30.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಪಟ್ರಮೆ ಗೆಳೆಯರ ಬಳಗದಿಂದ ಗಣೇಶ ಚತುರ್ಥಿ ಪ್ರಯುಕ್ತ ಅನಾರು ಶಾಲೆಯಲ್ಲಿ ಶ್ರಮದಾನ

ಪಟ್ರಮೆ : ಗೆಳೆಯರ ಬಳಗ ಪಟ್ರಮೆ ನೇತೃತ್ವದಲ್ಲಿ ಶಾಲಾ ಎಸ್ ಡಿ ಯಂ ಸಿ ಸಹಕಾರದಲ್ಲಿ ಶ್ರೀ ಗಣೇಶ ಚೌತಿ ಪ್ರಯುಕ್ತ ಸ.ಉ.ಹಿ.ಪ್ರಾಥಮಿಕ ಶಾಲೆ ಅನಾರಿನಲ್ಲಿ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಹಿರಿಯ ಕೃಷಿಕ ಡೊಂಬಯ್ಯ ಗೌಡರು ತೆಂಗಿನ ಗಿಡ ನೆಡುವ ಮೂಲಕ ಶ್ರಮದಾನ ಉದ್ಘಾಟಿಸಿದರು.

ಶಾಲಾ ಆವರಣದ ಸುತ್ತ ತುಂಬಿದ್ದ ಗಿಡ ಗಂಟಿಗಳನ್ನು ಸ್ವಚ್ಚಗೊಳಿಸಿ 12 ತೆಂಗಿನ ಗಿಡಗಳನ್ನು ನೆಡಲಾಯಿತು.
ಶಿರೀಷ್ ರಾಜ್ ಸಂಕೇಶ 3 ತೆಂಗಿನ ಗಿಡ, ಅಣ್ಣು ಗೌಡ ಹಿರ್ತಡ್ಕ 4, ಚಂದ್ರ ಶೇಖರ ಗೌಡ ಅನಾರು 3, ಶಾಯಿದಾ 1, ಶಾಲೆಯಿಂದ 1 ಹೀಗೆ 12 ತೆಂಗಿನ ಗಿಡಗಳನ್ನು ಉಚಿತವಾಗಿ ಒದಗಿಸಿದರು. ಜಯಂತ ಪಾದೇಜಾಲು, ದಿನೇಶ್ ಮೈಕೆ, ದೊಲ್ಲ ಗೌಡ ಜಾಲು ರವರು ಗಿಡ ಗಂಟಿಗಳನ್ನು ಸ್ವಚ್ಚಗೊಳಿಸಲು ಮಿಷನ್ ಒದಗಿಸಿದ್ದರು.

ಶ್ರಮದಾನದಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಚೋಮ ಪಾದೇಜಾಲು, ಎಸ್ ಡಿ ಯಂ ಸಿ ಅಧ್ಯಕ್ಷ ಧನಂಜಯ ಗೌಡ, ಉಪಾಧ್ಯಕ್ಷೆ ರೇವತಿ, ಮಾಜಿ ಅಧ್ಯಕ್ಷರುಗಳಾದ ದೊಲ್ಲ ಗೌಡ, ಶ್ಯಾಮರಾಜ್, ಶಾಲಾ ಶಿಕ್ಷಕರಾದ ಜಯಂತ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಮಲ, ಡಿವೈಎಫ್ಐ ಪಟ್ರಮೆ ಅಧ್ಯಕ್ಷ ಭುವನೇಶ್ ನೆಕ್ಕರೆ, ಶಾಲಾ ಬಿಸಿಯೂಟ ನೌಕರರಾದ ರೇಖಾ, ಗೀತಾ ಮೊದಲಾದವರ ಸಹಿತ ಮೂವತ್ತಕ್ಕೂ ಹೆಚ್ಚು ಶ್ರಮದಾನಿಗಳು ಭಾಗವಹಿಸಿದ್ದರು.

ಆರಿಷ್ ಪಟ್ರಮೆ ಪಿಕಪ್ ಒದಗಿಸಿದ್ದರು. ನ್ಯಾಯವಾದಿ ಬಿ.ಎಂ. ಭಟ್ ಎಲ್ಲಾ ಶ್ರಮದಾನಿಗಳಿಗೆ ನೆನಪಿನ ಕಾಣಿಕಯನ್ನು ನೀಡಿದರು.

Related posts

ಗುಂಡೂರಿ: ಬ್ರಹ್ಮೋಪದೇಶದ ಪ್ರಯುಕ್ತ ಸೇವಾಶ್ರಮದಲ್ಲಿ ಆಶ್ರಮ‌ವಾಸಿಗಳಿಗೆ ಉಟೋಪಚಾರ, ಪ್ರತಿಭಾವಂತ ವಿದ್ಯಾರ್ಥಿನಿಗೆ ಗೌರವ ಧನ ವಿತರಣೆ

Suddi Udaya

ಬಂದಾರು : ಪೆರ್ಲ -ಬೈಪಾಡಿಯಲ್ಲಿ ನೂತನ ಶಾಖಾ ಅಂಚೆ ಕಚೇರಿ ಉದ್ಘಾಟನೆ

Suddi Udaya

ಮಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೈ‌ ಕೊಟ್ಟ ವಿದ್ಯುತ್: ವೈದ್ಯರಿಂದ ಕತ್ತಲಲ್ಲಿ ರೋಗಿಗಳ ಆರೋಗ್ಯ ತಪಾಸಣೆ: ಇನ್ವರ್ಟರ್ ವ್ಯವಸ್ಥೆಗಳು ಇಲ್ಲದೆ ಟಾರ್ಚ್ ಬೆಳಕಿನಿಂದ ಚಿಕಿತ್ಸೆ ನೀಡಬೇಕಾದ ಸ್ಥಿತಿ

Suddi Udaya

ಬೆಳ್ತಂಗಡಿ : ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನದ ಅರ್ಜಿ ಕಾಲಾವಕಾಶ ವಿಸ್ತರಣೆ

Suddi Udaya

ಯಕ್ಷಭಾರತಿ ಸಂಸ್ಥೆಯ ವತಿಯಿಂದ ಕೋಳ್ಯೂರು ರಾಮಚಂದ್ರ ರಾವ್ ರವರಿಗೆ ಸನ್ಮಾನ

Suddi Udaya

ಶಿಬಾಜೆಯಲ್ಲಿ ಶ್ರೀಧರ ಕೊಲೆ ಪ್ರಕರಣ: ದೂರುದಾರ ತನಿಖೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದ ಎಸ್ಐಟಿ

Suddi Udaya
error: Content is protected !!