September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿಯ 5 ಮಂದಿ ಕೃಷಿಕರಿಗೆ ಅತ್ಯುತ್ತಮ ಸಾವಯವ ಪ್ರೋತ್ಸಾಹ ರೈತ ಪ್ರಶಸ್ತಿ

ಬೆಳ್ತಂಗಡಿ: ಕರ್ನಾಟಕ ಸಾವಯವ ಕೃಷಿ ಯೋಜನೆ, ಮಂಗಳ ಕಿಸಾನ್ ಸಮೃದ್ಧಿ ವಿಭಾಗ ಬಿ.ಸಿ ರೋಡ್ ಬಂಟ್ವಾಳ ಇವರು ಕೊಡ ಮಾಡುವ ಅತ್ಯುತ್ತಮ ಸಾವಯವ ಕೃಷಿ ರೈತ ಪ್ರಶಸ್ತಿ ಪ್ರೋತ್ಸಾಹಕ ಪ್ರಶಸ್ತಿಗೆ ಬೆಳ್ತಂಗಡಿ ತಾಲೂಕಿನ ಪ್ರಗತಿಪರ ಕೃಷಿಕರಾದ ನಡ ಗ್ರಾಮದ ಕೃಷ್ಣಪ್ಪ ಪೂಜಾರಿ, ಬಳಂಜ ಗ್ರಾಮದ ರಮಾನಾಥ ಶೆಟ್ಟಿ,ನಾವರ ಗ್ರಾಮದ ನವೀನ್ ಪೂಜಾರಿ, ಕಣಿಯೂರು ಗ್ರಾಮದ ಅಜಿತ್ ಜೈನ್ ಹಾಗೂ ಇಳಂತಿಲ ಗ್ರಾಮದ ತಿಮ್ಮಪ್ಪ ಗೌಡ ಅವರು ಆಯ್ಕೆಗೊಂಡು ಆ. 10 ರಂದು ಬಿ.ಸಿ ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಮಾನಾಥ ರೈಯವರಿಂದ ಪ್ರಶಸ್ತಿ ಪಡೆದು ಸನ್ಮಾನ ಸ್ವೀಕರಿಸಿದರು.


ಇವರು ಮಂಗಳ ಮತ್ತು ಸನ್ಮಾನ ‘ಕಿಸಾನ್ ಸಮೃದ್ಧಿ ಸಾವಯವ ಗೊಬ್ಬರವನ್ನು ತಮ್ಮ ಅಡಿಕೆ, ತೆಂಗು, ಕಾಳು ಮೆಣಸು, ಮತ್ತು ತರಕಾರಿ ಬೆಳೆಗಳಿಗೆ ಕಳೆದ 9 ವರ್ಷಗಳಿಂದ ಸತತವಾಗಿ ಬಳಕೆ ಮಾಡುವ ಮೂಲಕ ಉತ್ತಮ ಇಳುವರಿ ಪಡೆದ ಸಂತೃಪ್ತ ಬಳಕೆದಾರರಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕ ಮೋಹನ್ ಗೌಡ, ಅಶ್ವಿನಿ ಮೋಹನ್ ಗೌಡ, ಹಿರಿಯ ಅಧಿಕಾರಿ ಭಾರತಿ ರೈ,ದ.ಕ ಜಿಲ್ಲಾ, ಉಡುಪಿ, ಕಾಸರಗೋಡು, ಬೆಳ್ತಂಗಡಿ ಭಾಗಗಳಿಂದ, ಉದ್ಯೋಗಿಗಳು, ಬಳಕೆದಾರರು ಉಪಸ್ಥಿತರಿದ್ದರು.

Related posts

ಚಾರ್ಮಾಡಿ ಘಾಟ್ ನಲ್ಲಿ ತೂಫಾನ್ ಪಲ್ಟಿ

Suddi Udaya

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಬಲ್ಯೋಟ್ಟು ಶ್ರೀ ಗುರುಕೃಪಾ ಸೇವಾ ಆಶ್ರಮಕ್ಕೆ ಆರ್ಥಿಕ ಸಹಾಯಧನ ವಿತರಣೆ

Suddi Udaya

ಬಳಂಜ: ಶಿವಾಜಿ ಪ್ರೆಂಡ್ಸ್ ಕ್ಲಬ್ ನಿಂದ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ: ಕ್ಲಬ್ ವತಿಯಿಂದ ಶಾಸಕ ಹರೀಶ್ ಪೂಂಜರವರಿಗೆ ಸನ್ಮಾನ

Suddi Udaya

ಎಂಟು ದಿನಗಳ ಹಿಂದೆ ಮನೆಯಲ್ಲಿ ಇಲಿ ಪಾಷಾಣ ಸೇವಿಸಿದ್ದ ಗಡಾ೯ಡಿ ಗ್ರಾಮದ ಮಜಲು ನಿವಾಸಿ ಸಂಜೀವ ಪೂಜಾರಿ ಸಾವು

Suddi Udaya

ನಿಡ್ಲೆ ಪ್ರೇರಣ ಸಂಜೀವಿನಿ ಹಾಗೂ ಕಳೆಂಜ ಸಂಜೀವಿನಿ ಒಕ್ಕೂಟದಿಂದ ಸಮಗ್ರ ಕೃಷಿ ಸಮೂಹ ಚಟುವಟಿಕೆ ಕುರಿತು ಮಾಹಿತಿ ಕಾರ್ಯಾಗಾರ

Suddi Udaya

ಜೂ.26: ಸೌಮ್ಯತಿಲಕ್ ಶೆಟ್ಟಿ ಇವರ ‘ಮಸಿಯ ಮಾತು’ ಕವನ ಸಂಕಲನ ಬಿಡುಗಡೆ

Suddi Udaya
error: Content is protected !!