ಮುಂಡಾಜೆ: ಇಲ್ಲಿಯ ಬಾಲಕರ ಹಾಸ್ಟೆಲ್ ಬಳಿಯ ನಿವಾಸಿ ಅಶೋಕ್ ಕುಮಾರ್ ರೈ ಅವರ ಪತ್ನಿ ಶಾಂಭವಿ ರೈ(47) ಹೃದಯಾಘಾತದಿಂದ ಆ.17ರಂದು ನಿಧನ ಹೊಂದಿದರು.
ಸೋಮಂತಡ್ಕ ಪೇಟೆಗೆ ತೆರಳಿದ್ದ ಅವರು ಪೇಟೆಯಲ್ಲಿ ಕುಸಿದು ಬಿದ್ದಿದ್ದು ಬಳಿಕ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದರು. ಮೃತರು ಪತಿ, ಪುತ್ರ ಹಾಗೂ ಪುತ್ರಿ ಅವರನ್ನು ಅಗಲಿದ್ದಾರೆ.











