ಮುಂಡಾಜೆ: ರೋಟರಿ ಕ್ಲಬ್ ಬೆಳ್ತಂಗಡಿಯ ಅಂಗ ಸಂಸ್ಥೆಯಾದ ರೋಟರಿ ಸಮುದಾಯ ದಳ (RCC) ಇದರ ಮುಂಡಾಜೆ ಘಟಕ ಮತ್ತು ಕಕ್ಕಿಂಜೆ ಘಟಕದ ಪದಾಧಿಕಾರಿಗಳ ಆಯ್ಕೆ ಉಜಿರೆಯ ಓಶನ್ ಪರ್ಲ್ ನಲ್ಲಿ ಸೆ.06 ರಂದು ನಡೆಯಿತು.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೊ. ಪ್ರೊ. ಪ್ರಕಾಶ ಪ್ರಭು ರವರ ಅಧ್ಯಕ್ಷತೆಯಲ್ಲಿ ಮುಂಡಾಜೆ ಆರ್ ಸಿ ಸಿಯ ಅಧ್ಯಕ್ಷರಾಗಿ ಪಿ ಸಿ ಸೆಬಾಸ್ಟಿಯನ್ , ಕಾರ್ಯದರ್ಶಿಯಾಗಿ ರಾಕೇಶ್, ಕೋಶಾಧಿಕಾರಿಯಾಗಿ ರಂಗನಾಥ ಹೆಬ್ಬಾರ್ ಆಯ್ಕೆಯಾದರು.
ಕಕ್ಕಿಂಜೆ ಆರ್ ಸಿ ಸಿಯ ಅಧ್ಯಕ್ಷರಾಗಿ ಶ್ರೀಮತಿ ಶಾರದ ಎ, ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಗೌಡ, ಕೋಶಾಧಿಕಾರಿಯಾಗಿ ಪ್ರಾನ್ಸಿಸ್ ವಿ ಪಿ ಆಯ್ಕೆ ಆದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಬಿ ಓ ಡಿ ಸದಸ್ಯ ರೋ. ಪ್ರವೀಣ ಗೋರೆ, ಆ್ಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷೆ ಆ್ಯನ್ ಡಾ. ಅನಿತಾ ದಯಾಕರ್, ಆ್ಯನ್ ಗೀತಾ ಪ್ರಭು, ಮುಂಡಾಜೆಯ ವಿಘ್ನೇಶ ಪ್ರಭು, ಗುರುರಾಜ್ ಎಸ್, ಕಕ್ಕಿಂಜೆಯ ಶ್ರೀನಿವಾಸ್ ಕುಲಾಲ್, ಪ್ರಸಾದ್ ಕೆ ವೈ, ಓಬಯ್ಯ ಗೌಡ, ಶ್ರೀಮತಿ ಸವಿತಾ ಕುಲಾಲ್, ಶ್ರೀಮತಿ ಮೋಹಿನಿ ಭಾಗವಹಿಸಿದರು.











