September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ: ಸಂಘವು ರೂ. 32.31 ಕೋಟಿ ವ್ಯವಹಾರ, ರೂ. 49.24 ಲಕ್ಷ ನಿವ್ವಳ ಲಾಭ

ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆಯು ಸೆ. 7ರಂದು ಕೃಷಿ ಪತ್ತಿನ ಸಹಕಾರಿ ಸಂಘದ ಕನಸು ರೈತ ಸಭಾಭವನದಲ್ಲಿ ಜರುಗಿತು.

ಸಂಘದ ಅಧ್ಯಕ್ಷ ಪಿ ಜಯರಾಜ್ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು 32,31,82,518.48 ವ್ಯವಹಾರ ನಡೆಸಿ, ವಾರ್ಷಿಕ ಹಾಲು ಖರೀದಿ 18,30,216.1 ಲೀಟರ್ , ಒಟ್ಟು ಮೊತ್ತ 6,60,57212, ರೂ. 49,24,391.64 ನಿವ್ವಳ ಲಾಭ, ರೂ. 27,47,646 ಉತ್ಪಾದಕರಿಗೆ ಬೋನಸ್ ನೀಡಿದೆ ಎಂದರು.

ಸುಮಾರು ರೂ. 88000 ವನ್ನು 22 ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ಮೂಲಕ ನೀಡಲಾಯಿತು. ಸದಸ್ಯರ ಕ್ಷೇಮನಿಧಿಯಿಂದ ಸುಮಾರು ರೂ. 95000 ಗಳನ್ನು ಆರ್ಥಿಕ ಸಹಾಯಧನ ನೀಡಲಾಯಿತು.

ಸಂಘದ ಮಾಜಿ ನಿರ್ದೇಶಕ ಸೇಸಪ್ಪ ಸಾಲಿಯಾನ್ ರವರು ಹಾಲಿಗೂ ಪಶು ಆಹಾರದ ದರಕ್ಕೂ ವಿಪರೀತ ಏರುಪೇರು ಇದ್ದು ಕನಿಷ್ಢ ರೂ. 50 ಪ್ರತಿ ಲೀಟರ್ ಗೆ ದೊರೆಯುವ ಬಗ್ಗೆ ಒಕ್ಕೂಟ, ಕರ್ನಾಟಕ ಹಾಲು ಮಹಾಮಂಡಳಿ ಪತ್ರ ಬರೆಯುವಂತೆ ಮಹಾಸಭೆಯಲ್ಲಿ ನಿರ್ಣಹಿಸಬೇಕೆಂದು ಒತ್ತಾಯಿಸಿದರು. ಮಹಾಸಭೆಗೆ ಆಗಮಿಸಿದ ವಾರ್ಷಿಕ ಅವಧಿಯಲ್ಲಿ ಹಾಲು ಪೂರೈಸಿದ ಎಲ್ಲಾ ಸದಸ್ಯರಿಗೆ ಕುಕ್ಕರ್ ನೀಡಲಾಯಿತು. ಹಾಗೂ ಅತೀ ಹೆಚ್ಚು ಹಾಲು ಪೂರೈಸಿದ 10 ಜನ ಸದಸ್ಯರು ಹಾಗೂ 10000 ಲೀಟರ್ ಗಿಂತ ಅಧಿಕ ಹಾಲು ಪೂರೈಸಿದ 25ಜನ ಸದಸ್ಯರನ್ನು ಗೌರವಿಸಲಾಯಿತು.

ಈ ವೇಳೆ ಮುಖ್ಯಮಂತ್ರಿ ಪದಕ ಪಡೆದ ಎಂ ಪ್ರವೀಣ್, ಏಕಾಂಗಿಯಾಗಿ 2-3 ದನಗಳನ್ನು ಸಾಕಿಕೊಂಡು ಹೈನುಗಾರಿಕೆ ನಡೆಸುತ್ತಿರುವ ಶ್ರೀಮತಿ ಸರಸ್ವತಿ ಹಾಗೂ ಹೇರಾಜೆ ಸರಕಾರಿ ಶಾಲೆಯನ್ನು ಆರಂಭಿಸಿದ ಅಬ್ದುಲ್ ರಹಿಮಾನ್ ಪಿ.ಕೆ ರವರನ್ನು ಸನ್ಮಾನಿಸಲಾಯಿತು.

ಶ್ರೀಮತಿ ಪ್ರಮೀಳಾ ಪ್ರಾರ್ಥಿಸಿದರು. ನಿರ್ದೇಶಕ ಜನಾರ್ದನ ಗೌಡ ಸ್ವಾಗತಿಸಿದರು. ಒಕ್ಕೂಟದ ಅನುದಾನಗಳ ಬಗ್ಗೆ ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ವಿವರಿಸಿದರು. ಕಾರ್ಯದರ್ಶಿ ಜಯರಾಜ್ ನಿರೂಪಿಸಿ, ನಿರ್ದೇಶಕ ಪಿ ಕೃಷ್ಣಪ್ಪ ವಂದಿಸಿದರು,

Related posts

ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಮಾಸಿಕ ಸಭೆ

Suddi Udaya

ಧರ್ಮಸ್ಥಳ: ‘ಉನ್ನತಿ’ ವಾಣಿಜ್ಯ ಸಂಕೀರ್ಣದಲ್ಲಿ ‘ಆತಿಥ್ಯ ವೆಜ್’ ಶುಭಾರಂಭ

Suddi Udaya

ನಾವೂರು ಗ್ರಾ.ಪಂ. ನಲ್ಲಿ ಸಾಮಾಜಿಕ ಪರಿಶೋಧನೆ ಬಗ್ಗೆ ವಿಶೇಷ ಗ್ರಾಮ ಸಭೆ

Suddi Udaya

ಸೋಣoದೂರು: ಗಾಣದಕೊಟ್ಯ ನಿವಾಸಿ ಅಪ್ಪಿ ನಿಧನ

Suddi Udaya

ಇಂದಬೆಟ್ಟು ಆರೋಗ್ಯ ಕೇಂದ್ರದಲ್ಲೊಂದು ಅಚ್ಚರಿ; ಆಸ್ಪತ್ರೆ ಬಾಗಿಲು ಹಾಕದೆ ಹೋದ ಸಿಬ್ಬಂದಿಗಳು

Suddi Udaya

9/11 ಪ್ರಮಾಣ ಪತ್ರವನ್ನು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿರುವ ಆದೇಶವನ್ನು ರದ್ದುಪಡಿಸಿ ಗ್ರಾ.ಪಂ. ನಲ್ಲಿಯೇ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನವಿ

Suddi Udaya
error: Content is protected !!