July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕನ್ಯಾಡಿಯಲ್ಲಿ ಶ್ರೀ ಮಹಾಭಾರತ ಸರಣಿ ತಾಳಮದ್ದಳೆಯ ಉದ್ಘಾಟನೆ ಮತ್ತು ನುಡಿ ನಮನ ಕಾರ್ಯಕ್ರಮ

ಕನ್ಯಾಡಿ: ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಉಪ್ಪಿನಂಗಡಿ ಸುವರ್ಣ ಮಹೋತ್ಸವದ ನಿಮಿತ್ತ ನಡೆಸುತ್ತಿರುವ ಜಿಲ್ಲಾ ಮಟ್ಟದ ಯಕ್ಷಗಾನ ತಂಡಗಳ ಶ್ರೀ ಮಹಾಭಾರತ ಸರಣಿಯ ಸ್ವರ್ಣ ಶತಕ ತಾಳಮದ್ದಳೆ ಕಾರ್ಯಕ್ರಮದ ಉದ್ಘಾಟನೆಯು ಕನ್ಯಾಡಿಯ ಶ್ರೀ ಹರಿಹರಾನುಗ್ರಹ ಸಭಾಭವನದಲ್ಲಿ ಜರಗಿತು.

ಧರ್ಮಸ್ಥಳ ಕ್ಷೇತ್ರದ ಪಾರುಪತ್ಯಗಾರರಾದ ಲಕ್ಷ್ಮೀನಾರಾಯಣ ರಾವ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕನ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪಾಡಿ ವಹಿಸಿದ್ದರು. ಧರ್ಮಸ್ಥಳ ಜಮಾ ಉಗ್ರಾಣದ ನಿವೃತ್ತ ಮುತ್ಸದ್ದಿ ಬಿ. ಭುಜಬಲಿ ಕಾಳಿಕಾಂಬ ಯಕ್ಷಗಾನ ಟ್ರಸ್ಟ್ ಹಮ್ಮಿಕೊಂಡಿರುವ ಸ್ವರ್ಣ ಮಹೋತ್ಸವದ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ತಿಳಿಸಿದರು. ಕಲಾವಿದ ಅಂಬಾ ಪ್ರಸಾದ್ ಪಾತಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯಕ್ಷ ಭಾರತಿಯಿಂದ ನುಡಿ ನಮನ :

ಇತ್ತೀಚೆಗೆ ನಿಧನರಾದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಮತ್ತು ಯಕ್ಷಗಾನ ಕಲಾವಿದ, ನಾಟ್ಯ ಗುರು ನರೇಂದ್ರ ಕುಮಾರ ಧರ್ಮಸ್ಥಳ ಇವರಿಗೆ ಹರಿದಾಸ ಗಾಂಭೀರ ಧರ್ಮಸ್ಥಳ ಮತ್ತು ನಿವೃತ್ತ ಶಿಕ್ಷಕ, ಕಲಾವಿದ ಭಾಸ್ಕರ ಶೆಟ್ಟಿ ಪುತ್ತೂರು ನುಡಿ ನಮನ ಅರ್ಪಿಸಿದರು. ನಿವೃತ್ತ ತಹಶೀಲ್ದಾರ್, ಕಲಾವಿದ ಸುರೇಶ ಕುದ್ರಂತ್ತಾಯ ಉಜಿರೆ ಯಕ್ಷಗಾನ ಶೈಲಿಯಲ್ಲಿ ನರೇಂದ್ರರ ಜೀವನ ಗಾಥೆಯನ್ನು ಹಾಡಿದರು.

ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ರಾವ್,ಸಿದ್ದಾಂತ ಕೀರ್ತಿರಾಜ, ಕೆ.ಪುರಂದರ ರಾವ್ ದೊಂಡೊಳೆ, ರತ್ನವರ್ಮ ಜೈನ್, ರವೀಂದ್ರ ಶೆಟ್ಟಿ ಬಳಂಜ, ವಿದ್ಯಾ ಕುಮಾರ್ ಕಾಂಚೋಡು, ಜಯರಾಮ ನೆಲ್ಲಿತ್ತಾಯ, ವಿಷ್ಣುಮೂರ್ತಿ ಭಟ್, ಬಿ. ಶಶಿಧರ,ಯಕ್ಷ ಭಾರತಿ ಸಂಚಾಲಕ ಮಹೇಶ್ ಕನ್ಯಾಡಿ, ಕೋಶಾಧಿಕಾರಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಸುದರ್ಶನ್ ಕೆ. ವಿ ಕನ್ಯಾಡಿ, ಶಶಿಧರ ಕನ್ಯಾಡಿ, ಬಿ.ಜನಾರ್ದನ ತೋಳ್ಪಡಿತ್ತಾಯ ಉಜಿರೆ, ಶಶಿಧರ ಉಪಾಧ್ಯಾಯ, ಕೌಸ್ತುಭ ಕನ್ಯಾಡಿ, ಚಂದ್ರಾವತಿ,ವೇದಾವತಿ, ಕೆ. ರಾಮಕೃಷ್ಣ ರೈ ಮೊದಲಾದವರು ಉಪಸ್ಥಿತರಿದ್ದರು.

ಶ್ರೀನಿವಾಸ ರಾವ್ ಕಲ್ಮಂಜ ಏಕತಾ ಗೀತೆ ಹಾಡಿದರು.ಯಕ್ಷ ಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ ಸ್ವಾಗತಿಸಿದರು. ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ನ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ವಂದಿಸಿದರು. ತುಳು ಶಿವಳ್ಳಿ ಸಭಾದ ಕಾರ್ಯದರ್ಶಿ ಕೆ. ಕೃಷ್ಣ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.


ಬಳಿಕ ಯಕ್ಷ ಭಾರತಿ ಕನ್ಯಾಡಿ ತಂಡದಿಂದ ಶ್ರೀ ಮಹಾಭಾರತ ಸರಣಿಯ 83, 84, 85 ನೇ ಕಾರ್ಯಕ್ರಮವಾಗಿ ಕರ್ಮಬಂಧ, ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘ ವೇಣೂರು ತಂಡದಿಂದ ಸಹದೇವ ದಿಗ್ವಿಜಯ, ಶ್ರೀ ಪಂಚ ದುರ್ಗಾ ಯಕ್ಷಗಾನ ಸಂಘ ಕೊಯ್ಯೂರು ತಂಡದಿಂದ ಶಲ್ಯಾವಸಾನ ತಾಳಮದ್ದಳೆ ಜರಗಿತು.

Related posts

ಕಣಿಯೂರು: ದೀಪಾ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆಯಲ್ಲಿ ತಾಲೂಕು ಮಟ್ಟದ ಕರಾಟೆ ಸ್ಪರ್ಧೆ

Suddi Udaya

ಕೊಕ್ಕಡ: ಎಂಡೋ ಸಂತ್ರಸ್ತರ ಪುನರ್‌ವಸತಿ ಕೇಂದ್ರದ ನೂತನ ಕಟ್ಟಡಕ್ಕೆ ಶಾಸಕ ಹರೀಶ್ ಪೂಂಜರಿಂದ ಭೂಮಿ ಪೂಜೆ

Suddi Udaya

ಬೆಳಾಲು ನಿವೃತ್ತ ಶಿಕ್ಷಕನ ಬರ್ಬರ ಕೊಲೆ ಪ್ರಕರಣ: ಸ್ಥಳಕ್ಕೆ ಎಸ್ಪಿ ಸೇರಿದಂತೆ ವಿವಿಧ ತಂಡದಿಂದ ತನಿಖೆ

Suddi Udaya

ಅಡಿಕೆಯೊಂದಿಗೆ ಕಾಳುಮೆಣಸು ಮತ್ತು ಜಾಯಿಕಾಯಿ ಬೆಳೆಯುವ ರೈತರಿಗೆ ಸುವರ್ಣವಕಾಶ

Suddi Udaya

ಓಡಿಲ್ನಾಳ ಸ.ಉ.ಪ್ರಾ. ಶಾಲಾ ವಿದ್ಯಾರ್ಥಿ ಮಂತ್ರಿಮಂಡಲ ರಚನೆ

Suddi Udaya
error: Content is protected !!