September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ: ಸಂಘವು ರೂ. 32.31 ಕೋಟಿ ವ್ಯವಹಾರ, ರೂ. 49.24 ಲಕ್ಷ ನಿವ್ವಳ ಲಾಭ

ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆಯು ಸೆ. 7ರಂದು ಕೃಷಿ ಪತ್ತಿನ ಸಹಕಾರಿ ಸಂಘದ ಕನಸು ರೈತ ಸಭಾಭವನದಲ್ಲಿ ಜರುಗಿತು.

ಸಂಘದ ಅಧ್ಯಕ್ಷ ಪಿ ಜಯರಾಜ್ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು 32,31,82,518.48 ವ್ಯವಹಾರ ನಡೆಸಿ, ವಾರ್ಷಿಕ ಹಾಲು ಖರೀದಿ 18,30,216.1 ಲೀಟರ್ , ಒಟ್ಟು ಮೊತ್ತ 6,60,57212, ರೂ. 49,24,391.64 ನಿವ್ವಳ ಲಾಭ, ರೂ. 27,47,646 ಉತ್ಪಾದಕರಿಗೆ ಬೋನಸ್ ನೀಡಿದೆ ಎಂದರು.

ಸುಮಾರು ರೂ. 88000 ವನ್ನು 22 ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ಮೂಲಕ ನೀಡಲಾಯಿತು. ಸದಸ್ಯರ ಕ್ಷೇಮನಿಧಿಯಿಂದ ಸುಮಾರು ರೂ. 95000 ಗಳನ್ನು ಆರ್ಥಿಕ ಸಹಾಯಧನ ನೀಡಲಾಯಿತು.

ಸಂಘದ ಮಾಜಿ ನಿರ್ದೇಶಕ ಸೇಸಪ್ಪ ಸಾಲಿಯಾನ್ ರವರು ಹಾಲಿಗೂ ಪಶು ಆಹಾರದ ದರಕ್ಕೂ ವಿಪರೀತ ಏರುಪೇರು ಇದ್ದು ಕನಿಷ್ಢ ರೂ. 50 ಪ್ರತಿ ಲೀಟರ್ ಗೆ ದೊರೆಯುವ ಬಗ್ಗೆ ಒಕ್ಕೂಟ, ಕರ್ನಾಟಕ ಹಾಲು ಮಹಾಮಂಡಳಿ ಪತ್ರ ಬರೆಯುವಂತೆ ಮಹಾಸಭೆಯಲ್ಲಿ ನಿರ್ಣಹಿಸಬೇಕೆಂದು ಒತ್ತಾಯಿಸಿದರು. ಮಹಾಸಭೆಗೆ ಆಗಮಿಸಿದ ವಾರ್ಷಿಕ ಅವಧಿಯಲ್ಲಿ ಹಾಲು ಪೂರೈಸಿದ ಎಲ್ಲಾ ಸದಸ್ಯರಿಗೆ ಕುಕ್ಕರ್ ನೀಡಲಾಯಿತು. ಹಾಗೂ ಅತೀ ಹೆಚ್ಚು ಹಾಲು ಪೂರೈಸಿದ 10 ಜನ ಸದಸ್ಯರು ಹಾಗೂ 10000 ಲೀಟರ್ ಗಿಂತ ಅಧಿಕ ಹಾಲು ಪೂರೈಸಿದ 25ಜನ ಸದಸ್ಯರನ್ನು ಗೌರವಿಸಲಾಯಿತು.

ಈ ವೇಳೆ ಮುಖ್ಯಮಂತ್ರಿ ಪದಕ ಪಡೆದ ಎಂ ಪ್ರವೀಣ್, ಏಕಾಂಗಿಯಾಗಿ 2-3 ದನಗಳನ್ನು ಸಾಕಿಕೊಂಡು ಹೈನುಗಾರಿಕೆ ನಡೆಸುತ್ತಿರುವ ಶ್ರೀಮತಿ ಸರಸ್ವತಿ ಹಾಗೂ ಹೇರಾಜೆ ಸರಕಾರಿ ಶಾಲೆಯನ್ನು ಆರಂಭಿಸಿದ ಅಬ್ದುಲ್ ರಹಿಮಾನ್ ಪಿ.ಕೆ ರವರನ್ನು ಸನ್ಮಾನಿಸಲಾಯಿತು.

ಶ್ರೀಮತಿ ಪ್ರಮೀಳಾ ಪ್ರಾರ್ಥಿಸಿದರು. ನಿರ್ದೇಶಕ ಜನಾರ್ದನ ಗೌಡ ಸ್ವಾಗತಿಸಿದರು. ಒಕ್ಕೂಟದ ಅನುದಾನಗಳ ಬಗ್ಗೆ ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ವಿವರಿಸಿದರು. ಕಾರ್ಯದರ್ಶಿ ಜಯರಾಜ್ ನಿರೂಪಿಸಿ, ನಿರ್ದೇಶಕ ಪಿ ಕೃಷ್ಣಪ್ಪ ವಂದಿಸಿದರು,

Related posts

ಕನ್ನಡ ರಾಜ್ಯೋತ್ಸವದ ಅಂಗವಾಗಿ ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ಡಿಪ್ಪೊದಲ್ಲಿ ಉಚಿತ ರಕ್ತದೊತ್ತಡ , ಮಧುಮೇಹ ಪರೀಕ್ಷೆ

Suddi Udaya

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ. ಹಿ.ಪ್ರಾ. ಶಾಲೆಯಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ ಆಚರಣೆ

Suddi Udaya

ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ : ಎಸ್‌ ಡಿ ಎಂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಸಾಮೂಹಿಕ ದೀಪಾವಳಿ ಆಚರಣೆ: ಸರ್ವಧರ್ಮೀಯರು ಆಚರಿಸುವ ವಿಶ್ವವಿಖ್ಯಾತ ಹಬ್ಬ ದೀಪಾವಳಿ: ಪ್ರಕಾಶ ಶೆಟ್ಟಿ ನೊಚ್ಚ

Suddi Udaya

ಬೆಳ್ತಂಗಡಿ ಸರ್ಕಲ್ ಇನ್ಸ್‌ ಪೆಕ್ಟರ್ ಆಗಿ ನಾಗೇಶ್ ಕದ್ರಿ ಮರು ನೇಮಕ

Suddi Udaya

ಬೆಳ್ತಂಗಡಿ: ಜಲಪಾತದಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ: ಮೂವರು ಕಾಸರಗೋಡು ಮೂಲದ ಯುವಕರನ್ನು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

Suddi Udaya
error: Content is protected !!