ಗುರುವಾಯನಕೆರೆಯ ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಮಂತ ಕುಮಾರ ಜೈನ್ ಇವರು ಬೆಳ್ತಂಗಡಿ ರೋಟರಿ ಕ್ಲಬ್ ನ 2025-26 ನೇ ಸಾಲಿನ ಪ್ಲಾಟಿನಂ ಸದಸ್ಯರಾಗಿದ್ದು, ಎಲ್ಲಾ ಸದಸ್ಯರೊಡನೆ ಸೇರಿ ನಡೆಸಿದ ವಿಶೇಷ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ, ಶಿಕ್ಷಕ ಸಮುದಾಯಕ್ಕೆ ಸೇರಿದ ಎಲ್ಲಾ ಸದಸ್ಯರನ್ನು ಗೌರವಿಸಿದರು.
ಇದೇ ಸಂದರ್ಭದಲ್ಲಿ ಉಜಿರೆಯ ನಿವಾಸಿಯಾಗಿದ್ದ ದಿ. ಚಂದ್ರಕಾಂತ ಕಾಮತ್ ರವರ ಸೊಸೆ ರೇಷ್ಮಾ ಹೆಗ್ಡೆ ಯವರು ರೋಟರಿ ಕ್ಲಬ್ ನ ನೂತನ ಸದಸ್ಯರಾಗಿ ರೋಟರಿ ಕುಟುಂಬವನ್ನು ಸೇರಿಕೊಂಡರು.











