July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿಯ 5 ಮಂದಿ ಕೃಷಿಕರಿಗೆ ಅತ್ಯುತ್ತಮ ಸಾವಯವ ಪ್ರೋತ್ಸಾಹ ರೈತ ಪ್ರಶಸ್ತಿ

ಬೆಳ್ತಂಗಡಿ: ಕರ್ನಾಟಕ ಸಾವಯವ ಕೃಷಿ ಯೋಜನೆ, ಮಂಗಳ ಕಿಸಾನ್ ಸಮೃದ್ಧಿ ವಿಭಾಗ ಬಿ.ಸಿ ರೋಡ್ ಬಂಟ್ವಾಳ ಇವರು ಕೊಡ ಮಾಡುವ ಅತ್ಯುತ್ತಮ ಸಾವಯವ ಕೃಷಿ ರೈತ ಪ್ರಶಸ್ತಿ ಪ್ರೋತ್ಸಾಹಕ ಪ್ರಶಸ್ತಿಗೆ ಬೆಳ್ತಂಗಡಿ ತಾಲೂಕಿನ ಪ್ರಗತಿಪರ ಕೃಷಿಕರಾದ ನಡ ಗ್ರಾಮದ ಕೃಷ್ಣಪ್ಪ ಪೂಜಾರಿ, ಬಳಂಜ ಗ್ರಾಮದ ರಮಾನಾಥ ಶೆಟ್ಟಿ,ನಾವರ ಗ್ರಾಮದ ನವೀನ್ ಪೂಜಾರಿ, ಕಣಿಯೂರು ಗ್ರಾಮದ ಅಜಿತ್ ಜೈನ್ ಹಾಗೂ ಇಳಂತಿಲ ಗ್ರಾಮದ ತಿಮ್ಮಪ್ಪ ಗೌಡ ಅವರು ಆಯ್ಕೆಗೊಂಡು ಆ. 10 ರಂದು ಬಿ.ಸಿ ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಮಾನಾಥ ರೈಯವರಿಂದ ಪ್ರಶಸ್ತಿ ಪಡೆದು ಸನ್ಮಾನ ಸ್ವೀಕರಿಸಿದರು.


ಇವರು ಮಂಗಳ ಮತ್ತು ಸನ್ಮಾನ ‘ಕಿಸಾನ್ ಸಮೃದ್ಧಿ ಸಾವಯವ ಗೊಬ್ಬರವನ್ನು ತಮ್ಮ ಅಡಿಕೆ, ತೆಂಗು, ಕಾಳು ಮೆಣಸು, ಮತ್ತು ತರಕಾರಿ ಬೆಳೆಗಳಿಗೆ ಕಳೆದ 9 ವರ್ಷಗಳಿಂದ ಸತತವಾಗಿ ಬಳಕೆ ಮಾಡುವ ಮೂಲಕ ಉತ್ತಮ ಇಳುವರಿ ಪಡೆದ ಸಂತೃಪ್ತ ಬಳಕೆದಾರರಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕ ಮೋಹನ್ ಗೌಡ, ಅಶ್ವಿನಿ ಮೋಹನ್ ಗೌಡ, ಹಿರಿಯ ಅಧಿಕಾರಿ ಭಾರತಿ ರೈ,ದ.ಕ ಜಿಲ್ಲಾ, ಉಡುಪಿ, ಕಾಸರಗೋಡು, ಬೆಳ್ತಂಗಡಿ ಭಾಗಗಳಿಂದ, ಉದ್ಯೋಗಿಗಳು, ಬಳಕೆದಾರರು ಉಪಸ್ಥಿತರಿದ್ದರು.

Related posts

ನಾವೂರು: ಮುರ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಧರ್ಮಸ್ಥಳ: ಶ್ರೀ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ನೆರಿಯದ ಶ್ವೇತಾರವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಉಚಿತ ಕಾಮೋಡ್ ವೀಲ್ ಚೇರ್ ವಿತರಣೆ.

Suddi Udaya

ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಜೂನಿಯರ್ ರೆಡ್ ಕ್ರಾಸ್ ವತಿಯಿಂದ ಹಾಗೂ ಇಂಟರ್ನೆಟ್ ಕ್ಲಬ್ ಆಶ್ರಯದಲ್ಲಿ ಶುಗರ್ ಹಾಗೂ ಬಿಪಿ ತಪಾಸಣೆ

Suddi Udaya

ನಡ ಸ.ಪ್ರೌ. ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಕ್ರೀಡಾಪಟು ದಿನೇಶ್ ವೇಣೂರುರಿಂದ ಕ್ರೀಡಾ ಸ್ಪೈಕ್ ಶೂ ಕೊಡುಗೆ

Suddi Udaya

ಪುದುವೆಟ್ಟು: ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ

Suddi Udaya
error: Content is protected !!