ಬೆಳ್ತಂಗಡಿ: ದಿ| ನಾರಾಯಣ ಹಾಗೂ ದಿ| ಯಮುನಾ( ಗೋಳಿದ ಪಲ್ಕೆ ಮೇಲಂತಬೆಟ್ಟು )ರವರ ಪುತ್ರಿಯಾದ ಕುಮಾರಿ ರಾಜೇಶ್ವರಿ ಯವರು ವಾತ್ಸಲ್ಯ ಸದಸ್ಯರಾಗಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಶಾಸನ ನೀಡುತ್ತಿರುವ ಸದಸ್ಯರಾದ ರಾಜೇಶ್ವರಿ ರವರಿಗೆ ವಾತ್ಸಲ್ಯ ವಿದ್ಯಾನಿಧಿ ಕಾರ್ಯಕ್ರಮದಡಿಯಲ್ಲಿ ಮಂಜೂರಾದ ಬ್ಯಾಗ್ ,ಪುಸ್ತಕ, ಕೊಡೆ, ಪೆನ್ನು ಪೆನ್ಸಿಲ್ ಚಪ್ಪಲಿ ಹಾಗೂ ಧರಿಸಲು ವಸ್ತ್ರಗಳನ್ನು ಕೇಂದ್ರ ಒಕ್ಕೂಟದ ಅಧ್ಯಕ್ಷ ಸೀತಾರಾಂ ರವರು ವಿತರಿಸಿದರು.
ಈ ಸಂದರ್ಭದಲ್ಲಿ ಜ್ಞಾನ ವಿಕಾಸ ಸಮನ್ವಯಧಿಕಾರಿಯದ ಶ್ರೀಮತಿ ಮಧುರಾ ವಸಂತ್, ವಲಯದ ಮೇಲ್ವಿಚಾರಕರಾದ ರವಿ, ಒಕ್ಕೂಟದ ಪದಾಧಿಕಾರಿ ಶ್ರೀಮತಿ ಸರಸ್ವತಿ ಹಾಗೂ ಜ್ಞಾನವಿಕಾಸ ತಂಡದ ಸದಸ್ಯ ರಾಧಾ ಶ್ರೀಮತಿ ಹರಿಣಿ ಸೇವಾಪ್ರತಿನಿಧಿ ಲೀಲಾ ಉಪಸ್ಥಿತರಿದ್ದರು.











