಸದಸ್ಯರು, ಸೀನಿಯರ್ ಚೇಂಬರ್ ಸದಸ್ಯರು ಹಾಗೂ ಲೋಬೊ ಟಿವಿಸ್ ಹಾಗೂ ಪವರ್ ಓನ್ ಶಿಬಂದಿ ವರ್ಗದವರು ಉಪಸ್ಥಿತರಿದ್ದರು.











