September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಮತ್ತು ಸೇವಾಭಾರತಿಯಿಂದ 2025 ರ “ಸೇವಾ ಶ್ರೇಷ್ಠ” ಪುರಸ್ಕಾರ

ಧರ್ಮಸ್ಥಳ: ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ ಉಚಿತ ವೈದ್ಯಕೀಯ ತಪಾಸಣೆ ಮಾಹಿತಿ ಹಾಗೂ ಮನೋರಂಜನಾ ಕಾರ್ಯಕ್ರಮದ ಉದ್ಘಾಟನ ಸಮಾರಂಭವು ಸೆ.5 ರಂದು ಸೌತಡ್ಕ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರ ಸೇವಾಧಾಮದಲ್ಲಿ ನಡೆಯಿತು.

ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ಮತ್ತು ಪ್ರಗತಿಪರ ಕೃಷಿಕರಾದ ಮಾರ್ಷಲ್ ವೇಗಸ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಸೇವಾಧಾಮ ಸಂಸ್ಥಾಪಕರಾದ ಕೆ ವಿನಾಯಕ ರಾವ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಕೊಕ್ಕಡದಲ್ಲಿರುವ ಪುನಶ್ಚೇತನ ಕೇಂದ್ರ ರಾಜ್ಯಕ್ಕೇ ಮಾದರಿಯಾಗಿದೆ. ಸಂಸ್ಥೆಯ ಸೇವಾಕಾರ್ಯಗಳ ನಿರಂತರತೆ ಮತ್ತು ಪಾರದರ್ಶಕತೆಯನ್ನು ಶ್ಲಾಘಿಸಿದರು.

ಡಾ. ವೈಶಾಖ್ ಬಿ. ಭಟ್ ರವರು ಆರೋಗ್ಯ ಸೇವೆಯಲ್ಲಿ ಮಾಡಿದಂತಹ ಸೇವಾಕಾರ್ಯಗಳನ್ನು ಗುರುತಿಸಿ, ಸೇವಾಭಾರತಿ ಸಂಸ್ಥೆಯ ವತಿಯಿಂದ “ಸೇವಾ ಶ್ರೇಷ್ಠ -2025” ಗೌರವವನ್ನು ನೀಡಿ ಸನ್ಮಾನಿಸಲಾಯಿತು.ಬೆನ್ನುಹುರಿ ಅಪಘಾತಕ್ಕೊಳಗಾಗಿರುವ ಶ್ರೀ ಭವಾನಿ ಶಂಕರ್ ರವರು ಹತ್ತಿಯಿಂದ ಬತ್ತಿ ಮಾಡುವ ಯಂತ್ರದ ಮೂಲಕ ಸ್ವ- ಉದ್ಯೋಗವನ್ನು ಮಾಡಲು ಮುಂದಾಗಿದ್ದು ಇವರಿಗೆ ಸಂಸ್ಥೆಯ ಪರವಾಗಿ ಯಂತ್ರವನ್ನು ಹಸ್ತಾಂತರಿಸಲಾಯಿತು. ಮತ್ತು ಮಂಗಳೂರು KMC ಆಸ್ಪತ್ರೆಯ ಸ್ಪೈನ್ ಶಸ್ತ್ರಚಿಕಿತ್ಸಕರಾದ ಡಾ. ವೈಶಾಕ್ ಬಿ ಭಟ್ ರವರಿಂದ ಫಲಾನುಭವಿಗಳಿಗೆ ವೈದ್ಯರ ಸಮಲೋಚನೆಯನ್ನು ಮಾಡಿ ಫಲಾನುಭವಿಗಳಿಗೆ ಮನೋರಂಜನಾ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ Dattopant Tengadi Central board for Workers education and development RAC ಮೆಂಬರ್ ಹಾಗೂ ನವಮಂಗಳೂರು ಬಂದರು ಮತ್ತು ಜನರಲ್ ನೌಕರರ ಅಸೋಸಿಯೇಷನ್ BMS ನ ಪ್ರಧಾನ ಕಾರ್ಯದರ್ಶಿ ಶ್ರೀ ವಿಘ್ನೇಶ್ ನಾಯ್ಕ್, ಫಾರ್ಮರ್ ಪ್ರೆಸಿಡೆಂಟ್ ಎಕ್ಸ್ ಸರ್ವಿಸ್ ಮೆನ್ಸ್ ಅಸೋಸಿಯೇಷನ್ ಬೆಳ್ತಂಗಡಿ (ರಿ.) ಮತ್ತು ಪ್ರಧಾನರು ಹಿಡಿ ಅಕ್ಕಿಯೋಜನೆ ಉಜಿರೆ ಹವ್ಯಕ ವಲಯ ಶ್ರೀ ರಾಮಚಂದ್ರಪುರ ಮಠದ ಎಸ್ ಕೃಷ್ಣ ಭಟ್, ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಕೆ ಕೃಷ್ಣ ಭಟ್, ದಿವ್ಯಂಗಾರ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಕು. ಅಂಜನಾ ದೇವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸೇವಾಭಾರತಿ ಟ್ರಸ್ಟಿ ಜಯರಾಜ್ ಸಾಲಿಯನ್ ಕಾನರ್ಪ ಸ್ವಾಗತಿಸಿ, ಪೀರ್ ಟ್ರೈನರ್ ಅಂತೋಣಿ ಮತ್ತು ಡಾಕ್ಯುಮೆಂಟೇಶನ್ ಮೋಾನಿಟರಿಂಗ್ ಅಂಡ್ ಇವ್ಯಾಲುಯೇಶನ್ ಕಾರ್ಡಿನೇಟರ್ ಸುಮ ಕಾರ್ಯಕ್ರಮವನ್ನು ನಿರೂಪಿಸಿ, ಅನುಸರಣೆ ಮತ್ತು ಹಣಕಾಸು ವ್ಯವಸ್ಥಾಪಕ ಮೋಹನ್ ಎಸ್ ಧನ್ಯವಾದವಿತ್ತರು.

Related posts

ಮಿತ್ತಬಾಗಿಲು ಬಿ.ಕೆ ದೇವರಾಯರಿಗೆ ರೈತಪೀಠ ಪ್ರಶಸ್ತಿ

Suddi Udaya

ಧರ್ಮಸ್ಥಳ: ಕೃಷ್ಣಮೂರ್ತಿ ರಾವ್ ಸಿ ಜಿ ನಿಧನ

Suddi Udaya

ಗುರುವಾಯನಕೆರೆ ದೈವಾರಾಧಕರ ಮಹಾ ಸಮಾವೇಶದಲ್ಲಿ ಎಕ್ಸೆಲ್ ಕಲಾ ವೈಭವ

Suddi Udaya

ಮಲವಂತಿಗೆ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಆಮಂತ್ರಣ ವೇದಿಕೆಯ ಅಧ್ಯಕ್ಷೆ ವಿದ್ಯಾಶ್ರೀ ಅಡೂರ್ ರವರ “ಕವಿತೆಯೆoಬ ಕೇದಗೆ” ಭಾವಗೀತೆಯ ಧ್ವನಿ ಮುದ್ರಣ ಬಿಡುಗಡೆ

Suddi Udaya

ಅಳದಂಗಡಿ: ಬಡಗಕಾರಂದೂರು ನಿವಾಸಿ ಕೃಷ್ಣಪ್ಪ ಪೂಜಾರಿ ನಿಧನ

Suddi Udaya
error: Content is protected !!