July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ನೂರಾ ಗೋಲ್ಡ್ ನಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಡ್ರಾಯಿಂಗ್ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ

ಬೆಳ್ತಂಗಡಿ: ಚಿನ್ನ, ಬೆಳ್ಳಿ ಮತ್ತು ವಜ್ರಾಭರಣಗಳ ಮಾರಾಟದಲ್ಲಿ ಜನಪ್ರಿಯಗೊಂಡಿರುವ ನೂರಾ ಗೋಲ್ಡ್ ಬೆಳ್ತಂಗಡಿ ಇಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಆಭರಣಗಳ ಡಿಸೈನ್‌ನ ಚಿತ್ರ ಬರೆಯುವ ಸ್ಪರ್ಧೆ ಹಮ್ಮಿಕೊಂಡು ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

ಸಂಸ್ಥೆಯ ಕಾರ್ಯನಿರ್ವಾಹಕ ಕೆ ಎಸ್ ಮುಸ್ತಫಾ ಕಕ್ಕಿಂಜೆ ಅವರ ನೇತೃತ್ವದಲ್ಲಿ ಜರಗಿದ ಸಮಾರಂಭದಲ್ಲಿ ಅತಿಥಿಗಳನ್ನು ಸಿಬ್ಬಂದಿಗಳು ಸ್ವಾಗತಿಸಿದರು. ಸಿದ್ದೀಕ್, ನಝೀರ್ ಹಾಗೂ ಸಿಬ್ಬಂದಿಗಳು ಜೊತೆಗಿದ್ದರು.

ಸ್ಪರ್ಧೆಯಲ್ಲಿ ತಾಲೂಕಿನ ಏಳ್ನೂರಕ್ಕೂ‌ ಹೆಚ್ಚು ಚಿತ್ರಗಳು ಬಂದಿದ್ದು ಪ್ರಬುದ್ಧ ತೀರ್ಪುಗಾರರ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಯಿತು.
ಸ್ಪರ್ಧಾ ವಿಜೇತರಾದ ಸಹಲಾ ಫಾತಿಮಾ, ಫಾತಿಮಾ ರಫಾಹ್, ಬೃಂದಾ ಎಸ್, ಗೌತಮ್, ಇನಾಯಾ ರಮ್ಲತ್ ಇವರು ಬಹುಮಾನ ತಮ್ಮದಾಗಿಸಿಕೊಂಡರು. ಫಯಾಝ್ ಧನ್ಯವಾದ ಅರ್ಪಿಸಿದರು.


ನೂರಾ ಗೋಲ್ಡ್ ನಲ್ಲಿ ಅತ್ಯಾಧುನಿಕ ಶೈಲಿಯ ಆಭರಣಗಳು, ಏಂಟಿಕ್ ಮತ್ತು ಸೆಮಿ ಆಂಟಿಕ್ ಆಭರಣಗಳು, ಡೈಮಂಡ್ ಗಳ ಆಭರಣಗಳ ಅಪೂರ್ವ ಸಂಗ್ರಹವಿದ್ದು ಗ್ರಾಹಕರ ಮನಸಿಗೆ ಒಪ್ಪುವ ಡಿಸೈನ್ ಮಾಡಿಕೊಡುವ ವ್ಯವಸ್ಥೆಯೂ ಇದೆ. ಗ್ರಾಹಕರ ಸೇವೆಯೇ ನಮ್ಮ ಪ್ರಥಮ ಆದ್ಯತೆ ಎಂದು ನಿರ್ವಾಹಕ ಮುಸ್ತಫ ಕಕ್ಕಿಂಜೆ ತಿಳಿಸಿದರು.

Related posts

ಬೆಳ್ತಂಗಡಿ: ಹಳೆಕೋಟೆ ಬಳಿ ಓಮಿನಿ ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿ : ಬೈಕ್ ಸವಾರ ಗಂಭೀರ ಗಾಯ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಂಪೂರ್ಣ ಸುರಕ್ಷಾ ಸಹಾಯಧನ ವಿತರಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಡಂತ್ಯಾರು ವಲಯದ ಒಕ್ಕೂಟದಿಂದ ಶ್ರದ್ಧಾ ಕೇಂದ್ರದ ಸ್ವಚ್ಛತಾ ಕಾರ್ಯಕ್ರಮ

Suddi Udaya

ಮಂಜೊಟ್ಟಿ ಸ್ಟಾರ್ ಲೈನ್ ಆಂ.ಮಾ. ಶಾಲಾ ವಿದ್ಯಾರ್ಥಿಗಳ ಸಂಸತ್ತಿನ ಚುನಾವಣೆ

Suddi Udaya

ಕಲ್ಲೇರಿ : ಪಕ್ಕದ ಮನೆಗೆ ಕುಸಿದು ಬಿದ್ದ ಕಾಂಪೌಂಡ್ ಗೋಡೆ, ಮನೆಗೆ ಅಪಾರ ಹಾನಿ

Suddi Udaya

ಲಾಯಿಲ: ಪುತ್ರ ಬೈಲು ಗ್ರಂಥಾಲಯ ಕಟ್ಟಡಕ್ಕೆ ಶಿಲಾನ್ಯಾಸ

Suddi Udaya
error: Content is protected !!