September 6, 2026
ವರದಿ

ಶ್ರೀ ಗಾಯತ್ರಿ ವಿಶ್ವಕರ್ಮ ಸಂಘಟನಾ ಸಂಘ ಅಳದಂಗಡಿ ವಲಯದ ಮಹಾಸಭೆ

ಅಳದಂಗಡಿ: ಶ್ರೀ ಗಾಯತ್ರಿ ವಿಶ್ವಕರ್ಮ ಸಂಘಟನಾ ಸಂಘ ಅಳದಂಗಡಿ ವಲಯ ಇದರ ಮಹಾಸಭೆಯು ಸುಂದರಾಚಾರ್ಯ ಕುದ್ಯಾಡಿ ಅವರ ಅಧ್ಯಕ್ಷತೆಯಲ್ಲಿ ಆ.17ರಂದು ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗುರು ಸೇವಾ ಪರಿಷತ್ತಿನ ಅಧ್ಯಕ್ಷ ಪ್ರಕಾಶ್ ಪುರೋಹಿತ್ ವೇಣೂರು ದೀಪ ಬೆಳಗಿಸಿ ಸಂಘಟನೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಹಣ ಸಂಗ್ರಹಣೆ, ಗ್ರಾಮ ಸಮಿತಿ ಜೋಡಣೆ, ಸಂಘಟನಾತ್ಮಕವಾದ ಕಾರ್ಯ ಚಟುವಟಿಕೆಗಳನ್ನು ಮಾಡಬೇಕು ಎಂದು ತಿಳಿಸಿದರು.

ಸರ್ವಾನುಮತದಿಂದ ವಲಯ ಸಂಚಾಲಕರಾಗಿ ಸಂಜೀವ ಆಚಾರ್ಯ ಮಾಡೆoಜಿಮಾರ್ ಆಯ್ಕೆಯಾದರು. ಗ್ರಾ.ಪಂ. ಸದಸ್ಯ ಹರೀಶ್ ಆಚಾರ್ಯ, ರಮೇಶ್ ಆಚಾರ್ಯ ಬಳಂಜ, ಜಯರಾಮ್ ಆಚಾರ್ಯ ಕುದ್ಯಾಡಿ, ಸಂಜೀವ ಆಚಾರ್ಯ ಡೆಂಜೋಳಿ, ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಮಂಜುನಾಥ ಆಚಾರ್ಯ ವರದಿ ವಾಚನ, ಲೆಕ್ಕಚಾರ ಮಂಡಿಸಿದರು. ಶ್ರೀಮತಿ ತಾರಾ ಆಚಾರ್ಯ ಕುದ್ಯಾಡಿ ಸ್ವಾಗತಿಸಿದರು. ಅಶ್ವಥ್ ಆಚಾರ್ಯ ಕೆದ್ದು ಪ್ರಾರ್ಥಿಸಿದರು. ಮಂಜುನಾಥ ಆಚಾರ್ಯ ಅಳದಂಗಡಿ ನಿರೂಪಿಸಿ, ವಂದಿಸಿದರು.

Related posts

ಇಲಂತಿಲ: ಮರದಿಂದ ಬಿದ್ದಿದ್ದ ನಾರಾಯಣ ಪೂಜಾರಿರವರು ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ಹಿಂದೂ ಸಂಗಮ ಆಯೋಜನಾ ಸಮಿತಿ ಬಳಂಜ ಮಂಡಲದಿಂದ “ಹಿಂದೂ ಸಂಗಮ” ಕಾರ್ಯಕ್ರಮ

Suddi Udaya

ಸುಲ್ಕೇರಿ ಲಯನ್ಸ್ ಕ್ಲಬ್‌ನ ನೂತನ ಪದಗ್ರಹಣ ಸಮಾರಂಭ

Suddi Udaya

ಚಾರ್ಮಾಡಿ, ಕಡಿರುದ್ಯಾವರ ಕಾಡಾನೆ ಹಾವಳಿ

Suddi Udaya

ಧರ್ಮಸ್ಥಳ ಶ್ರೀ ಮಂ.ಸ್ವಾ. ಅ.ಹಿ.ಪ್ರಾ. ಶಾಲೆಯಲ್ಲಿ ಯೋಗ ತರಬೇತಿ ಉದ್ಘಾಟನೆ

Suddi Udaya

ಸುಲ್ಕೇರಿ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya
error: Content is protected !!