23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶುಭಾರಂಭ

ಧರ್ಮಸ್ಥಳ: ‘ಉನ್ನತಿ’ ವಾಣಿಜ್ಯ ಸಂಕೀರ್ಣದಲ್ಲಿ ‘ಆತಿಥ್ಯ ವೆಜ್’ ಶುಭಾರಂಭ

ಧರ್ಮಸ್ಥಳ : ನೂತನವಾಗಿ ಉದ್ಘಾಟನೆಗೊಂಡ ಉನ್ನತಿ ವಾಣಿಜ್ಯ ಸಂಕೀರ್ಣದಲ್ಲಿ ‘ಆತಿಥ್ಯ ವೆಜ್ ‘ ಇದರ ಉದ್ಘಾಟನಾ ಸಮಾರಂಭವು ಜು.16 ರಂದು ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಮಣೆಗಾರರು ವಸಂತ ಮಂಜಿತ್ತಾಯ ದೀಪ ಬೆಳಗಿಸಿ ಮಾತನಾಡಿ ಧರ್ಮಸ್ಥಳ ಪರಿಸರಕ್ಕೆ ‘ಆದಿತ್ಯ ವೆಜ್’ ಶೋಭೆಯನ್ನು ತಂದಿದೆ. ಗ್ರಾಹಕರಿಗೆ ಶುಚಿ – ರುಚಿಯಾದಂತಹ ಆತಿಥ್ಯವನ್ನು ನೀಡಿ. ಪಾಲುದಾರಿಕೆಯ ನಿಮ್ಮ ಉದ್ಯಮ ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸಿದರು.

ಧರ್ಮಸ್ಥಳ ಪ್ರಾ.ಕೃ.ಪ.ಸ. ಅಧ್ಯಕ್ಷ ಪ್ರೀತಮ್ ಡಿ. ಮಾತನಾಡಿ ನೂತನವಾಗಿ ಉದ್ಘಾಟನೆಗೊಂಡ ಉನ್ನತಿ ಕಟ್ಟಡಕ್ಕೆ ‘ಆತಿಥ್ಯ ವೆಜ್’ ಇನ್ನಷ್ಟು ಶೋಭೆಯನ್ನು ತಂದಿದೆ. ಕ್ಷೇತ್ರಕ್ಕೆ ಬರುವಂತಹ ಭಕ್ತರು, ಪ್ರವಾಸಿಗರು ಹಾಗೂ ಸ್ಥಳೀಯರು ಆತಿಥ್ಯ ವೆಜ್ ಗೆ ಬರುವಂತಾಗಲಿ. ಉದ್ಯಮ ಉತ್ತಮ ಅಭಿವೃದ್ಧಿಯಾಗಲಿ ಎಂದು ಶುಭಹಾರೈಸಿದರು.

ವೇದಿಕೆಯಲ್ಲಿ ಧರ್ಮಸ್ಥಳ ಪ್ರಾ.ಕೃ.ಪ.ಸ. ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ಧರ್ಮಸ್ಥಳ ಪ್ರಾ.ಕೃ.ಪ.ಸ. ವ್ಯವಸ್ಥಾಪಕ ಎಂ. ಸತೀಶ್ ಹೊಳ್ಳ, ಅಖಿಲೇಶ್ ಕುಮಾರ್ ಎಂ, ರವಿಕುಮಾರ್, ಹರ್ಷಿತ್ ಕುಮಾರ್ ಜೈನ್, ಮುರಳೀದರದಾಸ್, ಧರ್ಮಸ್ಥಳ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ದೇವಸ್ಯ ಟಿ.ವಿ. ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾಲಕರಾದ ನಿಶಾಂತ್ ಹೆಬ್ಬಾರ್ ಮತ್ತು ವಿನಾಯಕ್ ಹಾಗೂ ಬಂಧು-ಮಿತ್ರರು ಉಪಸ್ಥಿತರಿದ್ದರು.

ರೇಖಾ ಪ್ರಶಾಂತ್ ಹೆಬ್ಬಾರ್ ಪ್ರಾರ್ಥಿಸಿದರು. ಮೋಹನ್ ಕೆ. ಧರ್ಮಸ್ಥಳ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Related posts

ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶ್ರೀ ವಿಘ್ನೇಶ್ವರ ಭಜನಾ ಮಂದಿರದಿಂದ ಪಾದಯಾತ್ರೆ

Suddi Udaya

ಕೊಕ್ರಾಡಿ: ಅಕ್ರಮ ಮರಳು ಸಾಗಟ: ವೇಣೂರು ಪೊಲೀಸರಿಂದ ದಾಳಿ: ಆರೋಪಿ ಸಹಿತ ಟಿಪ್ಪರ್ ಲಾರಿ ವಶ

Suddi Udaya

ತಣ್ಣೀರುಪಂತ : ಅಡಿಕೆ ಗೋದಾಮಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು: ರೂ. 1.35ಲಕ್ಷ ಮೌಲ್ಯದ ಅಡಿಕೆ ಕಳ್ಳತನ

Suddi Udaya

ಡಾ. ಪ್ರಸನ್ನಕುಮಾರ ಐತಾಳರಿಗೆ “ಎ. ಶಾಮ ರಾವ್ ಸ್ಮಾರಕ ಉತ್ತಮ ಶಿಕ್ಷಕ” ಪ್ರಶಸ್ತಿ

Suddi Udaya

ರಸ್ತೆಯಲ್ಲೇ ಹರಿದ ಮಳೆ ನೀರು: ಶಾಸಕ ಹರೀಶ್ ಪೂಂಜರಿಂದ ತುರ್ತು ಸ್ಪಂದನೆ , ಚರಂಡಿ ದುರಸ್ತಿ

Suddi Udaya

ಧರ್ಮಸ್ಥಳ ಎಸ್‌ಡಿಎಂ ಆಂ.ಮಾ. ಶಾಲೆಯ ಕಬ್ ಹಾಗೂ ಬುಲ್ ಬುಲ್ ವಿದ್ಯಾರ್ಥಿಗಳಿಂದ ಪರಿಸರ ದಿನಾಚರಣೆ

Suddi Udaya
error: Content is protected !!