September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ನಲ್ಲಿ ಸಂಭ್ರಮದ ಮೊಂತಿ (ತೆನೆ ) ಹಬ್ಬ

ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ನಲ್ಲಿ ಇಂದು ಕನ್ಯಾ ಮರಿಯಮ್ಮರವರ ಹುಟ್ಟು ಹಬ್ಬವಾದ ಮೊಂತಿ ಹಬ್ಬ ( ತೆನೆ ಹಬ್ಬ) ವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.


ಬೆಳ್ತಂಗಡಿ ಚರ್ಚ್ ಬಸ್ ಸ್ಟಾಂಡ್ ಸರ್ವಿಸ್ ರೋಡ್ ನಲ್ಲಿ ಹಿಮಾಲಯ ಚಿಕನ್ ಫಾರ್ಮ್ ಬಳಿ ಹಾಕಲಾದ ಭವ್ಯ ಮಂಟಪದಲ್ಲಿ ಕನ್ಯಾ ಮರಿಯಮ್ಮರವರ ಪ್ರಾರ್ಥನೆ ಹಾಗೂ ತೆನೆಯ ಆಶೀರ್ವಚನ ನಡೆಯಿತು.


ಚರ್ಚಿನ ಪ್ರದಾನ ಧರ್ಮ ಗುರುಗಳಾದ ಅತಿ ವಂದನೀಯ ಫಾ. ವಾಲ್ಟರ್ ಡಿಮೆಲ್ಲೋ, ವಂದನೀಯ ಫಾ. ಕ್ಲಿಫರ್ಡ್ ಪಿಂಟೊ, ಅತಿಥಿ ಗುರುಗಳಾದ ವo. ಫಾ. ಕಿರಣ್ ಲೋಬೊ ಹಾಗು ವo. ಫಾ. ಆಲ್ವಿನ್ ಮಾಡ್ತಾರವರು ಹಾಜರಿದ್ದರು. ಫಾ. ಕ್ಲಿಫರ್ಡ್ ಪಿಂಟೊರವರು ಮೊಂತಿ ಹಬ್ಬದ ದಿನದ ಮಹತ್ವವನ್ನು ತಿಳಿಸಿದರು.


ಫಾ. ಕಿರಣ್ ಲೋಬೊರವರು ಹೊಸ ಭತ್ತದ ತೆನೆಯನ್ನು ಆಶೀರ್ವದಿಸಿ ಪ್ರಧಾನ ಗುರುಗಳಾದ ಫಾ. ವಾಲ್ಟರ್ ಡಿ’ಮೆಲ್ಲೊ ಪ್ರಾರ್ಥನೆ ನಡೆಸಿಕೊಟ್ಟರು.
ನಂತರ ಭವ್ಯ ಮೆರವಣಿಗೆ ಚರ್ಚ್ ತನಕ ನಡೆಯಿತು. ಚರ್ಚ್ ನಲ್ಲಿ ಸಂಭ್ರಮದ ದಿವ್ಯ ಬಲಿ ಪೂಜೆ, ಹೊಸ ತೆನೆ ಚರ್ಚಿನ ಪ್ರತಿ ಕುಟುಂಬಕ್ಕೆ ವಾಳೆಯ ಗುರಿಕಾರರು ವಿತರಿಸಿದರು. ಕನ್ಯಾ ಮರಿಯಮ್ಮರಿಗೆ ಹೂಗಳನ್ನು ತಂದು ಅರ್ಪಿಸಿದ ಮಕ್ಕಳಿಗೆ ಕಬ್ಬು ಹಾಗೂ ಬಂದಂತಹ ಎಲ್ಲರಿಗೆ ಸಿಹಿಯನ್ನು ವಿತರಿಸಲಾಯಿತು.
ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೊ, ಪಾಲನ ಮಂಡಳಿಯ ಸದಸ್ಯರು ಹಾಗೂ 18 ವಾಳೆಯ ಗುರಿಕಾರರು ಸಹಕರಿಸಿದರು.

Related posts

ಮೇಲಂತಬೆಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ ಸುರೇಶ ಗೌಡ್ರ ರವರಿಗೆ ಸನ್ಮಾನ

Suddi Udaya

ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನಾಗ ಬನದಲ್ಲಿ ದೇವರಿಗೆ ನಾಗತಂಬಿಲ ಹಾಗೂ ವಿಶೇಷ ಪೂಜೆ

Suddi Udaya

ತಣ್ಣೀರುಪಂತ: ಕುದ್ರಡ್ಕ ನಿವಾಸಿ ಗಿರಿಜಾ ನಿಧನ

Suddi Udaya

ಯೋಗಾಸನ ಸ್ಪರ್ಧೆ: ವಾಣಿ ಪ.ಪೂ. ಕಾಲೇಜಿನ ಮೋಹಿತ್ ತೃತೀಯ ಸ್ಥಾನ

Suddi Udaya

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಬೆಳ್ತಂಗಡಿ ಚಚ್೯ಕ್ರಾಸ್ ಬಳಿ ಹೊಸ ರಸ್ತೆಯಲ್ಲಿ ನಿಂತ ಮಳೆ ನೀರು

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂ.ಮಾ. ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

Suddi Udaya
error: Content is protected !!